Home / ಕವನ / ಕವಿತೆ / ಬಸವ : ಅಂದು-ಇಂದು

ಬಸವ : ಅಂದು-ಇಂದು

ಬಸವ
ನಿನ್ನ ಕಾಲಕ್ಕೂ
ನನ್ನ ಕಾಲಕ್ಕೂ
ವ್ಯತ್ಯಾಸವೇನಿಲ್ಲ!
ಆದರೆ
ನಿನಗೂ
ನನಗೂ
ವ್ಯತ್ಯಾಸ ಬಹಳ!

ಬಸವ
ನಿನ್ನ ವಿಭೂತಿಗೂ
ನನ್ನ ವಿಭೂತಿಗೂ
ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ
ವ್ಯತ್ಯಾಸವಿಲ್ಲ
ಆದರೆ
ಅದರೊಳಗಿನ ತತ್ವದ ಮಾತು
ಇಲ್ಲಿ ಬೇಡ, ಅಷ್ಟೇ!

ಬಸವ
ನಾನು ನಿನ್ನ ಪಂಥದವ
ಇದಕೆ ಗುರುತು
ತಹಸಿಲ್ದಾರ್ ಕೊಟ್ಟ ಪ್ರಮಾಣಪತ್ರ.
ಇದನು ನಂಬಿದರೆಷ್ಟು, ನೀನು
ಬಿಟ್ಟರೆ ಎಷ್ಟು!

ಬಸವ
ನೀನು ಭಕ್ತಿ ಭಂಡಾರಿಯಾಗಬೇಡ.
ನೀನು ಹಾಗೆ ಆದರೆ
ನಮಗೆ ಕಿಮ್ಮತ್ತಿಲ್ಲ.
ಹಾಗಾಗಿ
ಕಿರೀಟ ಧರಿಸು, ಕುದುರೆಯೇರು
ಹೊರಡು ವಿಧಾನಸೌಧದ ಕಡೆಗೆ.
ಕೇಸರಿ ಮಾರ್ಗವಾದರೂ ಸರಿಯೇ
ಮುನ್ನುಗ್ಗು ಪಾರ್ಲಿಮೆಂಟಿನೆಡೆಗೆ.
ಆಗ ಸಾಕ್ಷಾತ್ಕಾರ ನಿನ್ನ ಶಕ್ತಿ
ಆ ನಿನ್ನ ನೋಡಲು ನಮಗೆ ಕಾತುರ!

ಬಸವ
ನೀನು ಹೀಗೆ ಬಂದದ್ದಾಗಿದೆ
ಬಂದವನು ಇಲ್ಲೇ ಇರು
ಆ ನಿನ್ನ ಹಳೆ ವರಸೆ ತೋರಿದರೆ
ಹಿಂದೆ ಆದಂತೆ ಮರ್‍ಡರ್
ಈಗಲೂ ಆಗುವೆ ಹುಷಾರ್!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...