Home / ಕವನ / ಅನುವಾದ / ಸುಖಜೀವನ

ಸುಖಜೀವನ

ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ,
ಇನ್ನೊಬ್ಬನಿಚ್ಚೆಯನು ದುಡಿಯದಿರುವವನು!
ಒಳ್ಳಿತನು ಬಗೆವುದೇ ತನ್ನ ಕಾಯುವ ಯಂತ್ರ,
ನಿಜದ ನಡತೆಯ ತಂತ್ರ ತನಗೆನಿಸಿದವನು.
ರಾಗಗಳು ತನಗೊಡೆಯರಾಗದವೊಲಾಳುವನು,
ಜೀವವನು ಸಾವಿಗಣಿಮಾಡಿ ಬಾಳುವನು.
ಎಂತು ಧಣಿಯೊಲವೆಂದು, ನೆರೆಯ ಮೆಚ್ಚೆಂತೆಂದು,
ವಿಡುಮಿಡುಕಿ ಲೋಕವನ್ನು ಕಟ್ಟಿಕೊಳದವನು.
ನಾಡಾಡಿಗಳ ಬಾಯ ಬಳಕೆಯಲಿ ನಾಟದೆಯೆ,
ತನ್ನಾತ್ಮಸಾಕ್ಷಿಯೇ ಕೋಟೆಯಾದವನು.
ಹೊಗಳುವರು ನೆರೆದುಂಡು ತೇಗದವನಿದ್ದಾಗ,
ಬಿದ್ದಾಗ ಬಗುಳುವರು ಜರೆದುಕೊಳದವನು.
ಕೆಟ್ಟತನದಲಿ, ದೆಸೆಯಲೇರುತಿರಲೊಬ್ಬಾತ,
ಕಂಡದನು ಕುದಿಗೊಂಡು ತಾ ಕರುಬದವನು.
ನಗುನಗುತ ನೆರವ ಚುಚ್ಚುವ ಮಾತು ಬರದವನು;
ಧರ್ಮವಲ್ಲದೆ ಬೇರೆ ಸೂತ್ರವಿರದವನು.
ನಿನ್ನ ಕೃಪೆ ಇರಲಿ, ಸಿರಿ ಏನೆಂದು, ದೇವರನು
ಬೆಳಗು ಬಯ್ಗೂ ಬಿಡದೆ ಬೇಡುತಿರುವವನು.
ಕೇಡಿನಲಿ ಕೈಯಿಡದೆ, ತನ್ನೊಪ್ಪಿನೋದಿನಲಿ,
ಕೆಳೆಯನಲಿ, ತಾ ಹೊತ್ತ ಕಳೆದು ನಲಿವವನು.
ಈ ಬಗೆಯ ಮುಕ್ತನಿಗೆ ತೊತ್ತುಗಳ ತೊಡರಿಲ್ಲ,
ಏರುವಾಸೆಗಳಿಲ್ಲ, ಬೀಳುವಳುಕಿಲ್ಲ.
ಹೊನ್ನು ಮಣ್ಣಿಲ್ಲದೊಡೆ, ತನ್ನೊಡೆಯ- ತಾ ಬಲ್ಲ!
ಒಂದು ತನಗಿಲ್ಲದೆಯೆ, ಉಂಟು ತನಗೆಲ್ಲ!
*****
SIR HENRY WOTTON (1568 – 1639): Character of a Happy Life
Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...