Home / ಕವನ / ಕವಿತೆ / ಕಲ್ಯಾಣ ಬಸವ

ಕಲ್ಯಾಣ ಬಸವ

ಸಾಗಿ ಸದ್ಗುರು ಯೋಗಿ ಬಂದರ |
ಹೋಗಿ ನೋಡುಣ ಗುರು- |
ಮೋಕ್ಷವ ಬೇಡುಣ ||ಪ||

ಕಲ್ಯಾಣ ಮನಿಯಾಗ, ಎಲ್ಲ ಶರಣರ ಕಂಡೆ
ಬಲ್ಲಿದನ ಕಂಡೆ ಬಸವಣನ | ಗುರುವೆ || ಸಾ || ಪಾದಕ
ಚೆಲ್ಯಾಡಿ ಬಂದೆ ನನ ಮನವ | ಗುರುವೆ || ಸಾ || ೧

ಕಲ್ಯಾಣ ಪುರದಾಗ, ಎಲ್ಲರಿಗು ಕಲ್ಯಾಣ
ಕಲ್ಯಾಣ ಬಂತ ಜಗದಾಗ | ಗು | ಸಾ | ಬಸವಣ್ಣ
ಕಲ್ಯಾಣ ಕಟ್ಟಿ ಹೆಸರಾದ | ಗು | ಸಾ | ೨

ಬಸವ ನಿನ ಕಲ್ಯಾಣ, ದೆಸೆ ದಿಕ್ಕ ಕೇಳ್ಯಾವ
ಮುಸುಕಿ ಜನ ಬಂತು ಮಂಟಪಕ | ಗು | ಸಾ | ಕಲ್ಯಾಣ
ಉಸುರಾತೊ ಶಿವನೆ ಶರಣರಿಗೆ | ಗು | ಸಾ | ೩

ಶರಣರನ ನೆನದಾರ, ಸರಗೀಯ ಇಟ್ಟ್ಹಂಗ
ಅರಳ ಮಲ್ಲೀಗಿ ಮುಡದ್ಹಂಗ | ಗು | ಸಾ | ಕಲ್ಯಾಣ
ಶರಣರನ ನೆನೆಯೊ ಎಲೆ ಮನವ | ಗು | ಸಾ | ೪

ಅರಿಕೆ ಶರಣರ ನಾಮ, ಕುರುಹು ಕಲ್ಯಾಣಾತೊ
ಹೊರ ಒಳಗು ಬಿತ್ತು ಶಿವ ಬೆಳಕು | ಗು | ಸಾ | ತೊಳಬೆಳಗಿ
ನರಲೋಕವಾತ ಹರಲೋಕ | ಗು | ಸಾ | ೫

ಎಲ್ಲ ದಿಕ್ಕಿನಗಾಳಿ, ನಿಲ್ಲದಲೆ ಬೀಸ್ಯಾವ
ಕಲ್ಯಾಣ ಗಾಳಿ ಬಲುಬೀಸಿ | ಗು | ಸಾ | ನಾಡಾಗ
ಎಲ್ಲಾರೊಕ್ಕ್ಯಾರ ಶಿವನುಡಿಯ | ಗು | ಸಾ | ೬

ಒಳಗಿರುವ ಕಲ್ಯಾಣ, ಇಳೆಯ ಬೆಳಗುವ ಬೆಳಕು
ಹೊಳೆಯಾಗಿ ಹರಿದು ತಿಳಿ ಬಂತು | ಗು | ಸಾ | ಹೊಸಮತಕ
ಬೆಳಕು ಹುಲಸಾತ ಜಗದಾಗ | ಗು | ಸಾ | ೭

ಹೂವಾಗಿ ಅರಳ್ಯಾರ, ಆವಾಗಿ ಕರೆದಾರ
ದೇವರಿಗೆ ಮಿಗಿಲ ಕಲ್ಯಾಣ | ಗು | ಸಾ | ಶರಣರಿಗೆ
ಯಾವ ಬಗೆಯಿಂದ ನೆನಬೇಕ | ಗು | ಸಾ | ೮

ಬಾರೊ ಬಲ್ಲಿದ ಬಸವ, ತೋರೊ ಅಲ್ಲಮದೇವ
ಸಾರೊ ನೀ ಚೆನ್ನಬಸವಣ್ಣ | ಗು | ಸಾ | ಕಲ್ಯಾಣ
ಧೀರ ಮಡಿವಾಳ ನೀ ಕಾಯೋ | ಗು | ಸಾ | ೯

ಸತ್ಯಸಾಗರದಾಗ, ನಿತ್ಯ ಮಂದಿರವೇನ
ಗೊತ್ತುಳ್ಳ ಹಾದಿ ಶಿವಭಕ್ತಿ | ಗು | ಸಾ | ಕಲ್ಯಾಣ
ಎತ್ತ ನೋಡಿದರ ಕೈಲಾಸ | ಗು | ಸಾ | ೧೦

ಅಂಗಳದ ಮಂಟಪಕ, ಲಿಂಗ ಬೆಳದಿಂಗಳವ
ಜಂಗ ನುಡಿಸಿದ ಕಲ್ಯಾಣ | ಗು | ಸಾ | ಜಂಗಮರ
ಸಂಗ ಶಿವಬೆಳಕ ನಿಜಪದಕ | ಗು | ಸಾ | ೧೧

ಕಲ್ಯಾಣ ಬಯಲಾಗ, ಎಲ್ಲ ಶರಣರು ಕೂಡಿ
ಬಲ್ಲವರು ಮಾತ ಹೇಳ್ಯಾರ | ಗು | ಸಾ | ಜನದಾಗ
ಹೊಲೆ೦ಬು ಸಬುದ ಮಾಯಾತ | ಗು | ಸಾ | ೧೨

ಮಾತು ಕುಲಹೊಲೆಯಲ್ಲ, ಜಾತಿ ಸೂತಕವಲ್ಲ
ನೀತಿ ನೀರ್ಬಳಕಿ ಕಲ್ಯಾಣ | ಗು | ಸಾ | ಮಹಮನೆಗೆ
ದಾತ ಬಸವಣ್ಣ ಶಿವಭಕ್ತ | ಗು | ಸಾ | ೧೩

ಶಿವಭಕ್ತಿ ಹೂ ಅರಳಿ, ಶಿವಭಕ್ತ ಬಸವಣ್ಣ
ಶಿವಣಾನ ತೊರೆಯು ಚನಬಸವ | ಗು | ಸಾ | ಪ್ರಭುದೇವ
ಶಿವಗಣ್ಣು ಲೋಕ ನೋಡುದಕೆ | ಗು | ಸಾ | ೧೪

ಈಸಿ ದಾಟುನ ಬಾರ, ಖಾಸ ಶರಣರ ಹಾಡಿ
ಬೀಸಿ ಹಾಡೂನ ಕಲ್ಯಾಣ | ಗು | ಸಾ | ಶರಣರಿಗೆ
ಹಾಸಿ ಈ ಮನವ ಸವಿಯಾಲೆ | ಗು | ಸಾ | ೧೫

ಓಂ ಶಿವನೆ ಬಸವಣ್ಣ, ಓಂ ಶಿವನೆ ಪ್ರಭುದೇವ
ಓಂ ಶಿವನ ಶಕ್ತಿ ಚನಬಸವ | ಗು | ಸಾ | ಕಲ್ಯಾಣ
ಓಂ ಶಿವನೆ ಶರಣು ಶರಣರಿಗೆ | ಗು | ಸಾ | ೧೬
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...