ಬಾಡಿಗೆ ತಾಯ್ತನ

ತಾಯಿ ದೊರಕುತ್ತಾಳೆ
ಇಲ್ಲಿ ಅಗ್ಗದ ದರದಲ್ಲಿ
ತಾಯಿಯ ತಾಯ್ತನ ಬಂದಿತು
ವ್ಯಾಪಾರೀಕರಣದ ಕಕ್ಷೆಗೆ
ಜಾಗತೀಕಕರಣದ ಉದ್ಯಮಕೆ.

ತಾಯಿಯ ಗರ್‍ಭವೂ ಬಿಡದೆ
ಮಾರುಕಟ್ಟೆಗೆ ತಂದಿದ್ದೇವೆ
ದುಡ್ಡಿನ ದಣಿಗಳೇ ಬನ್ನಿ
ಮಾರಾಟದ ಬೋಲಿಗಳನು
ಎಗ್ಗಿಲ್ಲದೆ ಕೂಗಬನ್ನಿ.

ಹರಿದು ಬಂದವು ಮಾರುಕಟ್ಟೆಗೆ
ಹಲವು ಹದಿನಾರು ಉದ್ಯೋಗಗಳು
ಹೊಸದೊಂದು ಸೇರ್‍ಪಡೆ ಅದಕ
ಗರ್‍ಭಕೋಶದ ಉದ್ಯಮ.

ಅಗ್ಗದ ದರದಲ್ಲಿ ಸಿಕ್ಕುತ್ತಾರೆ
ಮಾರುಕಟ್ಟೆಯಲಿ ಮಾತೆಯರು
ವಿದೇಶಿ ಗ್ರಾಹಕರಿಗಾಗಿಯೇ
ಇದ್ದಾರಿಲ್ಲಿ ಅಗ್ಗದ ತಾಯಂದಿರು.

ಹೊಸದೊಂದು ಧಂದೆಯಾಗಿ
ಬಾಡಿಗೆಯ ತಾಯ್ತನ
ಸಂತಾನೋದ್ಯಮದ ಕೆಲಸ
ಸಂತಾನಹೀನರಿಗೆ ಆಕರ್‍ಷಕ ತಾಣ.

ಧರ್‍ಮದ ಠೇಕೇದಾರರೇ ಬನ್ನಿ
ಮಾತೃ ದೇವೂಭವದ ನಾಡಿನಲಿ
ತುತ್ತಿನ ಚೀಲ ತುಂಬಿಕೊಳ್ಳಲು
ತಾಯ್ತನ ಮಾರಾಟಕ್ಕಿದೆ ಬನ್ನಿ.
ತಡೆಯುವದಾದರೆ ತಡೆಯಬನ್ನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೆಯ ಆಗಮನ ತಿಳಿಸುವ ಉಪಕರಣ
Next post ಹಸು-ಕರು

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…