Home / ಕವನ / ಕವಿತೆ / ಕಲ್ಯಾಣ ಬಸವ

ಕಲ್ಯಾಣ ಬಸವ

ಸಾಗಿ ಸದ್ಗುರು ಯೋಗಿ ಬಂದರ |
ಹೋಗಿ ನೋಡುಣ ಗುರು- |
ಮೋಕ್ಷವ ಬೇಡುಣ ||ಪ||

ಕಲ್ಯಾಣ ಮನಿಯಾಗ, ಎಲ್ಲ ಶರಣರ ಕಂಡೆ
ಬಲ್ಲಿದನ ಕಂಡೆ ಬಸವಣನ | ಗುರುವೆ || ಸಾ || ಪಾದಕ
ಚೆಲ್ಯಾಡಿ ಬಂದೆ ನನ ಮನವ | ಗುರುವೆ || ಸಾ || ೧

ಕಲ್ಯಾಣ ಪುರದಾಗ, ಎಲ್ಲರಿಗು ಕಲ್ಯಾಣ
ಕಲ್ಯಾಣ ಬಂತ ಜಗದಾಗ | ಗು | ಸಾ | ಬಸವಣ್ಣ
ಕಲ್ಯಾಣ ಕಟ್ಟಿ ಹೆಸರಾದ | ಗು | ಸಾ | ೨

ಬಸವ ನಿನ ಕಲ್ಯಾಣ, ದೆಸೆ ದಿಕ್ಕ ಕೇಳ್ಯಾವ
ಮುಸುಕಿ ಜನ ಬಂತು ಮಂಟಪಕ | ಗು | ಸಾ | ಕಲ್ಯಾಣ
ಉಸುರಾತೊ ಶಿವನೆ ಶರಣರಿಗೆ | ಗು | ಸಾ | ೩

ಶರಣರನ ನೆನದಾರ, ಸರಗೀಯ ಇಟ್ಟ್ಹಂಗ
ಅರಳ ಮಲ್ಲೀಗಿ ಮುಡದ್ಹಂಗ | ಗು | ಸಾ | ಕಲ್ಯಾಣ
ಶರಣರನ ನೆನೆಯೊ ಎಲೆ ಮನವ | ಗು | ಸಾ | ೪

ಅರಿಕೆ ಶರಣರ ನಾಮ, ಕುರುಹು ಕಲ್ಯಾಣಾತೊ
ಹೊರ ಒಳಗು ಬಿತ್ತು ಶಿವ ಬೆಳಕು | ಗು | ಸಾ | ತೊಳಬೆಳಗಿ
ನರಲೋಕವಾತ ಹರಲೋಕ | ಗು | ಸಾ | ೫

ಎಲ್ಲ ದಿಕ್ಕಿನಗಾಳಿ, ನಿಲ್ಲದಲೆ ಬೀಸ್ಯಾವ
ಕಲ್ಯಾಣ ಗಾಳಿ ಬಲುಬೀಸಿ | ಗು | ಸಾ | ನಾಡಾಗ
ಎಲ್ಲಾರೊಕ್ಕ್ಯಾರ ಶಿವನುಡಿಯ | ಗು | ಸಾ | ೬

ಒಳಗಿರುವ ಕಲ್ಯಾಣ, ಇಳೆಯ ಬೆಳಗುವ ಬೆಳಕು
ಹೊಳೆಯಾಗಿ ಹರಿದು ತಿಳಿ ಬಂತು | ಗು | ಸಾ | ಹೊಸಮತಕ
ಬೆಳಕು ಹುಲಸಾತ ಜಗದಾಗ | ಗು | ಸಾ | ೭

ಹೂವಾಗಿ ಅರಳ್ಯಾರ, ಆವಾಗಿ ಕರೆದಾರ
ದೇವರಿಗೆ ಮಿಗಿಲ ಕಲ್ಯಾಣ | ಗು | ಸಾ | ಶರಣರಿಗೆ
ಯಾವ ಬಗೆಯಿಂದ ನೆನಬೇಕ | ಗು | ಸಾ | ೮

ಬಾರೊ ಬಲ್ಲಿದ ಬಸವ, ತೋರೊ ಅಲ್ಲಮದೇವ
ಸಾರೊ ನೀ ಚೆನ್ನಬಸವಣ್ಣ | ಗು | ಸಾ | ಕಲ್ಯಾಣ
ಧೀರ ಮಡಿವಾಳ ನೀ ಕಾಯೋ | ಗು | ಸಾ | ೯

ಸತ್ಯಸಾಗರದಾಗ, ನಿತ್ಯ ಮಂದಿರವೇನ
ಗೊತ್ತುಳ್ಳ ಹಾದಿ ಶಿವಭಕ್ತಿ | ಗು | ಸಾ | ಕಲ್ಯಾಣ
ಎತ್ತ ನೋಡಿದರ ಕೈಲಾಸ | ಗು | ಸಾ | ೧೦

ಅಂಗಳದ ಮಂಟಪಕ, ಲಿಂಗ ಬೆಳದಿಂಗಳವ
ಜಂಗ ನುಡಿಸಿದ ಕಲ್ಯಾಣ | ಗು | ಸಾ | ಜಂಗಮರ
ಸಂಗ ಶಿವಬೆಳಕ ನಿಜಪದಕ | ಗು | ಸಾ | ೧೧

ಕಲ್ಯಾಣ ಬಯಲಾಗ, ಎಲ್ಲ ಶರಣರು ಕೂಡಿ
ಬಲ್ಲವರು ಮಾತ ಹೇಳ್ಯಾರ | ಗು | ಸಾ | ಜನದಾಗ
ಹೊಲೆ೦ಬು ಸಬುದ ಮಾಯಾತ | ಗು | ಸಾ | ೧೨

ಮಾತು ಕುಲಹೊಲೆಯಲ್ಲ, ಜಾತಿ ಸೂತಕವಲ್ಲ
ನೀತಿ ನೀರ್ಬಳಕಿ ಕಲ್ಯಾಣ | ಗು | ಸಾ | ಮಹಮನೆಗೆ
ದಾತ ಬಸವಣ್ಣ ಶಿವಭಕ್ತ | ಗು | ಸಾ | ೧೩

ಶಿವಭಕ್ತಿ ಹೂ ಅರಳಿ, ಶಿವಭಕ್ತ ಬಸವಣ್ಣ
ಶಿವಣಾನ ತೊರೆಯು ಚನಬಸವ | ಗು | ಸಾ | ಪ್ರಭುದೇವ
ಶಿವಗಣ್ಣು ಲೋಕ ನೋಡುದಕೆ | ಗು | ಸಾ | ೧೪

ಈಸಿ ದಾಟುನ ಬಾರ, ಖಾಸ ಶರಣರ ಹಾಡಿ
ಬೀಸಿ ಹಾಡೂನ ಕಲ್ಯಾಣ | ಗು | ಸಾ | ಶರಣರಿಗೆ
ಹಾಸಿ ಈ ಮನವ ಸವಿಯಾಲೆ | ಗು | ಸಾ | ೧೫

ಓಂ ಶಿವನೆ ಬಸವಣ್ಣ, ಓಂ ಶಿವನೆ ಪ್ರಭುದೇವ
ಓಂ ಶಿವನ ಶಕ್ತಿ ಚನಬಸವ | ಗು | ಸಾ | ಕಲ್ಯಾಣ
ಓಂ ಶಿವನೆ ಶರಣು ಶರಣರಿಗೆ | ಗು | ಸಾ | ೧೬
*****

Tagged:

Leave a Reply

Your email address will not be published. Required fields are marked *

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...