Home / ಕವನ / ಕವಿತೆ / ನೇಸರನು

ನೇಸರನು

ಉಕ್ಷೆಯನು ವರಿಸಲು ಜಗದಲಿ ಬರುವನು ಮೂಡಣದಿಕ್ಕನ್ನೆಯ ಮಗನು |
ಹಸುಮಗುವಾಗುತೆ ಪೊಣ್ಗದಿರಿಂದಲಿ ಹೊಳೆಯುವನಾಗಸದಿ ||
ನಸುಗೆಂಪಾಗಿಸ ಮುಖದಿಂ ಬೆಳಗುತೆ ಚೇತನ ಬೀರುವ ವಿಶ್ವದೊಳು |
ರಸವನು ತುಂಬುತೆ ಯೆಲ್ಲೆಡೆಯೊಳ್ತಾ ಚೇತನ ಗೊಳಿಸುವನು || ೧ ||

ಜಗದೊಳುಬರೆ ತಾ ಮರೆವನು ಪ್ರಿಯತಮೆ ತೊಡಗುವನಾಚಣ ಕಾರ್ಯದಲಿ |
ಜಿಗಿಯುತೆ ತೇರೇಳ್ಗುದುರೆಗಳೆಳೆಯಲು ಖಂಜನು ಸಾರಥಿರಥಹೊಡೆವಾ ||
ಮೊಗದೊಳು ತಾನುಗ್ರತೆಯನು ಪಡೆಯುತೆ ನಭದೊಳುರಭಸದಿ ಕ್ರಮಿಸುವನು |
ಜಗವನು ಕ್ರಮದಿಂ ಸುತ್ತಲು ತಪ್ಪದೆ ಪಡುವಣ ಬೆಟ್ಟದಿ ವಿಶ್ರಮಿಪ || ೨ ||

ನಿದ್ರೆಯೆಲ್ಲಿಯದು ನೇಸರಗೆನುತಲಿ ಸಾಗುನಾಚಣ ಪಾತಳ ಲೋಕಕೆ |
ಎದ್ದುಸಾಗುವನು ಕಾರ್ಯವ ಮಾಡಲು ಆಸರಬೇಸರವರಿಯದಲೇ ||
ಶುದ್ಧ ಮನದೆ ತಾ ಕಾಯಕ ಮಾಡುತೆ ಕಾಯಕ ಮಹತಿಯ ಬೀರುವ ಜನಕೆ |
ಎದ್ದು ಮನುಜರೆ ಕಾರ್ಯವ ಮಾಡಿರಿ ಜಗದೊಳು ಬೆಳಗಿರಿ ನನ್ನಂತೆ || ೩ ||

ಹೆಂಡಿರು ಮಕ್ಕಳ ಮೋಹನ ಬಿಡುತಲಿ ಖಂಡಿತ ದುಡಿಯಿರಿ ಸಂತತವ |
ಕಂಡಕಂಡಕಡೆ ಮನವನು ಚಲಿಸದೆ ಕಾಯಕದೊಳ್ಮನ ವಿಕ್ಕುತಲಿ ||
ತುಂಡು ಹೊಂದಿದ ಬಂಧುಗಳೊಂದಡೆಕೂಡಿಸಿ ಮೆರೆಯಿರಿ ಜಗದೊಳಗೆ |
ಬಂಡುತನಕೆ ನೀವ್ಕೊಡದಿರಿ ತಾಣವ ನೀತಿಯ ಮಾರ್ಗದಿ ನಡೆಯುತ್ತೆ || ೪ ||

ಆಸರಬೇಸರಗಳ ದೂರೊತ್ತುತೆ ಮಾಡಿರಿ ನಿಮ್ಮಯ ಕಾಯಕ ಸಂತತದಿ |
ನೇಸರನಂತೆಯೆ ತೇಜವ ಬೀರಿರಿ ಸಂತತ ಜಗದೊಳು ಯೆಲ್ಲೆಡೆಗೆ ||
ಹೇಸಿರಿ ಕರ್ಮಕೆ ನೀತಿ ಧರ್ಮದಿ ವಿರಹಿತ ಸ್ವಾರ್ಥದಿ ತುಂಬಿರುವ |
ಭೂಷಣವೆನಿಪ ಕಾರ್ಯವ ಮಾಡುತೆ ಪಡೆಯಿರಿ ಶಾಶ್ವತ ಕೀರ್ತಿಯನು || ೫ ||

ಇಂತು ನೀತಿಯನು ನೇಸರ ಬೋಧಿಪ ತನ್ನಯ ನಿತ್ಯದ ಕೃತಿಯಿಂದೆ|
ಇಂತೆಯ ನಮ್ಮಯ ಗಾಂಧಿಪೇಳಿದನು ಶಾಶ್ವತ ನಮ್ಮಯ ಸುಖಕಾಗಿ ||
ಇಂತು ಬೋಧಿಸುತಲಾಗಸದೊಳ್ತಾನಿತ್ಯಹೊಳೆವನು ನಮಗಾಂಧಿ |
ಇಂತು ನಡೆದೊಡೆ ಶಾಂತಿ ಸೌಖ್ಯದಿಂ ಮೆರೆವುದು ಸಂತತ ಭೂಲೋಕ || ೬ ||
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...