Home / ಕವನ / ಕವಿತೆ / ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು

ನಾವಿಂದು ಮಾತಾಡಬೇಕಾಗಿರುವುದು
ಮಂದೆಗಳ ಮುಂದೆ ಒಡಿಕುಗಡಿಗೆಗಳ ಕುಡುಕ ಶಬ್ದಗಳನ್ನಲ್ಲ
ಕಪ್ಪು ಮುಖವ ಬಿಳಿ ಮುಖವಾಡದಿಂದ ಮುಚ್ಚುವ
ಕಡ್ಡಿಯನ್ನೂ ಚಲಿಸಲಾಗದ ಸ್ವರ್ಗ ಪುರಾಣವನ್ನಲ್ಲ.
ಮಂಕು ಹಿಡಿದ ಮಂತ್ರಗಳನ್ನಲ್ಲ, ತುಕ್ಕುಹಿಡಿದ ತಂತ್ರಗಳನ್ನಲ್ಲ
ದಂತಗೋಪುರಗಳಲ್ಲಿ ಕುಳಿತು
ಹೂವು-ಜೇನು, ನಾರಿ-ಸೀರೆ, ಇಂದ್ರ-ಚಂದ್ರರ, ಗಾಳಿಬುರುಡೆಯನ್ನಲ್ಲ
ನೆಲಕಿಳಿಯದ ಭೂತ ಬೆಂತರಗಳೊಡನಲ್ಲ
ಮಣ್ಣ ರುಚಿಕಾಣದ ಅಪ್ಸರೆಯರೊಡನಲ್ಲ
ಇಹದಲ್ಲಿಳಿದುಬರದ ಪರದ ಪರದಾಟವನ್ನಲ್ಲ

ಮಾತಾಡಲು ಮಾತೇ ಬೇಕೇನು?

ಬಾಯೆಂಬ ತೂತೇ ಬೇಕೇನು?

ಕರೆವ ಕರಿಭವಿಷ್ಯದೊಡನೆ, ಕಲ್ಲಾದ ಮಣ್ಣಿನೊಡನೆ
ಮಣ್ಣಾದ ಮಾನವತೆಯೊಡನೆ
ಉರಿಬಿಸಿಲು ಮೊರೆಗಾಳಿ ಹರಿನೀರು ಸುರಿಮಳೆ ಬರಿವಾಸ್ತವದೊಡನೆ
ಅಳುಮೊಗ ಕೊಳೆತ ಮತಿ ಎಲುಬುಗೂಡಿನ ಗುಡಿಸಲುಗಳೊಡನೆ
ಬೆವರ ಹನಿ ರಕ್ತ ಬಿಂದುಗಳಿಂದ
ಕೈ ಬೆರಳು, ತೋಳು ಕಾಲುಗಳ ಉಕ್ಕಿನ ಖಂಡಗಳಿಂದ
ಒಡಲ ವೀರ್ಯದಿಂದ ಸಾಹಸದ ತೂರ್ಯದಿಂದ
ಹಾರೆ ಸಲಿಕೆ ಸುತ್ತಿಗೆ ಚಮ್ಮಟಿಗೆಗಳಿಂದ
ಗ್ರಂಥ ದೀಪಗಳಿಂದ ಪ್ರನಾಳ ಭೂತಕನ್ನಡಿಗಳಿಂದ
ಎಲ್ಲಕ್ಕೂ ಒಳಗಿಳಿದು ಮಿದುಳುಬಳ್ಳಿಯಿಂದ ಮನದ ಮಾನದಿಂದ
ಬಿಚ್ಚದೆಯ ಮಿಡಿತದಿಂದ ಮಾನವತೆಯ ಏಕನಾಡಿ ಸೂತ್ರದಿಂದ
ನಾವಿಂದು ಮಾತಾಡಬೇಕು
ಅಂದರೆ ಮಾಡಬೇಕು
ಮಾತು ಮಾಡಿದಂತಿರಬೇಕು
ಮಾಡಿದ್ದೇ ಮಾತಾಗಬೇಕು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...