Home / ಕವನ / ಕವಿತೆ / ಪ್ಯಾರಿ ನಗರ

ಪ್ಯಾರಿ ನಗರ

ಫ್ರೆಂಚ್ ಕ್ರಾಂತಿಯ
ಅರುಸೊತ್ತಿಗೆಗಳ ವೈಭವದ ದಾಖಲೆಗಳ
ಸ್ತಂಭಗಳಡಿಯಲಿ ಭೀಭತ್ಸ ರಕ್ತದ
ವಾಸನೆಯ ಗೊರಲಿಗಳು
ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ.
ಚಕ್ರವರ್ತಿಗಳ ದರ್ಪ, ಅರಮನೆ
ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ
ಐಫಲ್ ಟವರ್‌ದ ತುತ್ತ ತುದಿಗೇರುತ್ತೇನೆ.
ಮೋನಾಲಿಸಾ ನಗುತ್ತಾಳೆ
ಯಾರಿವಳು ಎಂದು ದಿಟ್ಟಿಸಿ ನೋಡುವಾಗ
ಸೊಕ್ಕಿನ ಮೃದು ಹೆಣ್ಣಾಗಿ ಗಂಭೀರವಾಗುತ್ತಾಳೆ.
ಚರ್ಚಿನ ಪಾದ್ರಿಗಳು ಬೆಚ್ಚನೆಯ ಉದ್ದನೆಯ
ಬಟ್ಟೆಯೊಳಗೆ, ತಿಳಿ ಬೆಳಕಿನ ಕಿರಣಗಳೊಳಗೆ
ಮಾನವೀಯತೆಯ ಮೇರುತ್ವ ಹೇಳುತ್ತಿದ್ದರೆ
ಕಲಾಕಾರರು ನೆಳಲು ಬೆಳಕಿನೊಳಗೆ
ಅರೆನಗ್ನ ಚಿತ್ರಗಳ. ನಿಸರ್ಗಗಳ
ಕಲ್ಪನಾತೀತ ಮಿಂಚುಗಳನ್ನು ಹರೆಯಿಸಿದ್ದಾರೆ.
ಝಗ ಝಗಿಸುವ ‘ಶ್ಯಾಸ್’
ಫ್ಯಾಶನ್‌ಹೌಸ್ ಸುಗಂಧ ಹೊಳೆಯೊಂದಿಗೆ
ತೇಲುವ ಸೀಮೋಲ್ಲಂಘನ
ವಿಜ್ಞಾನ ತಂತ್ರಜ್ಞಾನಗಳಿರುವಾಗ
ಮತ್ತೊಂದೆಡೆ ಜಿಗುಪ್ಸಿಸುವ
ಕ್ಯಾಬರೆಗಳಲ್ಲಿ ಮೈಮರೆತ
ಜನರನ್ನು ನೋಡಿ ನಮ್ಮ
ಮುದಿ ಯಕ್ಷಗಂಧರ್ವರೂ
ಮೇನಕಾ ತಿಲೋತ್ತಮೆಯರೂ
ನಾಚಿ ಹೊಟ್ಟೆ ಉರಿಸಿಕೊಳ್ಳುತ್ತಾರೇನೋ –

ಬೆಳಕಿಗೆ ಕರಗದ ಬಜಾರುಗಳು ನೋಡಿ
ಸುಸ್ತಾದ ಸೂರ್ಯ
ತಾನೂ ನಾಚಿಕೆ ಬಿಟ್ಟು
ಗಿಡಮರಗಳ ಸಂದಿಗೊಂದಿಗಳೊಳಗಿಂದ ಹಾಯ್ದು
ಕನ್ನೆಯರ ಕೆನ್ನೆ ಕಚ್ಚುತ್ತಾ
‘ತೆರಿ ಪ್ಯಾರಿ ಪ್ಯಾರಿ ಪ್ಯಾರಿಸ್ ಸೂರತ್ ಕೋ’
ಎಂದು ಕಣ್ಣುಹೊಡೆದು
ಸಿಳ್ಳು ಹೊಡೆಯುತ್ತ ತಿರುಗುತ್ತಿದ್ದಾನೆ.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...