Home / ಲೇಖನ / ವಿಜ್ಞಾನ / ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

ಸಸ್ಯಗಳಿಂದ ಏಡ್ಸ್, ನೀರೋಧಕ ಚುಚ್ಚು ಮದ್ದು

‘ಏಡ್ಸ್’ರೋಗವೆಂದರೆ ಮಾರಕವೆಂದು, ಮರಣಾಂತಿಕವೆಂದೂ ಜನ ಹೆದರುತ್ತಾರೆ. ಇದರ ಶಮನಕ್ಕೆ ಅನೇಕ ಔಷಧಿಗಳು ಬಂದರೂ ಅಷ್ಟೇನೂ ಪರಿಣಾಮ ಬೀರಿಲ್ಲ. ಇಂಥಹ ರೋಗಗಳ ನಿವಾರಣೆಗಾಗಿ ಇತ್ತೀಚೆಗೆ ಜೈವ ತಂತ್ರಜ್ಞಾನ ವಿಧಾನಗಳಿಂದ ಸಸ್ಯಾಧಾರಿತ ಔಷಧಗಳನ್ನು ತಯಾರಿಸಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ವಿಧಾನಕ್ಕೆ Chemical virus particle platform-cvvp ಎಂದು ಕರೆಯುತ್ತಾರೆ. ಕೇಂಬ್ರಿಚ್ಡ್ ವಿಶ್ವದ್ಯಾನಿಲಯದ ಪ್ರಯೋಗಾಲಯದಲ್ಲಿ ಪೆಪ್ಟೈಡ್, ಮತ್ತು ಪ್ರೊಟೀನ್‌ಗಳನ್ನು ಬೆಳೆಸಿ ನಂತರ ಈ ಎರಡರಿಂದ ಚುಚ್ಚುಮದ್ದು ಮತ್ತು ಔಷಧಿಯನ್ನು ತಯಾರಿಸುವ ಸಂಶೋಧನೆಯಾಗಿದೆ. ಕೆಲವೇ ದಿನಗಳಲ್ಲಿ ಸಸ್ಯಗಳ ಭಾಗದಲ್ಲಿ ಪೆಪ್ಟೈಡ್ ಬೆಳೆಯಲು ಆರಂಭಿಸುತ್ತದೆ. ಅದೇವೇಳೆಗೆ ಸಸ್ಯಗಳ ಒಳನುಗ್ಗಿದ ಸಂಶೋಧಿತ ವಿಷಾಣು (Virus) ಗಳು ವಿಭಜನೆಯಿಂದ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಈ ವಿಷಾಣುಗಳನ್ನು ಈಗ ಕಣ ರೂಪದಲ್ಲಿ ಸುಲಭವಾಗಿ ಬೇರ್‍ಪಡಿಸಬಹುದು. ಈ ಎಲ್ಲ ಕಣಗಳಲ್ಲಿ ಪೆಪ್ಟೈಡ್ ಮತ್ತು ಪ್ರೊಟೀನ್‌ಗಳ ಬಹುಖಂಡ ಪ್ರತಿಗಳು ಇರುತ್ತವೆ. ಹೀಗೆ ತಯಾರಾದ ಪೆಪ್ಟೈಡ್‌ ಮತ್ತು ಪ್ರೊಟೀನ್‌ಗಳನ್ನು ಪರಿಶ್ಕರಿಸಿ ಪ್ರಾರಂಭಿಕ ಇಂಜಕ್ಷನ್ ಮೂಲಕ ಕೊಡುವ ಚುಚ್ಚು ಮದ್ದನ್ನು ತಯಾರು ಮಾಡಬಹುದು. ಈಗ ವಿಷಾಣು ಚುಚ್ಚಿಸಿಕೊಂಡ ಸಸ್ಯಗಳ ಎಲೆಗಳಿಂದ ಪೆಪ್ಟೈಡ್‌ ಮತ್ತು ಪ್ರೋಟೀನ್‌ಗಳನ್ನು ಹೊರತೆಗೆಯುವ ಕಾರ್‍ಯಸಾಗಿದೆ.

ಬ್ರಿಟನ್ನಿನ ವಿಜ್ಞಾನಿಗಳ ಪ್ರಕಾರ ಸಸ್ಯ ಮತ್ತು ವಿಷಾಣುಗಳ ವಂಶವಾಹಿನಿಗಳ ಪ್ರಕ್ರಿಯೆಯಿಂದ ಇಂಥಹ ಸಕ್ರಿಯ ಪೆಪ್ಟೈಡ್‌ನಿಂದ ಮುಂದಿನ ಒಂದು ದಶಕದ ಒಳಗಾಗಿ ಮನುಷ್ಯ ಮತ್ತು ಪಶುಗಳಿಗೆ ಉತ್ತಮ ಚುಚ್ಚುಮದ್ದು ಹಾಗೂ ಇತರ ಔಷಧಿಗಳನ್ನು ತಯಾರುಮಾಡಬಹುದಾಗಿದೆ. ಸಸ್ಯಗಳಿಂದ ಪಡೆದ ವಿಷಾಣುಗಳು ಶರೀರದ ತಾಪಮಾನಕ್ಕೆ ಸ್ಥಿರವಾಗಿರುತ್ತವೆ. ಅಲ್ಲದೇ ಅವುಗಳ ಮೇಲೆ ಆಮ್ಲ ಮತ್ತು ಪಾಚಕ ಎಂಜಾಮ್‌ (ಕಿಣ್ವಗಳೂ ಪ್ರಭಾವ ಬಿರುವುದಿಲ್ಲ. ಆದ್ದರಿಂದ ಇದರ ಚುಚ್ಚುಮದ್ದಿನ ಬದಲಾಗಿ ನೇರವಾಗಿ ಬಾಯಿಂದ ನುಂಗುವ ಔಷಧಿಯಂತೆಯೂ ಬಳಸಬಹುದು. ಸಸ್ಯಗಳಿಂದ ಚುಚ್ಚುಮದ್ದು ಮತ್ತು ಔಷಧಿಗಳನ್ನು ತಯಾರಿಸುವ ಸಂಶೋಧನೆಗಾಗಿ ನೆದರ್ಲ್ಯಾಂಡ್ ಪ್ರಾಣಿವಿಜಾನ ಮತ್ತು ಆರೋಗ್ಯ ಸಂಸ್ಥೆ ಹಾಗೂ ಡೆನ್ಮಾರ್ಕಿನ ಸ್ಟೇಟ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಫಾರ್ ವೈರಾ‌ಲಜಿಯಂತಹ ಸಂಸ್ಥೆಗಳು ಸಹಾಯಕ್ಕೆ ಬಂದಿವೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...