Home / ಕಥೆ / ಕಿರು ಕಥೆ / ಗುಡುಗಿನ ಧ್ವನಿಯಲ್ಲಿ ಗುರು

ಗುಡುಗಿನ ಧ್ವನಿಯಲ್ಲಿ ಗುರು

ಒಬ್ಬ ನಿಷ್ಠಾವಂತ ಸಾಧಕ ಶ್ರಾವಣದ ಭೋರ್ಗರೆವ ಮಳೆಯಲ್ಲಿ ಒಂಟಿ ಕಾಲ ಮೇಲೆ ನಿಂತು ತಪಗೈಯುತ್ತಿದ್ದ. ಧಾರಕಾರ ಮಳೆ ಹುಯ್ಯುತ್ತಿತ್ತು. ಮಳೆಯ ತೀವ್ರತೆ ಚಾವಟಿಯಂತೆ ಥಳಥಳಿಸುತ್ತಿತ್ತು. ಮೇಲೆ ಆಲಿಕಲ್ಲುಗಳು ಉದುರುತ್ತಿದ್ದವು. ಕಾರ್ಮೊಡಗಳು ಒಂದನ್ನೊಂದು ಘರ್ಷಿಸಿ ಘರ್ಜನೆ ಮಾಡುತಿತ್ತು. ಗುಡುಗು ಸಿಡಿಲು ಧ್ವನಿ ಎದೆ ನಡುಗಿಸುತಿತ್ತು. ಮಿಂಚು ಕಣ್ಣು ಕೋರೈಸುತ್ತಿತ್ತು. ಕಾಡಿನಲ್ಲಿ ಕಟ್ಟಿಗೆ ಶೇಖರಿಸಲು ಬಂದ. ಒಬ್ಬ ಬಡವ ಈ ಸಾಧಕನ ತಪಸ್ಸು ನೋಡಿ ಬೆರಗಾಗಿ ಕೇಳಿದ.

“ಏ! ಸಾಧಕ, ನಿನ್ನ ಈ ತಪಸ್ಸಿನಿಂದ ಏನು ಪಡೆಯುತ್ತಿರುವೆ?” ಎಂದ.

ಸಾಧಕ ಹೇಳಿದ- “ಗುಡುಗಿನಲ್ಲಿ ಗುರುವಿನ ಧ್ವನಿ ಕೇಳುತ್ತಿದೆ. ಸಿಡಿಲು ಬಡಿದು ನನ್ನ ಅಜ್ಞಾನ ತೊಲಗುತ್ತಿದೆ. ಮಿಂಚಿನಲ್ಲಿ, ಜ್ಞಾನೋದಯವಾಗುತ್ತಿದೆ. ನನ್ನ ಬರಡಾದ ಹೃದಯ ಮಳೆಯಲ್ಲಿ ಫಲವತ್ತಾಗುತ್ತಿದೆ. ಕಾರ್ಮೊಡಗಳು ಕರಗಿ ನನ್ನ ಬಾಳು ಶುಭ್ರ ನೀಲ ಆಗಸದಂತಾಗುತ್ತಿದೆ.” ಎಂದಾಗ ಕಟ್ಟಿಗೆ ಶೇಖರಿಸುವ ಬಡವನಿಗೆ ಏನೂ ಅರ್ಥವಾಗಲಿಲ್ಲ.

ಅವನಿಗೆ ಊಟಕ್ಕೆ ಬೇಕಾದ ಕಟ್ಟಿಗೆಯ ಉರಿಯಲ್ಲಿ ಅವನಿಗೆ ಬಾಳ ದೀಪ್ತಿಯ ಪೂರ್ಣತೆ ಸಿಕ್ಕಿತ್ತು.

“ಪೂರ್ಣತೆಗೆ ಅದೆಷ್ಟು ಕಠಿನ ಮಾರ್ಗ, ಅದೆಷ್ಟು ಸುಲಭ ಮಾರ್ಗ” ಎಂದು ಮನವು ಯೋಚಿಸಿತು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...