Home / ಲೇಖನ / ಇತರೆ / ಸುಳ್ಳು ಹೇಳುವ ಕಲೆ – ಡಬ್ಬಲ್ ಜಾದು

ಸುಳ್ಳು ಹೇಳುವ ಕಲೆ – ಡಬ್ಬಲ್ ಜಾದು

ಸುಳ್ಳು ಹೇಳುವದೊಂದು ಕಲೆ ಬಹಳ ಪುರಾತನವಾದುದು. ಪುರಾತನ ವಸ್ತುಗಳಲ್ಲಿ ಅಭಿಮಾನಪಡುವ ನಾವು ಈ ಕಲೆಯ ವಿಷಯವಾಗಿಯೂ ಅಭಿಮಾನಪಡಬೇಕು!
  * * * *
ಈ ಕಲೆಯು ಜಗತ್ತಿನಲ್ಲಿ ಅದೃಶ್ಯವಾಗಿಲ್ಲ; ಇದು ನಮ್ಮ ಸುದೈವ. ಇನ್ನೂ ಈ ಕಲೆಯಲ್ಲಿ ಪರಿಣತರಾದವರು ಜಗತ್ತಿನಲ್ಲಿ ಇರುವರು; ಇದು ನಮ್ಮ ಭಾಗ್ಯವು. ಸದ್ಯಕ್ಕೆ ಸುಳ್ಳಿಗೆ ಬೇರೆ ಬೇರೆ ಹೆಸರುಗಳಿವೆ: ಸುಳ್ಳು, ಖೊಟ್ಟಿ, ಗಫಾ, ಗುಳಿಗೆ, ಅಸತ್ಯ, ಚಾಣಿಕ್ಯತನ ಮೊದಲಾದವುಗಳು.
  * * * *
ಕತ್ತಲೆಯಿಂದ ಬೆಳಕಿಗೆ ಮಹತ್ವ; ಕುರೂಪಿಗಳಿಂದ ಚಲುವರಿಗೆ ಮಹತ್ವ; ಹಾಗೆಯೇ ಸುಳ್ಳಿನಿಂದ ಸತ್ಯಕ್ಕೆ ಮಹತ್ವ ! ಆದ್ದರಿಂದ ಸತ್ಯದ ತೇಜವು ಪ್ರಜ್ವಲಿಸಬೇಕಾದರೆ ಸುಳ್ಳಿನ ಕತ್ತಲೆಯು ಬೇಕೇಬೇಕು. ಸತ್ಯದ ಸೌಂದರ್ಯವು ಪ್ರತ್ಯಕ್ಷವಾಗಬೇಕಾದರೆ ಸುಳ್ಳಿನ ಕುರೂಪವು ಗೋಚರವಾಗಬೇಕು. “ಸತ್ಯಕ್ಕೆ ಸಾವಿಲ್ಲ” ಎಂಬದೊಂದು ನಾಣ್ಣುಡಿಯು. ಆದರೆ ಸತ್ಯಕ್ಕೆ ಇಷ್ಟೊಂದು ಸುಳ್ಳಿನ ಅವಶ್ಯಕತೆ ಇದ್ದ ಮೇಲೆ ಸುಳ್ಳಿಗೂ ಸಾವು ಬೇಡ ! ಸುಳ್ಳು ಅಮರವಾಗಿರಲಿ !
****
ಅಮೇರಿಕೆಯ ಪ್ರಸಿದ್ದ ವಿನೋದಿ ಗ್ರಂಥಕರ್ತನಾದ ಮಾರ್ಕ್ ಟ್ವೇನ್‌ನು ತನ್ನದೊಂದು ಪುಸ್ತಕದಲ್ಲಿ ಸತ್ಯವು ಅಮೂಲ್ಯವಾದ ವಸ್ತುವು; ಆದ್ದರಿಂದ ಅದನ್ನು ಮಿತಿಯಿಂದ ಉಪಯೋಗಿಸಿರಿ, ನಿರರ್ಥಕವಾಗಿ ಸುಳ್ಳು ಹೇಳಬೇಡಿರಿ, ಅದೇ ಸುಳ್ಳು ಮತ್ತೊಂದು ಸಮಯದಲ್ಲಿ ಉಪಯೋಗ ಬೀಳಬಹುದು ! ” ಎಂದು ಉಪದೇಶಿಸಿರುವನು.
“ಸುಳ್ಳು” ಈ ಶಬ್ದಕ್ಕಿಂತ ” ಅಸತ್ಯ ” ಈ ಶಬ್ದವು ಹೆಚ್ಚು ಸೌಜನ್ಯ ಸೂಚಕವಿದೆ. ಅಂದರೆ ಸಜ್ಜನರು ಹೇಳುವದು ಸುಳ್ಳು ಎಂದಲ್ಲ. ಇಂಗ್ಲೀಷ ಶಬ್ದಗಳಲ್ಲಿ ಹೇಳಬೇಕಾದರೆ “ಅಸತ್ಯ” (un-true) ಶಬ್ದವು ಪಾರ್ಲಿಮೆಂಟರಿ  (Parliamentary) ಶಬ್ದವಿರುತ್ತದೆ. ನಮ್ಮ ಮುಂಬೈ ಅಸೆಂಬ್ಲಿಯಲ್ಲಿ ಒಬ್ಬ ಸದಸ್ಯನು ಮತ್ತೊಬ್ಬನಿಗೆ “ನೀವು ಸುಳ್ಳು ಹೇಳಿದಿರಿ?” ಅಥವಾ “ನೀವು ಗುಳಿಗಿ ಉಳ್ಳಿಸಿದಿರಿ ” ಎಂದು ಅನ್ನಕೂಡದು. ಅದೇ “ನೀವು ಅಸತ್ಯ ನುಡಿದಿರಿ?” ಎಂದು ಅಂದರೆ ಅಡ್ಡಿ ಇಲ್ಲ ! ಇದರಿಂದ ಅಸೆಂಬ್ಲಿ ಮೆಂಬರರು ಅಸತ್ಯ ನುಡಿಯಲು ಅಡ್ಡಿ ಇಲ್ಲ ಎಂದು ಮಾತ್ರ ತಿಳಿಯಕೂಡದು.
ಒಂದೇ ವೇಳೆಯಲ್ಲಿ ಇದ್ದಲ್ಲಿ ಇಲ್ಲದಂತೆ ಮಾಡಿ, ಇಲ್ಲದಲ್ಲಿ ಇರುವಂತೆ ಮಾಡುವದು ಡಬ್ಬಲ್ ಜಾದು ಎಂದು ಹಿಂದೆ ಹೇಳಲಿಲ್ಲವೇ ? ಅದರ ಬೇರೊಂದು ಉದಾಹರಣೆಯನ್ನು ಇಲ್ಲಿ ಕೆಳಗೆ ಕೊಟ್ಟಿದ್ದೇನೆ. ಇದು ನಿಜವಾಗಿ ಜರುಗಿದ ಸಂಗತಿ. ಸುಳ್ಳು ಅಥವಾ ಗಫಾ ಎಂದು ತಿಳಿಯಕೂಡದು. ಅಥವಾ ಪಾರ್ಲಮೆಂಟರಿ ಭಾಷೆಯಲ್ಲಿ “ಅಸತ್ಯ”ವೆಂದೂ ತಿಳಿಯಕೂಡದು!
  * * * *
ನಮ್ಮ ಮನೆಯ ತುಂಬ ಹೆಗ್ಗಣವು ಗುದ್ದು ತೋಡಿ ಗೋಡೆಗಳನ್ನು ಪೊಳ್ಳು ಮಾಡಿದ್ದನ್ನು ನಿನ್ನೆ ತಾನೇ ನೋಡಿದೆ. ನಾನು ನೋಡುನೋಡುವಷ್ಟರಲ್ಲಿ ಒಂದು ಗುದ್ದಿ ನೊಳಗಿಂದ ಒಂದು ಇಲಿಯು ಹೊರಬಿತ್ತು. ಕೂಡಲೆ ನಮ್ಮ ಬೆಕ್ಕಿನ ಮರಿಯು ಬೆನ್ನು ಹತ್ತಿತು. ಇಲಿಯು ಲಗುಬಗೆಯಿಂದ ಒಂದು ದೊಡ್ಡ ಗುದ್ದನ್ನು ಹೊಕ್ಕಿತು. ಅದರ ಹಿಂದೆ ಬೆಕ್ಕಿನ ಮರಿಯೂ ಆ ಗುದ್ದಿ ನಲ್ಲಿ ಹೋಗೇ ಬಿಟ್ಟಿತು. ಬಹಳ ಹೊತ್ತಿನ ವರೆಗೆ ಹೊರಗೆ ಬರಲಿಲ್ಲ. ಗುದ್ದಿನ ಬಾಯಲ್ಲಿ ಹಣಿಕೆ ಹಾಕಿ ನಾನು ಬಹಳ ಸರಿಯಾಗಿ ಬೆಕ್ಕಿನ ಮರಿಯನ್ನು ಕರೆದೆನು. “ಮ್ಯಾಂವು ! ಮ್ಯಾಂವು ! ” ಎಂದು ಸ್ವರ ತೆಗೆದೆನು. ಕಡೆಗೆ ಬೆಕ್ಕಿನ ಮರಿಯ ತಾಯಿಯನ್ನು ತಂದು ಒದರಹಚ್ಚಿದೆನು. ಗುದ್ದಿನೊಳಗೆ ಹೋದ ಬೆಕ್ಕಿನ ಮರಿಯೆನೂ ಹೊರಗೆ ಬರಲಿಲ್ಲ. ಕಡೆಗೆ ಬೇಸತ್ತು ಬೆಕ್ಕಿನ ಮರಿಯ ಆಶೆಯನ್ನೇ ಬಿಟ್ಟು ಕೊಟ್ಟೆ. ಮನೆಯ ಹೊರಗೆ ಬಂದೆ. ಅದೇ ಬೆಕ್ಕಿನ ಮರಿಯು ದಾರಿಯಲ್ಲಿ ಚಿನ್ನಾಟ ಆಡುತ್ತಿತ್ತು !! ಆಶ್ಚರ್ಯ ಚಕಿತನಾದೆ. ಆತುರದಿಂದ ಮರಿಯನ್ನು ಕೈಯಲ್ಲಿ ತೆಗೆದುಕೊಂಡು ಮುದ್ದಿಟ್ಟೆ. ಇಲಿಯ ಹಣೆಯಬರಹವನ್ನು ಯಾರು ಬಲ್ಲರು ?
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...