Home / ಕವನ / ಕವಿತೆ / ಹೂವು ಹಣ್ಣು ಬಿಡಲಿ

ಹೂವು ಹಣ್ಣು ಬಿಡಲಿ

ಗಳಿಗೆ ಗಳಗೆಗೂ ಎಜೆಯ ಕಡಲಿನಲಿ
ಅಳಲ ತೆರೆಗಳೆದ್ದು;
ದಡಕೆ ಅಪ್ಪಳಿಸಿ ಮನವ ಕಲಕುತಿವೆ
ಕಳೆದ ನೆನಹು ತಂದು.
ಹಗಲು ಮನಸಿನಲಿ ಇರುಳು ಕನಸಿನಲಿ
ಚಿತ್ರ ನೂರು ನೂರು!
ಮುಗಿಲ ತೇರಿನಲಿ ತೇಲಿ ಬಂದಿರಲು
ಕಣ್ಣ ತುಂಬ ನೀರು.
ಕರುಣೆ ಹೂವಿನಲಿ ಎದೆಯ ಹಾಲಿನಲಿ
ನಕ್ಕ ತಂಗಿ ತಾಯಿ!
ಅಗಲಿ ಹೋಗಿಹರು ಮರಳಿ ಬರದಿಹರು
ಅಕ್ಕ ಅಣ್ಣ ಗೌರಿ.
ಅವರ ಎದೆಯ ಉಲಿ ಮೌನವಾಂತಿರಲು
ಶಿವನೆ ಬಾಳಿದೇನು!
ಏಸೊ ನೆನಹುಗಳು ‘ಪ್ರೀತಿ ಗುರುತು’ಗಳು
ಎಲ್ಲ ಕನಸು ಏನು?
ಮನವು ಮಿಡಿದಿರಲು ಹೃದಯವಳುತಿರಲು
ಕಣ್ಣು ತುಂಬಿ ಹರಿದು;
ನನ್ನ ಕರುಣಾಳು ತಾಯಿ ಕನಸಿನಲಿ
ನುಡಿವಳೆದೆಗೆ ಬಂದು.
ಅಗಲಿ ಹೋದವರು ಮರಳಿ ಬರದಿರಲು
ಮೂಕ ಶೋಕವೇನು?
ಬರಲಿ ಬಂದವರು ಎಲ್ಲ ನಿನ್ನವರು
ಕೊನೆಗೆ ನಿನಗೆ ನೀನು.
ನಿನ್ನ ಇರವಿನಲಿ ಧೈರ್ಯನವಿರುತಿರಲಿ
ಮರೆತೆಯೇನು ಎಲ್ಲ?
ಮಾತು ಮಾತಿನಲಿ ಪ್ರೀತಿ ಹರಿದಿರಲಿ
ಬಾಳು ಬೇವು ಬೆಲ್ಲ.
ನಿನ್ನ ಎದೆಯ ಗಿರಿ ಕರಗಿ ನೀರಾಗಿ
ಹರಿದು ಬರುವೆ ನಾನು;
ಕವಿಯ ಬಾಳ್ಗುರಿಗೆ ತೋರು ಬೆರಳಾದ
ಅನ್ನಪೂರ್ಣೆ ನಾನು.
ನಿನ್ನ ಕಣ್ಣಿನಲಿ ನನ್ನ ಹೃದಯವನು
ಅಳೆದು ನೋಡಬಹುದು;
ಕಣ್ಣ ಮಿಂಚಿನಲಿ ಕಂಡ ಬೆಳಕಿನಲಿ
ಗುರಿಯ ಕಾಣಬಹುದು.
೧೦
ನಾನು ಹರಿದಿರುವ ಎದೆಯ ಭೂಮಿಯಲಿ
ಕಾವ್ಯ ಸಸಿಯು ಉದಿಸಿ
ನಭಕು ಬೆಳೆದಿರಲಿ ನೆರಳು ನೀಡಿರಲಿ
ಹೂವು ಹಣ್ಣು ಬಿಡಲಿ!
*****
Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...