Home / ಕವನ / ಕೋಲಾಟ / ದಂಡ ಬಂತವ್ವಾ ದಂಡ

ದಂಡ ಬಂತವ್ವಾ ದಂಡ

ದಂಡ ಬಂತವ್ವ ದಂಡ ಸೊಲ್ಲಾಪುರದ ದಂಡ|
ದಂಡ ನೋಡಿ ಬರತ ಹಡದವ್ವಾ| ಕೋಲೆನ್ನ ಕೋಲ||

ಹುಟ್ಟಿದ ಮಗಳವ್ವ ಕಟ್ಟಿ ಕಲ್ಲ ಇಳದಿಲ್ಲ|
ಭ್ಯಾಡ ನನ ಮಗಳ ಹೊರಿಯಾಕ| ಕೋ||

ಭ್ಯಾಡ ಭ್ಯಾಡಂದರ ಭಿರಿಭಿರಿ ಹೋಗ್ಯಾಳ|
ಹೋಗಿ ಅಗಸ್ಯಾಗ ನಿಂತಾಳ| ಕೋ||

ಢೇರ್ಯಾದ ಮ್ಯಾಲಕಿಽಯ ಬೆಳಕ| ಕೋ||

ಮುಗಲಿಲ್ಲ ಮಾಡಿಲ್ಲ ಮಿಂಚ ಗದ್ದರಣಿಲ್ಲ|
ಇದು ಯಾತದ ಬೆಳಕ ಕರಣೀಕ| ಕೋ||

ಒಬ್ಬರ ಹೋಗಂದ್ರ ಇಬ್ಬರ ಹೋಗಿದಾರ|
ಓಡ್ಹೋಗಿ ಅಕಿನ ಹಿಡದಾರ| ಕೋ||

ಇಪ್ಪತ್ತು ವರುಷದ ತುಪ್ಪುಂಡ ಕೂದಲ|
ನಾರಿ ನಿನಗಾಗಿ ಕಾಯ್ದಿದಾಳೇನ| ಕೋ||

ಹನ್ನೆರಡು ವರುಷದ ಎಣ್ಣುಂಡ ಕೂದಲ|
ಮಿತ್ರಿ ನಿನಗಾಗಿ ಕಾಯ್ದಿದಾಳೇನ| ಕೋ||

ನಾರಿ ನಿನಗಾಗಿ ಕಾಯ್ದಿದಾಳೇನ ಸೊಲ್ಲಪುರದ|
ದಂಡೀಗಿ ಧಾರಿ ಎರೆದೀದನೇನ| ಕೋ||

ಆಂಗಳದಾಗಿನ ತನುವ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||

ಕುಂಬಿಽಯ ಮ್ಯಾಲಿಽನ ದುಂಡ ಶಾವಂತಿಗ್ಹೂವ|
ಹೂ ಬಾಡಿದಾಗೊಮ್ಮ ನೆನೆಯವ್ವ| ಕೋ||
*****

ಪಟ್ಟಣದ ದಾರಿಯ ಮೇಲಿರುವ ಒಂದು ಊರ ಬಳಿಯಲ್ಲಿ ದಂಡು ಬಂದಿಳದಾಗ ಒಬ್ಬ ಹೆಣ್ಣುಮಗಳು ನೋಡಲಿಕ್ಕೆಂದು ಹೋಗಿ ಡೇರೇದ ಹತ್ತಿರ ನಿಂತಿದ್ದಳು. ಒಳಗೆ ಕುಳಿತ ಅಧಿಕಾರಿಯು ಅವಳ ರೂಪಕ್ಕೆ ಮರುಳಾಗಿ ಅವಳನ್ನು ಹಿಡಿದು ತರುವುದಕ್ಕೆ ಜವಾನರನ್ನು ಕಳಿಸುತ್ತಾನೆ(೧-೫). ಈ ಸುದ್ದಿಯನ್ನು ಕೇಳಿ ಅವಳ ತಾಯಿಯು ಓಡಿಬಂದು ದುಃಖಮಾಡುತ್ತಾಳೆ (೬-೮). ಆಗ ಮಗಳು ತಾಯಿಗೆ ತನ್ನ ಸುಖದುಃಖದ ಬಗ್ಗೆ ಕುರುಹುಗಳನ್ನು ಹೇಳುತ್ತಾಳೆ (೯-೧೦).

ಹೀಗೆ ಕುರುಹು ಹೇಳುವ ಪದ್ಧತಿಯು ಬಹುಪ್ರಾಚೀನ ಕಾಲದ್ದು. ಘಟೋತ್ಕಚನು ತಾನು ಸತ್ತರೆ ಮನೆಯ ಮುಂದಿನ ಸಪ್ತತಾಳ ವೃಕ್ಷಗಳು ನೆಲಕ್ಕುರುಳುವವೆಂದು ತನ್ನ ತಾಯಿಗೆ ಕುರುಹನ್ನು ಹೇಳಿ ಯುದ್ಧಕ್ಕೆ ಹೋದ ಸಂಗತಿ ಸುಪ್ರಸಿದ್ಧವಿದೆಯಲ್ಲವೇ?

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ಧಪ್ರಯೋಗಗಳು:- ಢೇರೆ=ತಂಬೂ.

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...