Home / ಕವನ / ಕವಿತೆ / ನನ್ನಮ್ಮ

ನನ್ನಮ್ಮ

ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ!
ನವ ನವ ಮಾಸಗಳೋ… ಸ್ವರ್ಗ ಸೋಪಾನವೇ…
ನವ ನವ ವಸಂತದ, ಚೈತ್ರ ಯಾತ್ರೆ…
ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ!
ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು…
ಸುಖ, ಶಾಂತಿ, ನೆಮ್ಮದಿಗೆ, ಯೋಗಾಯೋಗ ನಿದ್ರಾ ತಾಣ!
ಇಂಥಾ ಯೋಗಾ ಯೋಗಾ ದೇವತೆಗಳಿಗುಂಟೇ??


ಬಲು ಬಲು ದುಃಖಮಯ…
ಈ ನೆಲ ಸೋಂಕಿದಂದನಿಂದಲೇ…
ತೆರೆದ ಬಾಯಿ, ಮುಚ್ಚಿಲ್ಲ.
ಮುಗಿಯದ ಗೋಳಿದು!
ಮರುಗಟ್ಟಿದೆ ಎಷ್ಟು ಅತ್ತರೂ ತಿರುಗಿ ನೋಡದಾಮಂದಿ!
ರಾತ್ರಿಯಿಟ್ಟು ಹಗಲು ಭವಣೆ ತೀರಿತು.


‘ಈ ನರ ಜನ್ಮ, ತಾಳಿದ ಬಳಿಕ, ಏನೆಲ್ಲ ಇದ್ದದ್ದೇ…’
ಎಂದು… ಎರಡೂ ಸ್ವಾಟ್ಟಿಗೆಟ್ಟಿ, ತಲೆ ತಲೆಗೇ ಮೋಟಿ,
ಊರಹಂದಿಯಂಗೆ ‘ಅಡ್ರುಗ್’ ಎನ್ನುವ, ಮಂದಿ ಮಧ್ಯೆ
ನನ್ನಮ್ಮ ದುರುಗವ್ವ ನೆನಪಾಗುವಳು! ಸಹಜವಾಗಿಯೇ…
ಬಿಸಿಲು ಬೆಳದಿಂಗಳಾಗುವಳು ಅಮ್ಮ…
ತಾವರೆ ತಿಳಿಗೊಳದಂತೇ…
ಅಮ್ಮ ಅಮ್ಮಗಲ್ಲದೆ, ಬೊಮ್ಮಗೆ ಸಾಧ್ಯನೇ?!
ಬೆಟ್ಟದಶ್ಟು, ಕಶ್ಟ ಹೊತ್ತ, ಭೂಮಿ ನೀ…
ಯಾವ ಋಣದ, ಮಣ ಭಾರ ನಾಽ…
ಒದ್ದೆ ಕಂಗಳ, ಮುದ್ದು ಮಾಡಿ, ಮಂತ್ರಿಸಿಬಿಟ್ಟೆ!


‘ಓ… ದೇವರೇ! ಸಾಕಿನ್ನು ಸಾಕು!
ಈ ಕ್ಷಣ ನನ್ನುಸಿರನ್ನೊಮ್ಮೆ ನಿಲ್ಲಿಸಿ ಬಿಡು!
ನೀ ಬಂದು ಪುಣ್ಯವನ್ನೆಲ್ಲ ಕಟ್ಟಿಕೋ…’
ಮೇಲಿಂದಾ ಮೇಲೆ, ನಾ… ಅಂಗಲಾಚುತ್ತೇನೆ! ಈ ಜನರ ತಂತ್ರ, ಕುತಂತ್ರ, ಕುಬುದ್ಧಿಗೆ ತಲೆರೋಸಿಗೆ ಬಂದಿದೆ!
ನಿತ್ಯ ಸಂತೆ ಗದ್ದಲದಲಿ ನನ್ನ ಅಳು, ಕೂಗು, ಕೇಳಿಸಿಕೊಳ್ಳುವವರ್‍ಯಾರು??
ಇಲ್ಲಿ ನಗುವ ಒತ್ತಿಟ್ಟು; ಅಳುವೆಂಬ ವಸ್ತು ಕೊಳ್ಳುತ್ತಿದ್ದಾರೆ!
ನೀರ ಮೇಲಿನ ಗುಳ್ಳೆಗೆ, ಬಾಸಿಂಗ ಕಟ್ಟುತ್ತಾರೆ.
ಈ ಜನ ಚಿನ್ನ
ಈ ನೆಲ ಅನ್ನ
ಈ ಜಲ ರನ್ನ
ಅನ್ನೊದೆಲ್ಲ ಗಿಮಿಕ್!!


ಇಲ್ಲಿ ಜನರಿಲ್ಲಿ… ಸಳ್ಳಿಡಿದು, ಗುಡಿ ಗುಡಿಸಿ, ಗುಡ್ಡೆ ಹಾಕುವುದು ನೋಡಿದರೆ,
ಈ ದೇಶನಾ ಮಸಾಲೆ ಮಾಡಿ, ತಿನ್ನಾದೊಂದೇ ಬಾಕಿ!
ಈ ನೆಲ, ಜಲ, ಜನರ ಒಡಲು, ಬಗೆ ಬಗೆದು, ಬರಿದು ಮಾಡುತ್ತಾ,
ತಮ್ಮ ತಾವು ಮಾರಿಕೊಳ್ಳುವ, ಕೊಂಡುಕೊಳ್ಳುವುದ ಕಂಡರೆ…
ಅಸಹ್ಯ ಹುಟ್ಟುವುದು!
ಬದುಕಿಲ್ಲಿ… ನನ್ನ ಮುಟ್ಟದ ಗಾಳಿ.
ಎಲ್ಲ ಮುಗಿದ ಮೇಲೆ, ಉಳಿಯಲೇನಿದೆ??
ಖಾಲಿ ಕೊಡಗಳೊಂದಿಗೆ ಸಂಸಾರ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...