Home / ಕವನ / ಕವಿತೆ / ಹೂವು ಹಣ್ಣು ಬಿಡಲಿ

ಹೂವು ಹಣ್ಣು ಬಿಡಲಿ

ಗಳಿಗೆ ಗಳಗೆಗೂ ಎಜೆಯ ಕಡಲಿನಲಿ
ಅಳಲ ತೆರೆಗಳೆದ್ದು;
ದಡಕೆ ಅಪ್ಪಳಿಸಿ ಮನವ ಕಲಕುತಿವೆ
ಕಳೆದ ನೆನಹು ತಂದು.
ಹಗಲು ಮನಸಿನಲಿ ಇರುಳು ಕನಸಿನಲಿ
ಚಿತ್ರ ನೂರು ನೂರು!
ಮುಗಿಲ ತೇರಿನಲಿ ತೇಲಿ ಬಂದಿರಲು
ಕಣ್ಣ ತುಂಬ ನೀರು.
ಕರುಣೆ ಹೂವಿನಲಿ ಎದೆಯ ಹಾಲಿನಲಿ
ನಕ್ಕ ತಂಗಿ ತಾಯಿ!
ಅಗಲಿ ಹೋಗಿಹರು ಮರಳಿ ಬರದಿಹರು
ಅಕ್ಕ ಅಣ್ಣ ಗೌರಿ.
ಅವರ ಎದೆಯ ಉಲಿ ಮೌನವಾಂತಿರಲು
ಶಿವನೆ ಬಾಳಿದೇನು!
ಏಸೊ ನೆನಹುಗಳು ‘ಪ್ರೀತಿ ಗುರುತು’ಗಳು
ಎಲ್ಲ ಕನಸು ಏನು?
ಮನವು ಮಿಡಿದಿರಲು ಹೃದಯವಳುತಿರಲು
ಕಣ್ಣು ತುಂಬಿ ಹರಿದು;
ನನ್ನ ಕರುಣಾಳು ತಾಯಿ ಕನಸಿನಲಿ
ನುಡಿವಳೆದೆಗೆ ಬಂದು.
ಅಗಲಿ ಹೋದವರು ಮರಳಿ ಬರದಿರಲು
ಮೂಕ ಶೋಕವೇನು?
ಬರಲಿ ಬಂದವರು ಎಲ್ಲ ನಿನ್ನವರು
ಕೊನೆಗೆ ನಿನಗೆ ನೀನು.
ನಿನ್ನ ಇರವಿನಲಿ ಧೈರ್ಯನವಿರುತಿರಲಿ
ಮರೆತೆಯೇನು ಎಲ್ಲ?
ಮಾತು ಮಾತಿನಲಿ ಪ್ರೀತಿ ಹರಿದಿರಲಿ
ಬಾಳು ಬೇವು ಬೆಲ್ಲ.
ನಿನ್ನ ಎದೆಯ ಗಿರಿ ಕರಗಿ ನೀರಾಗಿ
ಹರಿದು ಬರುವೆ ನಾನು;
ಕವಿಯ ಬಾಳ್ಗುರಿಗೆ ತೋರು ಬೆರಳಾದ
ಅನ್ನಪೂರ್ಣೆ ನಾನು.
ನಿನ್ನ ಕಣ್ಣಿನಲಿ ನನ್ನ ಹೃದಯವನು
ಅಳೆದು ನೋಡಬಹುದು;
ಕಣ್ಣ ಮಿಂಚಿನಲಿ ಕಂಡ ಬೆಳಕಿನಲಿ
ಗುರಿಯ ಕಾಣಬಹುದು.
೧೦
ನಾನು ಹರಿದಿರುವ ಎದೆಯ ಭೂಮಿಯಲಿ
ಕಾವ್ಯ ಸಸಿಯು ಉದಿಸಿ
ನಭಕು ಬೆಳೆದಿರಲಿ ನೆರಳು ನೀಡಿರಲಿ
ಹೂವು ಹಣ್ಣು ಬಿಡಲಿ!
*****
Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...