Home / ಕವನ / ಕವಿತೆ / ಕೆಂಪು ಬಸ್ಸು ನಾ…

ಕೆಂಪು ಬಸ್ಸು ನಾ…

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು?
ಸರ್ವರಿಗೆಂದೆ ತಂಪು;
ಒನಪು, ವೈಯಾರ, ಥಳಕು ಬಳಕು ಕೈಕುಲುಕು!
ಹಳ್ಳ ದಿನ್ನಿ ಊರು ಕೇರಿ ಹಾರಿ;
ಹಗಲಿರುಳೂ ಸಾಗಿ,
ಚಳಿ ಮಳೆ ಗಾಳಿಗೆ ಮಾಗಿ,
ನಿತ್ಯ ದುಡಿವೆ ನೋಡಿ.
ಆಸೆ ನಿರಾಸೆ ಸುಖ ದುಃಖಗಳ ಹೊದ್ದು,
ಮದುವೆ ಮುಂಜಿ ಮಸಣಕಂಜಿ
ಶುಭ ಲಾಭ ನಷ್ಟ, ಟೀಕೆ ಟಿಪ್ಪಣಿ ಲೆಕ್ಕಿಸೆ
ನಿಜ ಸೇವೆ ಸ್ವರ್ಗ ಸಮಾನ!
ಬಡವ ಬಲ್ಲಿದ, ಭೇದವಿಲ್ಲದ,
ವಿದ್ಯಾವಂತ ಅವಿದ್ಯಾವಂತ
ಸಣ್ಣ ದೊಡ್ಡವ ಎಣಿಸದೆ,
“ಈಶ ಸೇವೆ, ದೇಶ ಸೇವೆ,
ಸಾರಿಗೆ ಸೇವೆ, ನೈಜ ಸೇವೆಂಬ”
ಮಂತ್ರ ಜಪಿಸುತ್ತಾ…
ನಿತ್ಯ ನಿತ್ಯ ಲಕ್ಷ ಜನರ ಹೊತ್ತು,
ಅವರವರ ಕನಸು, ಮನಸ್ಸಿಗೆ ಸ್ಪಂಧಿಸಿ,
ನಿರೀಕ್ಷೆ ಪರೀಕ್ಷೆಗೆ ತವಕಿಸಿ,
ನನ್ನ ದಾರಿ ನಿಮಗೆ ಶ್ರೀ ರಕ್ಷೆ,
ನನ್ನ ನಂಬಿ, ತಬ್ಬಿ ಹಬ್ಬಿ ಕೊಬ್ಬಿ ಬೆಳೆದವರೆ,
ಗದ್ದುಗೆ ಹಿಡಿದವರೆ,
ಪಟ್ಟಣವ ಕಂಡು,
ಡಿಗ್ರಿಗಳ ಪಡೆದು,
ಏನೆಲ್ಲ ಆದವರಿಗೆ,
ಏಣಿಯಾದವ!
ನನ್ನೆಲ್ಲ ಕಥೆ ವ್ಯಥೆಗೆ ೫೦ರ ಪ್ರಾಯ!
ತಾಯಿ ಭಾರತಿಗೆ ಎರಡನೆ ದೊಡ್ಡಕೂಸು.
ಕನ್ನಡದ ಕಂದ-
ರಾಜ್ಯ ರಾಜ್ಯಕ್ಕೆ ಸಂಚರಿಸಿ, ಕೋಟಿ ಕೋಟಿ… ರೊಕ್ಕ ಒಪ್ಪಿಸಿ,
ಕೀರ್ತಿ ಪತಾಕೆ ಹಾರಿಸಿ…!
ನಿಲ್ದಾಣ, ಡಿಪೋ, ಪಾಸು, ರಿಯಾಯಿತಿ, ಆಶ್ರಯ, ಕಾಮಧೇನು,
ಏನೆಲ್ಲ ಹಿಗ್ಗಿ ಹೀರೆಕಾಯಿ ಆದವ
ಎಳೆಯ ಗೆಳೆಯರ, ಶಾಲೆ ಬಾಲಕರ,
ಸ್ವಾತಂತ್ರ್‍ಯಯೋಧರ, ವೃದ್ಧ
ಆಬಾಲರ ಎತ್ತಿ ಮುದ್ದಾಡಿ,
ಬಲು ಎತ್ತರಕೆ ಬೆಳೆಸಿ,
ಕನಸುಗಳ ಅರಳಿಸಿ
ನಿಮ್ಮ ಬೇಕು, ಬಯಕೆಗಳಿಗೆ ನಿತ್ಯ ಉಸಿರಾಗಿ, ಬಸಿರಾಗಿ,
ಏನೆಲ್ಲ ಹೆಸರಾಗಿ, ಹಸಿರಾಗಿ,
ಕಿಸಿ ಕಿಸಿ ನಕ್ಕು ಕಸಿಯಾದವ
ವರ್ಷ ವರ್ಷಕೂ ಹರ್ಷದಿ ನಿರೀಕ್ಷೆಗಳ ತೂಗು ಸೇತುವೆ ಕಟ್ಟಿ,
ಹೊಳೆ ದಾಟಿಸಿದ ಅಂಬಿಗ
ಹೊಳೆ ದಾಟಿದ ನೀವೆಲ್ಲ.
ಆಕಾಶಕ್ಕೆ ಕೈ ಹಬ್ಬಿ ಬೂಟುಗಾಲಲಿ
ನನ್ನ ಒದ್ದರೂ;
ಒಂದೇ ಮುಗುಳ್ನಗೆಗೆ ಅದೇ ರಾಗ-
“ನಿಮ್ಮ ದೇವರೆಂದು” ‘ಪ್ರಭು’ ‘ಅನ್ನದಾತ’ ‘ಮಾಲೀಕರೆಂದು’
ಅಪ್ಪಿ ಮುದ್ದಿಡುವ, ಒಪ್ಪಿ ಓಡಾಡುವ,
ವಿಲ ವಿಲ ಒದ್ದಾಡುವ,
ಮುಲು ಮುಲು ಮುಲುಗುಟ್ಟುವ,
ಕೆಂಪು ಬಸ್ಸು ನಾ!… ನಿಮ್ಮ ಬಸ್ಸು ನಾ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...