Home / ಕವನ / ಅನುವಾದ / ಆಳೌ, ಬ್ರಿಟಾನಿಯಾ!

ಆಳೌ, ಬ್ರಿಟಾನಿಯಾ!

ಆದಿಯಲಿ, ದೈವಾಜ್ಞೆಯಲ್ಲಿ ಬ್ರಿಟನ್ ಭೂಮಾತೆ
ನೀಲಜಲರಾಶಿಯಿಂದುದ್ಭವಿಸಿದಂದು,
ಆದರಿಸಿ, ಅಭಿಮಾನದೇವತೆಗಳೊಲಿದು, ದಯ
ಪಾಲಿಸಿದರಾಕೆಗೀ ಶಾಸನವ ಹರಸಿ-
“ಆಳೌ, ಬ್ರಿಟಾನಿಯಾ! ಆಳ ತೆರೆಗಳನು!
ಎಂದಿಗೂ ಬ್ರಿಟನನಡಿಯಾಳೆನಿಸಿಕೊಳನು!”
ನಿನ್ನ ಪುಣ್ಯದ ಪಡೆದು ಬಾರದಿಹ ಜನವೆಲ್ಲ
ಕ್ರೂರರಾಜರ ಬಾಧೆಯಿಂದ ಕೃಶವಾಗಿ,
ನಿನ್ನ ಮಹಿಮೆಗೆ ಹೆದರಿ, ಕರುಬಿ, ಮಿಡಿಯುತ್ತಿರಲು,
ಧೀರೆ, ಸ್ವಾತಂತ್ರ್ಯದಲಿ ನೀನು ವರ್ಧಿಸುವೆ!
ವೈರಿಗಳು ಹೊಡೆದಷ್ಟು, ಘೋರರೂಪವ ತಾಳಿ,
ಧೈರ್ಯಗಾಂಭೀರ್ಯದಲಿ ನಸುನಗುತ ನಿಲುವೆ:
ಕೀರಿ, ಗಗನವ ಸೀಳಿ, ಬಿರುಗಾಳಿ ಕಿತ್ತಷ್ಟು,
ಬೇರೂರಿಕೊಳುವಂತೆ ನಿನ್ನಡವಿತೇಗು!
ಮಲೆತು ದುರ್ನೀತಿಯಲಿ ನಿನ್ನ ರಾಜರು ಕೆಟ್ಟು,
ಹಿಡಿದು ಸಂಕಲೆಯಿಟ್ಟು ಜಗ್ಗಿಸಲು ಬರಲು,
ಮಲಗಿದ್ದ, ಸಿಂಹದಂತುರಿದೆದ್ದು ತೆಗೆದೋದರಿ,
ಬಿಡುಗಡೆಯ ಕೈಕೊಂಡು ಕೀರ್ತಿಯನು ಪಡೆವ!
ನಿನ್ನದೆಯೆ ಹೊಂಬಣ್ಣ ತುಂಬಿ ತೂಗುವ ಬಯಲು,
ನಿನ್ನದೆಯೆ ವರ್ತಕರ ಸಿರಿ ಮೆರೆವ ಹೊಳಲು;
ನಿನ್ನದೆಯೆ ಸಾಗರದ ಸತ್ವಸಾಮ್ರಾಜ್ಯವೂ,
ನಿನ್ನದೆಯೆ ತೆರೆ ಬಳಸಿಬರುವೆಲ್ಲ ಕರೆಯು!
ವಾಣಿಯರು ಸ್ವಾತಂತ್ರ್ಯ ದಕ್ಕರೆಗೆ ನಡೆತಂದು
ನಿನ್ನ ಭೋಗದ ಭೂಮಿಯಲ್ಲೆ ನೆಲಸುವರು;
ರಾಣಿದೀವಿಯೆ, ನಿನ್ನ ಚೆಲುವೆಯರ ಪ್ರೇಮದಲಿ
ನಿನ್ನ ವೀರರು ಧರ್ಮವನ್ನು ಕಾಯುತಿಹರು!
ಆಳೌ, ಬ್ರಿಟಾನಿಯಾ! ಆಳು ತೆರೆಗಳನು!
ಎಂದಿಗೂ ಬ್ರಿಟನನಡಿಯಾಳೆನಿಸಿಕೊಳನು!”
*****
THOMSON (1700 -1748) : Rule Britannia
Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...