Home / ಕವನ / ಕವಿತೆ / ಸಂತೆಯೊಳಗಿಳಿದಿದ್ದೇವೆ

ಸಂತೆಯೊಳಗಿಳಿದಿದ್ದೇವೆ

ಆಗಲೇ ಇಟ್ಟ ನೂರಾರು
ಹೆಜ್ಜೆಗಳ ಮೇಲೆ
ನಾವೂ ಹೆಜ್ಜೆ ಇಟ್ಟು
ಸಂತೆಯೊಳಗಿಳಿದಿದ್ದೇವೆ
ಗೊಡ್ಡು ಸಂಪ್ರದಾಯಗಳ ಗಂಟು
ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು
ಅಜ್ಜನ ಕಂಬಳಿ ಎಳೆದು ತುಳಿದು
ಸಂತೆಯೊಳಗಿಳಿದಿದ್ದೇವೆ.
ಹೆಜ್ಜೆಯ ಮೇಲೆ ಹೆಜ್ಜೆ
ಇಡುತ್ತಲೇ ಬಂದಿರುವ ನೀವು
ಕ್ಷುಲ್ಲಕ ವಿಚಾರಗಳ
ಪ್ರಕ್ಷುಬ್ದ ವಾತಾವರಣದ
ಸಂತೆಯಲ್ಲಿ ಬೇಕು ಬೇಡದಕ್ಕೆಲ್ಲ
ಕಣ್ಣು ಹಾಯಿಸುತ್ತ ಸತ್ವವನ್ನೇ
ಮರೆತ ತೊಂಡರಗೊಳಿಗಳಾಗಿ ತಿರುಗಿ
ಬೇಕೆಂದಿದ್ದೆಲ್ಲಾ ಬಯಸಿದಾಗ,
ಸಂತೆಯಲ್ಲಿಟ್ಟು ವಸ್ತುವೇ ನಿನಗೆ
ಹಣ ಕೊಟ್ಟು ನಿನ್ನಲ್ಲಿ ಬಿಕರಿಯಾಗುತ್ತದೆ
ಹಣವೂ ಕೊಟ್ಟು ತನ್ನನ್ನೂ ಕೊಟ್ಟಿರುವ
ಜೀವಂತ ಸಂತೆಯು
ನೀವು ಅಟ್ಟಹಾಸಗೈದು
ಮನೆಗೊಯ್ದಾಗ….
ಸಂತೆಯ ಈ ಬೊಂಬೆ
ಗಿಳಿಯಾಗಿ, ಆಡಿಸಿದಂತೆ ಆಡುವ
ದೊಂಬರಾಟದ ಹುಡುಗಿಯಾಗಿ
ಮುದುಡಿಕೊಳ್ಳುವಾಗ,
ನಿಮ್ಮ ರಾತ್ರಿಗಳ ವಿಕೃತ
ಕಾಮನೆಗಳು ತಲೆ ಬುಡವಿಲ್ಲದೇ
ಬಿಚ್ಚಿಕೊಳ್ಳುತ್ತವೆ.
ಬಿಕರಿಯಾದವರ ರಾತ್ರಿಗಳು ತಮ್ಮ
ಆಶಾವಾದಿ, ಕ್ರಾಂತಿವಾದಿ ಆದರ್ಶಗಳನ್ನೆಲ್ಲ
ಮೂಟೆಕಟ್ಟಿ ಜಲಪಾತಕ್ಕೆ
ತಳ್ಳುತ್ತಲೇ ಇದ್ದಾರೆ.
ಆಕಾಶದೆತ್ತರಕ್ಕೇರಿ…. ಸಮುದ್ರದಾಳಕ್ಕಿಳಿದು
ಜಗದಗಲ ಪರಿಚಯಿಸಿಕೊಂಡ ನಾವು
ನಮ್ಮ ಸಮಾನತೆಗೆ
ನಮ್ಮ ಭಾವನೆಗಳಿಗೆ ಸ್ಪಂದಿಸುವ
ನಮ್ಮೆತ್ತರಕ್ಕೇರುವ ನಿಮ್ಮನ್ನು
ಆರಿಸಿಕೊಳ್ಳಲು ಇಂದು
ಪೇಟೆಗೆ ಬಂದಿದ್ದೇವೆ.
ನಿಮ್ಮ ಮೊದಲ ಹೆಜ್ಜೆಗಳೆಲ್ಲ
ಸವೆದು ಹೋಗುವಂತೆ ಮಾಡಿ
ಅವುಗಳ ಮೇಲೀಗ ಕಾಂಕ್ರೀಟು ಹಾಕಿ
ಮೊನಚು ಚಪ್ಪಲಿಗಳು ಹಾಕಿಕೊಂಡು
ಸಂತೆಯೊಳಗಿಳಿದಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...