Home / ಕಥೆ / ಕಿರು ಕಥೆ / ಗುಡುಗಿನ ಧ್ವನಿಯಲ್ಲಿ ಗುರು

ಗುಡುಗಿನ ಧ್ವನಿಯಲ್ಲಿ ಗುರು

ಒಬ್ಬ ನಿಷ್ಠಾವಂತ ಸಾಧಕ ಶ್ರಾವಣದ ಭೋರ್ಗರೆವ ಮಳೆಯಲ್ಲಿ ಒಂಟಿ ಕಾಲ ಮೇಲೆ ನಿಂತು ತಪಗೈಯುತ್ತಿದ್ದ. ಧಾರಕಾರ ಮಳೆ ಹುಯ್ಯುತ್ತಿತ್ತು. ಮಳೆಯ ತೀವ್ರತೆ ಚಾವಟಿಯಂತೆ ಥಳಥಳಿಸುತ್ತಿತ್ತು. ಮೇಲೆ ಆಲಿಕಲ್ಲುಗಳು ಉದುರುತ್ತಿದ್ದವು. ಕಾರ್ಮೊಡಗಳು ಒಂದನ್ನೊಂದು ಘರ್ಷಿಸಿ ಘರ್ಜನೆ ಮಾಡುತಿತ್ತು. ಗುಡುಗು ಸಿಡಿಲು ಧ್ವನಿ ಎದೆ ನಡುಗಿಸುತಿತ್ತು. ಮಿಂಚು ಕಣ್ಣು ಕೋರೈಸುತ್ತಿತ್ತು. ಕಾಡಿನಲ್ಲಿ ಕಟ್ಟಿಗೆ ಶೇಖರಿಸಲು ಬಂದ. ಒಬ್ಬ ಬಡವ ಈ ಸಾಧಕನ ತಪಸ್ಸು ನೋಡಿ ಬೆರಗಾಗಿ ಕೇಳಿದ.

“ಏ! ಸಾಧಕ, ನಿನ್ನ ಈ ತಪಸ್ಸಿನಿಂದ ಏನು ಪಡೆಯುತ್ತಿರುವೆ?” ಎಂದ.

ಸಾಧಕ ಹೇಳಿದ- “ಗುಡುಗಿನಲ್ಲಿ ಗುರುವಿನ ಧ್ವನಿ ಕೇಳುತ್ತಿದೆ. ಸಿಡಿಲು ಬಡಿದು ನನ್ನ ಅಜ್ಞಾನ ತೊಲಗುತ್ತಿದೆ. ಮಿಂಚಿನಲ್ಲಿ, ಜ್ಞಾನೋದಯವಾಗುತ್ತಿದೆ. ನನ್ನ ಬರಡಾದ ಹೃದಯ ಮಳೆಯಲ್ಲಿ ಫಲವತ್ತಾಗುತ್ತಿದೆ. ಕಾರ್ಮೊಡಗಳು ಕರಗಿ ನನ್ನ ಬಾಳು ಶುಭ್ರ ನೀಲ ಆಗಸದಂತಾಗುತ್ತಿದೆ.” ಎಂದಾಗ ಕಟ್ಟಿಗೆ ಶೇಖರಿಸುವ ಬಡವನಿಗೆ ಏನೂ ಅರ್ಥವಾಗಲಿಲ್ಲ.

ಅವನಿಗೆ ಊಟಕ್ಕೆ ಬೇಕಾದ ಕಟ್ಟಿಗೆಯ ಉರಿಯಲ್ಲಿ ಅವನಿಗೆ ಬಾಳ ದೀಪ್ತಿಯ ಪೂರ್ಣತೆ ಸಿಕ್ಕಿತ್ತು.

“ಪೂರ್ಣತೆಗೆ ಅದೆಷ್ಟು ಕಠಿನ ಮಾರ್ಗ, ಅದೆಷ್ಟು ಸುಲಭ ಮಾರ್ಗ” ಎಂದು ಮನವು ಯೋಚಿಸಿತು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...