Home / ಕವನ / ಕವಿತೆ / ಕವಿತೆಗೊಂದು ಕಾಗದ

ಕವಿತೆಗೊಂದು ಕಾಗದ

ಒಂದು ತಿಂಗಳು ಇಂದು ಪೂರ್ಣವಾಯಿತು ಕವಿತೆ
ನಾವೀರ್ವರಾ ಇರುಳು ಅಗಲಿದಂದು;
ಮೌನ ಮೈತಳೆದಿತ್ತು ಮೊಗಬಾಡಿ ಹೋಗಿತ್ತು
ಕಣ್ಣ ಕೊನೆಯಂಚಿನಲಿ ಅಶ್ರುಬಿಂದು.
ಎದೆಗೆದೆಯ ಹೊಂದಿರಿಸಿ ಕುರುಳುಗಳ ನೇವರಿಸಿ
ತುಟಿಗಳಲಿ ಜೇನಿರಿಸಿ ರಮಿಸಿ ರಮಿಸಿ;
ಕಣ್ಣೊರಿಸಿಕೋ ಕವಿತೆ ಎಂದು ನಾ ನುಡಿದಾಗ
ಅಳಲ ತೊರೆಯೇ ಬಂತು ದಡವ ಸೂಸಿ.
ಕನಸಿನಲ್ಲಾದರೂ ಅಗಲಿಕೆಯು ಬರದಿರಲಿ
ಎಂದು ದಿನವೂ ಹೃದಯ ನುಡಿಯುತಿತ್ತು;
ಆದರೇನೊಂದು ದಿನ ಈ ದುಃಖ ಈ ಮೌನ
ಬರಲೆ ಬೇಕಿತ್ತಲ್ಲ – ಬಂದುದಾಯ್ತು!
ಕರುಳ ಬಳ್ಳಿಯೆ ಹರಿದು ಹೋಯಿತೆನುವಂತೆಯೇ
ಹೋಗಬಾರದ ನೀನು ಹೋದೆಯೇನು!
ಆ ದಿನದ ಆ ಇರುಳು ಆ ಮಾತು ಆ ನೆನಹು
ಆಜನ್ಮಪರ್ಯಂತ ಕೊನೆಯದೇನು.
ಎದೆಯಾಳ ತಳದಲ್ಲಿ ಏನೊ ತಳಮಳವಲ್ಲಿ
ದೇಹವನೆ ಸುಡುತಿಹುದು ರಕ್ತ ಹೀರಿ
ದಿನ ದಿನವು ಆ ನೆನವೆ ತಪ್ತಾಗ್ನಿ ರಸದಂತೆ
ತೂರಿ ಬರುತಿಹುದಲ್ಲ ಬೆಂಕಿ ಕಾರಿ!
ನಿನ್ನ ಪ್ರೀತಿಯೆ ನನಗೆ ಊರುಗೋಲಾಗಿಹುದು
ಈ ಬಾಳಿನುದ್ದಕೂ ದಾರಿದೀಪ
ನಾವಳಿದು ಮಣ್ಣಿನಲಿ ಮಣ್ಣಾಗಿ ಹೋದರೂ
ಪ್ರೀತಿಗಾದರು ಬೇಡ ದೈವಶಾಪ.
*****
Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...