Home / ಕವನ / ಕವಿತೆ / ಗಂಗೀ ಗೌರೀ ಹಾಡು – ೨

ಗಂಗೀ ಗೌರೀ ಹಾಡು – ೨

ಅಡವಿಯನ್ನಿ ಮರನೆ
ಗಿಡವ ಬನ್ನಿ ಮರನೆ
ಅಡವ್ಯಾಗೆ ಇರುವಂಥ
ಸಾರಂಗ ಸರದೂಳಿ
ಹೆಬ್ಬುಽಲಿ ಹುಲಿಕರಡಿ
ಎಡಬಲ ಹಾಂವುತೇಳೋ ದೇವಾ|
ಎನ್ನ ಮೇಲಾಡಿ ಶ್ರೀಗಂಗೀನ ತಂದಿ|
ಎನ್ನ ತಪ್ಪೇನು ಕಂಡಿ ||೧||

ಪಟ್ಟಣದ ದಾರಿ ಮ್ಯಾಲ
ಹಿಟ್ಟಗಳ್ಲಿನ ಮ್ಯಾಲ
ಕತ್ತಿಽಯ ವರಿಯಂಗ
ವರಿಯವರು ಇದ್ದಲ್ಲಿ
ಇಪ್ಪತ್ತು ಗಾಂವುದ ತಪನಿದ್ದೊಽ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ|
ಎನ್ನ ತಪ್ಪೇನು ಕಂಡಿ ||೨||

ಸಾರಂಗ ದಾರಿಮ್ಯಾಲ
ಸಾಲಗಲ್ಲಿನ ಮ್ಯಾಲ
ಛೂಜಿಽಯ ಮಣಿಯಂಗ
ಮಣಿಯವರು ಇದ್ದಲ್ಲಿ
ನಾಲ್ಪತ್ತು ಗಾಂವುರದ ತಪನಿದ್ದೊಽ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೩||

ತನುವ ಇಲ್ಲದ ಗಂಗಿ
ಥಣ್ಣೀರಿಗ್ಹೋದಾಗ
ನಿಂಬೀಹಣ್ಣಿಽನಂಗ
ತುಂಬಿಽದ ಕುಚಗಳು
ಬಂದ ಕುಂತಾಳ ಜಡಿಯೊಳಗೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೪||

ಒಟ್ಟಿಽದ ಭಣವಿಽಗಿ
ಕಿಚಗುಳ್ಳ ಬಿದ್ದಂಗ
ಮುತ್ತಿಽನ ರಾಸಿಽಗಿ
ಕಳ್ಳರು ಬಿದ್ದಂಗ
ಚಿಕ್ಕಂದಿನೊಗತಾನಾ
ಮತ್ತೊಬ್ಳಿಗಾಯ್ತಂದ
ಹೊಟ್ಯಾಗ ಭೆಂಕಿ ಬರಕ್ಯಾದೋ ದೇವಾ
ಎನ್ನ ಮೇಲಾಡಿ ಶ್ರೀಗಂಗೀನ ತಂದಿ |
ಎನ್ನ ತಪ್ಪೇನು ಕಂಡಿ ||೫||
*****

ಇದೊಂದು ಭಾವಗೀತೆ. ಲೆಕ್ಕದಂತೆ ಮುಂದಿನ ವಿಭಾಗದಲ್ಲಿ ಸೇರಿಸಬೇಕಿತ್ತು. ಅದರೆ ಈ ನಾಡಿನ ವಿಷಯವು ಪ್ರಣಯಾಂತರದ ಪರಿತಾಪವನ್ನು ಸ್ಪಷ್ಟಗೊಳಿಸುವುದರಿಂದ ಈ ನಿಭಾಗದಲ್ಲಿಯೇ ಸೇರಿಸಬೇಕಾಯಿತು. ಇದರಲ್ಲಿ ಗಂಗೆಗೆ ಶಿವನೊಲಿದದ್ದಕ್ಕಾಗಿ ಗೌರಿಯು ಅನುತಾಪಗೊಳ್ಳುವಳು. ಹಿಂದೆ ಗಿರಿರಾಜನ ಮನೆಯಲ್ಲಿದ್ದಾಗ ಶಿವನ ಸಲುವಾಗಿ ಮಾಡಿದ ಘೋರತಪಶ್ಚರ್ಯವನ್ನೆಲ್ಲ ನೆನಪಿಗೆ ತಂದುಕೊಟ್ಟು ಶಿವನ ಎದುರಿಗೇ ಕನವರಿಸುತ್ತಾಳೆ.

ಆನ್ನೀಮರ, ಬನ್ನೀಮರ ಮುಂತಾದವುಗಳಿಂದ ತುಂಬಿದ ಕಟ್ಟಡವಿಯೊಳಗೆ ಹಿಂಸ್ರಪಶುಗಳ ಮಧ್ಯದಲ್ಲಿ ತಾನು ತಪಗೈದೆನೆಂದು ಮೊದಲನೆಯ ನುಡಿಯಲ್ಲಿ, ಸ್ವರ್ಗನಗರಿಯ ದಾರಿಯಲ್ಲಿ ಕಲ್ಲುಬಂಡೆಗಳ ಮೇಲೆ ಕುಳಿತು, ಬಗೆ ಬಗೆಯ ರಾಕ್ಷಸರ ತೊಂದರೆಯನ್ನು ಸಹಿಸಿ, ಹತ್ತಿಪ್ಪತ್ತು ಯುಗಗಳ ವರೆಗೆ ತಪಗೈದೆನೆಂದು ಎರಡನೆಯ ಮೂರನೆಯ ನುಡಿಗಳಲ್ಲಿ ಹೇಳುತ್ತಾಳೆ.

ಛಂದಸ್ಸು:- ಲಲಿತರಗಳೆ

ಶಬ್ದಪ್ರಯೋಗಗಳು:- ಸಾರಂಗಸರದೂಳಿ=ಸಾರಂಗ ಮತ್ತು ಶಾರ್ದೂಲ. ಎನ್ನ ಮೇಲಾಡಿ=ನನ್ನ ಮೇಲೆ ಮೇಲಾಟಿಮಾಡಿ, ಅಥವಾ ನನಗಿಂತ ಮಿಗಿಲೆಂದು. ಪಟ್ಟಣದ ದಾರಿ=ಕೈಲಾಸ ಪಟ್ಟಣದ ದಾರಿ. ಕತ್ತೀಯ ವರಿಯವರು=ಚರ್ಮದ ಚೀಲದಲ್ಲಿ ಮುಚ್ಚಿದ ಖಡ್ಗವನ್ನು ಧರಿಸಿದ ಅಮಾನುಷರು. ಗಾಂವದ=ಗಾವುದ. ಈ ಶಬ್ದವನ್ನು ಇಲ್ಲಿ `ಯುಗ’ ಎಂಬ ಅರ್ಧದಲ್ಲಿ ಉಪಯೋಗಿಸಿದೆ. ಸಾರಂಗ ದಾರಿ=ಸ್ವರ್ಗ ದಾರಿ. ತಪನಿದ್ದ=ತಪವಿದ್ದೆನು. ಭಣವಿ=ಸೊಪ್ಪಿನ ಬಣಿವೆ ಅಧವಾ ಒಟ್ಟಲು. ಕಿಚಗುಳ್ಳ=ಕಿಚ್ಚಿನ ಬೆರಣಿ, ಎಂದರೆ ಕೆಂಡ. ಒಗತನ=ದಾಂಪತ್ಯ. ಬರಕ್ಯಾದ=ಸುರುವಿದೆ.

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...