Home / ಕವನ / ಅನುವಾದ / ಆಪ್ರೋದಿತೆ

ಆಪ್ರೋದಿತೆ

ಮೂಲ: ಸ್ಯಾಫೋ
(ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ)

ದೇವಿ ಆಪ್ರೋದಿತೆಯೆ
ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ!
ಎಲ್ಲರಿಗು ಮಿಗಿಲು
ಸಾವಿಗೂ ದಿಗಿಲು
ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ
ಅಂಗಲಾಚುವೆ ದೇವಿ ಬಳಿಸಾರಿ ಅಡಿಯ
ದುಃಖ ಕೊರಗುಗಳಿಂದ ಸೀಳದಿರು ಎದೆಯ
ಹಿಂದೆ ನೀ ಬಂದಂತೆ ಎಷ್ಟೊ ಸಲ ಬಳಿಗೆ
ಬಾರೆ ಆಪ್ರೋದಿತೆ, ಬಾ ನನ್ನ ಕಡೆಗೆ

ದೂರದಲಿ ಕೇಳುತಿರುವಂತೆಯೇ ನನ್ನ ದನಿ
ತಂದೆ ಸ್ಯೂಸನ ದಿವ್ಯ ಮಂದಿರವನಿಳಿದು
ಮುಗಿಲಿರದ ನೀಲಿಯಲ್ಲಿ ರೆಕ್ಕೆಗಳ ಪಟಪಟಿಸಿ ಗುಬ್ಬಚ್ಚಿ ಹಿಂಡು
ಸಿಂಗಾರದಲಿ ಎಳೆವ ಬಂಗಾರ ರಥವೇರಿ ಬರುತಿದ್ದೆ ಬಳಿಗೆ
ಬಂದು ಬದಿನಿಂತು ಆ ಮಧುರ ಅಧರದಲ್ಲಿ
ಸೂಸುತಿರೆ ಸವಿನಗೆ
ನನ್ನ ಕೇಳಿದೆ ನೀನು
“ಏನು ಹೇಳೇ ಹೆಣ್ಣ, ಏನು ನಿನ್ನರಕೆ
ಎದೆಗೆ ಕಿಚ್ಚಿಟ್ಟಂಥ ಹುಚ್ಚು ಬಯಕೆ?
ನನ್ನ ಮಾಯೆಯ ನೆರವು ಬೇಕೆ ಅದಕೆ?
ನಿನ್ನ ತೋಳಲಿ ಯಾರ ತಂದು ಕೆಡವಲಿ ಹೇಳೆ
ಯಾರಿಂದ ನಿನಗಿಂಥ ಗೋಳೆ?”
ಕಂಡ ಕ್ಷಣ ದೂರ ಓಡಿದರು ಬಲು ಬೇಗನೇ
ಹತ್ತುವಳು ಬೆನ್ನು
ಕೊಟ್ಟ ಕಾಣಿಕೆಯ ಕಿತ್ತೆಸೆಯುವಳು ಆದರೂ
ಕೊಡುಗೈಯ ಹೆಣ್ಣು
ಪ್ರೀತಿಸಳು ಯಾರನೂ, ಆದರೂ ನೀನೊಲಿಯೆ
ಮಾಗುವುದು ಹಣ್ಣು
ಬಾ ಬೇಗ ಈ ಎಲ್ಲ ದುಖ ಯಾತನೆಯಿಂದ
ಎತ್ತಿ ಕಾಪಾಡು
ತೊಡಕೆಲ್ಲ ಪರಿಹರಿಸಿ ಎದೆ ಬಯಸಿದಂಥ
ಇಷ್ಟಾರ್ಥಗಳ ನೀಡು
ಉತ್ತರಿಸು ಬಾ ರಾಣಿ
ಬದಿನಿಂತು ಕೈಗೆ ಕೈ ಹೆಣೆದು ಮುದ ನೀಡು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...