Home / ಕವನ / ಕವಿತೆ / ಸರಸತಿ!

ಸರಸತಿ!

ಅರಳಿದ ತಾವರೆಯಲರುಗಳಿರುವ
ವರ ಸರ ತಟದಲಿ, ಕಲ್ಲಿನಲಿ,
ಕರದಲಿ ವೀಣೆಯು ಸರಗೊಡುತಿರಲು,
ಸರಸತಿ! ಮಂಡಿಸಿ ಏಂ ಗೈವೆ?
ಏರು ಬಸಂತನ ಬೇಟವ ನೋಳ್ಪೆಯೊ?
ನೀರಜಕೆರಗುವ ಪರಮೆಗಳ
ಸುರ-ಸುಮಧುರ ಸುಗೀತವ ನೀನು
ಹೀರುತಲಿಹೆಯೋ ಕಿವಿಯಿ೦ದ?
ಬಳಿಯಲಿ ನುಡಿಯುವ ಗಿಳಿಗಳ ಸರಕೆ,
ಉಲಿಯುವ ಪಿಕಗಳ ಇ೦ಚರಕೆ,
ತಲೆಯಲ್ಲಾಡಿಸಿ, ತಾಳವನಿಕ್ಕುತ,
ಒಲಿದಿಹೆಯೇನೋ ಶಾರದೆಯೆ?
ಆರನು ನೋಡುವೆ ಎದೆ ಬಿಡದಿಂತು?
ಆರನು ನೋಡುತ ನಗುತಿರುವೆ?
ಹಾರದೆ ಮೇಲಕೆ, ನೀರೊಳು ತೇಲುವ
ಚಾರು ಮರಾಲವನೀಕ್ಷಿಪೆಯೊ?
ತಿಳಿಯಿತು! ತಿಳಿಯಿತು! ನಿನ್ನಯ ಬಗೆಯು:-
ಸಲಿಲದ ಕಮಲದಿ ನಿ೦ತಿರುವ
ಲಲಿತಾ ಲಕ್ಷ್ಮಿಯ ನೋಡುತ, ಬಳಿಕ
ಮೆಲುನಗೆ ಬೀರುವೆ ಮೊಗದೊಳಗೆ-
ಸರಸತಿ! ನಿನ್ನಯ ಕುಡಿಗಣ್ಣೋಟ
ಕಿರುನಗೆ ತೋರ್ಪುದವಜ್ಞೆಯನು:-
ಸರಿಸದಿ ಸರಸಿಜದಲರಲಿ ಚಲಿಸದೆ
ಮೆರೆಯುವ ಸಿರಿ ರಾಣಿಯ ಕುರಿತು.

“ತಾನು ಪತಿವ್ರತೆ;- ಒಬ್ಬಗೆ ಒಲಿದರೆ
ಏನವನನು ನಾ ತೊರೆಯುವೆನೆ?
ಕಾಣಿರಿ ಲಕ್ಷ್ಮಿಯ ಚಂಚಲ ಚಿತ್ತವ;-
ಮಾನಿಪಳಾರನು ಸ್ಥಿರವಾಗಿ?”
ಎಂದಪಹಾಸವ ವ್ಯಂಜಿಸುತಿಹೆಯೊ-
ಸುಂದರಿ! ಕಿರುನಗೆ ರೂಪದಲಿ?
* * * *

“ಇಂದಿರೆ ವಾಸಿಸ ತಾಯ್ವನೆ ತಾವರೆ-
ಯಂದವನೆಲ್ಲರು ದಿಟ್ಟಿಸಿರಿ:-
“ಅವಳಾ ಚಂಚಲ ವರ್ತನೆಯನು ತಾ-
ನವನೀತಲಕದು ನುಡಿವ೦ತೆ,
ದಿವಸವದೊಂದರೊಳಲರುತ, ಮುಗುಳುತ,
ತವೆ ತೋರ್ಪದು ಬಹುರೂಪವನು.
“ನನ್ನಾಸನವದು ಕರಿಕಲ್ಲಾದರು,
ನುಣ್ಣಗೆಯಿಹುದತಿ ಸ್ಥಿರವಾಗಿ
ಕಣ್ಣಿಗನುತ್ತಮವಾದರು, ಪಾಸರೆ
ಭಿನ್ನವದಾಗದು!- ಪ್ರಕೃತಿಯಿದು.
“ಆವುದು ಸ್ಥಿರವದು?- ಕಲ್ಲೋ ಕಮಲವೊ
ನೀವೇ ಹೇಳಿರಿ” ಎಂಬಂತೆ
ಸವನಿಸಿ ನಲ್ಮೊಗದಲಿ ದರಹಾಸವ-
ನವಲೋಕಿಪೆಯೇನಿಂದಿರೆಯ?
ಎಲ್ಲರಪೇಕ್ಷಿಪ ಧನದಧಿ ದೇವಿಯು
ಫುಲ್ಲಾಕ್ಷನ ನಚ್ಚಿನ ಮಡದಿ
ಕಾಲೆಡೆ ನಿಂತಿಹಳೆಲೆ ಸರಸತಿಯೆ!
ಮೇಲೆನಿಪರದಾರ್‌ ನಿನ್ನಿಂದೆ:
ವಾಣಿಯೆ! ನಿನ್ನಯ ವೀಣೆಯ ಸುಸ್ವರ
ಗಾನವನಾಲಿಸ ನವಿಲಾಗಿ
ತನ್ನೆದೆಯರಿವನು ಸ೦ತಸದಿಂದಲಿ
ಧನ್ಯವದಾಗಿಸೆ ಬಯಸದರಾರ್‌?
*****
೧೯೩೬

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...