Home / ಬಾಲ ಚಿಲುಮೆ / ಕಥೆ / ವಿಕಾಲನ ಕಥೆ

ವಿಕಾಲನ ಕಥೆ

ಒಂದಾನೊಂದು ಊರಿನಲ್ಲಿ ಭದ್ರಸೇನನೆಂಬ ರಾಜನಿದ್ದನು. ಅವನಿಗೆ ರತ್ನವತಿ ಎಂಬ ಲಕ್ಷಣವತಿಯಾದ ಮಗಳಿದ್ದಳು. ಅವಳಿಗೆ ಒಬ್ಬ ರಾಕ್ಷಸನು ಹಿಡಿದಿದ್ದನು. ಆದರೆ ಅವಳು ರಕ್ಷಾ ಯಂತ್ರವನ್ನು ಕಟ್ಟಿಕೊಂಡಿದ್ದಳು. ಅದರಿಂದ ಅವಳನ್ನು ಹೊತ್ತು ಕೊಂಡು ಹೋಗಲು ಆಗಲಿಲ್ಲ.
ಒಂದು ದಿನ ನಡುರಾತ್ರಿಯಲ್ಲಿ ರಾಕ್ಷಸನು ಅಂತಃಪುರದ ಮೂಲೆಯಲ್ಲಿ ನಿಂತಿದ್ದನು. ಆ ರಾಕ್ಷಸನನ್ನು ರಾಜಪುತ್ರಿಯು ಸಖಿಗೆ ತೋರಿಸಿ “ಇದೇ ಈ ವಿಕಾಲ ಸಮಯದಲ್ಲಿ ನನ್ನನು ಗೋಳು ಹೊಯ್ದುಕೊಳ್ಳುವ ರಾಕ್ಷಸ. ಇದನ್ನು ತಪ್ಪಿಸಲು ಏನಾದರೂ ಮಾರ್ಗವನ್ನು ಹುಡುಕು” ಎಂದಳು.
ವಿಕಾಲಸಮಯ ಎಂದರೆ ಹೊತ್ತಲ್ಲದ ಹೊತ್ತು. ಅದನ್ನು ರಾಕ್ಷಸನು ವಿಕಾಲನು ಬರುವ ಸಮಯ ಎಂದುಕೊಂಡು, “ಆಃ ವಿಕಾಲನೆಂಬ ಇನ್ನೊಬ್ಬನೂ ಇವಳನ್ನು ಹಿಡಿದಿರಬೇಕು. ಅವನಿಗೂ ನನ್ನಂತೆಯೇ ಇವಳನ್ನು ಹೊತ್ತುಕೊಂಡು ಹೋಗಲು ಅಸಾಧ್ಯವಾಗಿದೆ. ಇರಲಿ. ಆ ವಿಕಾಲನು ಯಾರೋ ನೋಡೋಣ” ಎಂದು ಕುದುರೆಯಾಗಿ ಲಾಯದಲ್ಲಿ ನಿಂತನು.
ಆ ವೇಳೆಗೆ ಒಬ್ಬ ಕುದುರೆ ಕಳ್ಳನು ಲಾಯದೊಳಕ್ಕೆ ನುಗ್ಗಿ ಬಂದು ದೀಪವನ್ನು ಆರಿಸಿ ಕುದುರೆ ಕುದುರೆಯನ್ನು ಮುಟ್ಟಿ ನೋಡುತ್ತ ಬಂದನು. ರಾಕ್ಷಸ ಕುದುರೆಯು ಮಿಕ್ಕ ಕುದುರೆಗಳಿಗಿಂತ ಚೆನ್ನಾಗಿತ್ತು. ಅದರಿಂದ ಅವನು ಅದಕ್ಕೆ ಕಡಿವಾಣ, ಹಲ್ಲಣಗಳನ್ನು ಹಾಕಿ, ಅದರ ಮೇಲೆ ಕುಳಿತು ಓಡಿಸಿಕೊಂಡು ಹೋದನು. ರಾಕ್ಷಸನೂ “ಇವನೇ ವಿಕಾಲ ನಿರಬೇಕು. ಎಲ್ಲ ಕುದುರೆಗಳನ್ನೂ ಬಿಟ್ಟು ನನ್ನನ್ನೇ ಹಿಡಿದಿದ್ದಾನೆ. ಬಂತು ನನಗೆ ಮೃತ್ಯು. ಇನ್ನು ನಾನು ಬದುಕುವಂತಿಲ್ಲ” ಎಂದು ಹೆದರಿ ನಾಗಾಲೋಟ ಓಡಿತು.
ಹೊಡೆದರೂ, ಮುಳ್ಳು ಚುಚ್ಚಿದರೂ, ಕಡಿವಾಣ ಎಳೆದರೂ ನಿಲ್ಲದೆ ಓಡುತ್ತಿರುವ ಕುದುರೆಯನ್ನು ನೋಡಿ, “ನಿಜವಾಗಿಯೂ ಇದಕ್ಕೆಲ್ಲೋ ದೆವ್ವ ಹಿಡಿದಿದೆ. ಇದನ್ನು ಹಿಡಿಯುವುದು ಸಾಧ್ಯವಿಲ್ಲ ಇದೆಲ್ಲಾದರೂ ನನ್ನನ್ನು ಹೊತ್ತುಕೊಂಡು ಹೋಗಿ ಕೊಲ್ಲುವುದು  ತಪ್ಪಿಸಿಕೊಳ್ಳಬೇಕು?” ಎಂದು ಆ ಕಳ್ಳನು ಯೋಚಿಸಿಕೊಂಡು, ಬೆಳಗಾಗುವ ವೇಳೆಗೆ ದಾರಿಯಲ್ಲಿ ಸಿಕ್ಕಿದ ಒಂದು ಆಲದ ಮರವನ್ನು ಹತ್ತಿಕೊಂಡನು.
ಆ ಮರದಲ್ಲಿ ಆ ರಾಕ್ಷಸನಿಗೆ ಪರಮ ಸ್ನೇಹಿತನಾದ ಒಂದು ಕಪಿ ಇತ್ತು. ಅದು ಓಡುತ್ತಿದ್ದ ರಾಕ್ಷಸನನ್ನು ನಿಲ್ಲಿಸಿ “ಏನು?” ಎಂದು ಕೇಳಿತು. ರಾಕ್ಷಸನು ವಿಕಾಲನ ಕಥೆಯನ್ನು ಹೇಳಲು, “ನಿನ್ನ ವಿಕಾಲನು ಈ ಮರದಲ್ಲಿದ್ದಾನೆ. ನೋಡು. ಅವನು ಮನುಷ್ಯ ನಿನ್ನ ಆಹಾರ” ಎಂದಿತು. ಅದನ್ನು ಕಳ್ಳನು ಕೇಳಿ ಕಪಿಯ ಮೇಲೆ ಕೋಪಮಾಡಿಕೊಂಡು, ಅದರ ಬಾಲವನ್ನು ಹಿಡಿದು ಚೆನ್ನಾಗಿ ಕಚ್ಚಿ ಬಿಟ್ಟನು. ಕಪಿಯು ಕೊಂಬೆಗಳ ನಡುವೆ ಕುಳಿತಿತ್ತು. ಅದು ಅತ್ತ ಇತ್ತ ತಿರುಗುವಂತೆ ಇಲ್ಲ. ಆ ನೋವೋ ಸಹಿಸಲಾರದಷ್ಟು. ಆಗ, ಅದು ನೋವಿನಿಂದ ಮುಸುಡಿ ಸೊಟ್ಟ ಮಾಡಿಕೊಂಡು ಅಯ್ಯೋ ಎಂದು ಕೂಗಿ ಕೊಂಡಿತು.
ರಾಕ್ಷಸನು ಆ ಕೂಗನ್ನೂ ಅದರ ಮುಸುಡನ್ನೂ ನೋಡಿ. “ನೋಡಿದೆಯಾ ವಿಕಾಲನ ಮಹಿಮೆ? ನನಗೆ ಬೇಡ ಈ ಸಹವಾಸ” ಎಂದು ಕಾಲಿಗೆ ಬುದ್ದಿ ಹೇಳಿದನು.
ಅದರಿಂದ ಹೇಳಿದೆ, “ಓಡಿಗೆದ್ದವ ಬದುಕಿದ” ಎಂದು. ಅದರಿಂದ ನನಗೆ ಅಪ್ಪಣೆಯನ್ನು, ಕೊಡು. ನಾನು ಮನೆಗೆ ಹೋಗುವೆನು. ನಿನ್ನ ಲೋಭದ ಫಲವನ್ನು ನೀನು ಅನುಭವಿಸು” ಎಂದನು.
ಚಕ್ರಧರನು “ಸತ್ಯ. ಆದದ್ದಾಯಿತು. ಹೋಗಿ ಬಾ. ನೀನೆಲ್ಲಾದರೂ ಚೆನ್ನಾಗಿರು.” ಎಂದು ಆಶೀರ್ವಾದ ಮಾಡಿ ಕಳುಹಿಸಿ ಕೊಟ್ಟನು.
ಇಂತಿದು ಹೊಸಗನ್ನಡ ಪಂಚತಂತ್ರದಲ್ಲಿ
“ನೋಡದೆ ಮಾಡಿದರೆ” ಎಂಬ
ಎರಡನೆಯ ತಂತ್ರವು ಮುಗಿದುದು
*****
Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...