Home / ಕವನ / ಕವಿತೆ / ಮದಿರೆಯ ಮಹಿಮೆಯು

ಮದಿರೆಯ ಮಹಿಮೆಯು

ಸುಧೆಯಂ ಪಡೆದುಂ ಮರಣವತಪ್ಪಿಸೆ ಕಡಲನು ಕಡೆದರು ದಾನವದಿವಿಜರು|
ಅದರೊಳು ಪಡೆದರು ಈರೆಳು ಮಣಿಗಳ ಕುಣಿದರು ಅಗಣಿತ ಸಂತಸದಿ ||
ಸುಧೆಯೊಂದಿಗೆ ತಾ ಹೊರಟಿತು ಸುರೆತಾಕುಡಿಯುತ ದೈತ್ಯರು ಮದಿಸಿದರು|
ಸುಧೆಯನು ಈ೦ಟುತೆ ಮರಣವ ತಪ್ಪಿಸಿ ಮೆರೆದರು ವಿಶ್ವದಿಬಿಡುಗಣ್ಣಿಗರೂ || ೧ ||

ಸುರೆಯಂ ಕುಡಿಯತೆ ಕಡುಮದದಿಂದಲಿ ಅಡರಿಸಿದರು ಕೇಡನು ರಕ್ಕಸರು |
ದುರುಳರ ಕಡಿಯಲು ಕಡುತ್ವರೆಯಿಂದಲಿ ದುಡುಕಿದನವಹರಿ ಅವತರಿಸಿ ||
ಮರುಳನುಹರಿತಾಮದಿರೆಯ ಕೊಲ್ಲದೆ ಕುಡುಕರಮರಣವ ನೊಡರಿಸಿದ |
ಸರುವರ ಕಿಡಿಸಲು ಮದಿರೆಯೆ ಮೂಲವು ಕಡುನಾಶಕವದ ನರಿಯದಲೆ || ೨ ||

ಸಿ೦ದಿಯೆಂಬುದದು ಮೊಲೆವಾಲ್ತಾಡದ ಬಂಧಿಸೆ ಶಾಸನ ಕುಂದನು ಹೊ೦ದದು |
ಅ೦ದಿನ ಚಣದೊಳ್ನೀರೆಯಾಗುತೆ ಬ೦ದು ಮೋಹಿಪುದು ಮಾನವ ಕೋಟಿಯ ||
ಬ೦ದುಮಾಡೆ ಶೆರೆಯ೦ದೆ ಭಟ್ಟಿಯೊಳ್ನಿ೦ದು ಗೌಪ್ಯದೊಳ್ನಲಿಯುವದು |
ಮಂದಹಾಸದಿಂ ತಾನಭಿಸಾರಿಕೆ ಯಂದದೆ ಮನೆಮನೆತಿರುಗುವದು || ೩ ||

ಹಿಂದು ದೇಶಪಿತ ಗಾಂಧಿಯಮಂತ್ರವ ನೋಂದನರಿಯೆ ಶೆರೆ ಸಿ೦ದಿಗಳು |
ಕುಂದುಕೊರತೆಗಳ ಪೊಂದಿ ವಿಶ್ವದಿಂ ಕಂದಿಹೋಗಿ ಕಾಲ್ತಗೆಯುವವು ||
ಇಂದುನಮ್ಮಯ ರಾಷ್ಟಶಕಟದನೊಗದಿ ಕುಂತಿಹರು ತಂದೆಯ ಸಮರು |
ಒಂದುಗೂಡಿ ಜನರೊಂದೆ ಮನದಿತಾ೦ ಗಾ೦ಧಿತತ್ವವವನು ಹರಡುವುದು || ೪ ||

ಸಿಂದಿಶೆರೆಗಳ ಬಂದು ಮಾಳ್ಪ ಹೊರೆಸಂದುದು ನಾಯ್ಕರ್ಗೆಂದೆನದೆ |
ಮುಂದುವರೆಯುತೆ ತಮ್ಮಯ ಸೇವೆಯಚಂದದಿ ನೀಡಲು ತಾಸುಖವು ||
ಬಂದುಕುಣಿಯುವದು ಸಗ್ಗದಿ ಗಾಂಧಿಯು ಸಂದಸಂತಸವ ತಾಪಡೆದು |
ಕುಂದುಕೊರತೆಗಳನರಿಯದೆ ಬಾಳಿರಿಯಂದವವರಗಳ ನೀಡುವನು || ೫||
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...