Home / ಕವನ / ಕವಿತೆ / ಭಯೋತ್ಪಾದಕರು

ಭಯೋತ್ಪಾದಕರು

ಯಾರಿವರು ಭಯೋತ್ಪಾದಕರು
ಎಲ್ಲಿಂದ ಬಂದವರು?
ಯಾರ ಹೊಟ್ಟೆಯಲ್ಲಿ ಬಿತ್ತಿದ ವಿಷದ ಬೀಜಗಳು?
ಕ್ಲೋನಿಂಗ್‌ನಿಂದ ಹುಟ್ಟಿರ ಬಹುದೇ?
ಇಲ್ಲವಾದರೆ ಹೇಗವರು ಒಂದೇ ರೀತಿ?
ಹೃದಯ ಮನಸ್ಸು ಇಲ್ಲದವರು
ಮತಾಂಧರಾಗಿ ಮಾನವೀಯತೆಯ ಮರೆತವರು.
ಭಯೋತ್ಪಾದಕರು!
ಎಲ್ಲೆಲ್ಲೂ ಭಯೋತ್ಪಾದಕರು
ಬೀದಿ ಬೀದಿಗಳಲ್ಲಿ, ನಗರನಗರಗಳಲ್ಲಿ
ಬಸ್ಸಲ್ಲಿ, ರೈಲಲ್ಲಿ, ವಿಮಾನದಲ್ಲಿ
ಎಲ್ಲೆಂದರಲ್ಲಿ ರಕ್ತಪಿಪಾಸುಗಳು,
ಆತ್ಮಾಹುತಿಗೆ ಸಿದ್ಧರಾದವರು.
ಕಾಶ್ಮೀರದಲ್ಲಿ ಮಾರಣಹೋಮ ನಡೆದಾಗ,
ಮುಂಬಯಿಯಲ್ಲಿ ಸರಣಿ ಬಾಂಬುಗಳು ಸಿಡಿದಾಗ
ನೇಪಾಲದಲ್ಲಿ ವಿಮಾನ ಅಪಹರಣವಾದಾಗ
ತಾಲಿಬಾನ್ ನೆಲದಲ್ಲಿ ಪ್ರಯಾಣಿಕರ ಪಣಕ್ಕೊಡ್ಡಿದಾಗ,
ಜೈಲಲ್ಲಿದ್ದ ಭಯೋತ್ಪಾದಕರ ಬಿಡಬೇಕಾದಾಗ
ಯಾರನ್ನೂ ಧೃತಿಗೆಡಿಸಲಿಲ್ಲ, ಅವರ ಇರವು.
ಜಗತ್ತು ಕಣ್ಣು ಮುಚ್ಚಿತ್ತು.
ಕಂಬಿಯ ಹಿಂದಿದ್ದ ಭಯೋತ್ಪಾದಕರು ಲೀನವಾದರು
ವಿಶ್ವ ಜನಸ್ತೋಮದಲಿ ಜಯಭೇರಿ ಹೊಡೆಯುತ-
ವಿದ್ವಂಸಕ ಕೃತ್ಯಗಳ ಮೆರೆಯಿಸುತ!
ಮುಂದೆಯೊಂದು ದಿನ
ಬೆಳೆಸಿದವರದ್ದೇ ಕೈಕಚ್ಚಿ ಅವರದೆಗೇ ಗುಂಡಿಟ್ಟಾಗ
ಉರುಳಿದವು ಗಗನ ಚುಂಬಿಗಳು
ಚೆಲ್ಲಾಡಿದವು ಜೀವ ರಾಶಿಗಳು.
ಪ್ರತಿಭಾವಂತರನೇಕರು ಆದರಲ್ಲಿ ಜೀವಂತ ಸಮಾಧಿ!
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಏನಾಗಿದೆ ಮನುಷ್ಯರಾಗಿ ಹುಟ್ಟಿದವರಿಗೆ
ಮಾನವೀಯತೆಯ ಮರೆತು ರಾಕ್ಷಸರಾಗಿ
ಬದಲಾದರು ಹೇಗೆ?
ಹುಟ್ಟುವಾಗ ಜಾತಿ ಇಲ್ಲ ಮತ ಇಲ್ಲ
ಬೆಳೆದಂತೆ ಮತಾಂಧತೆ
ಒಬ್ಬರನ್ನೊಬ್ಬರು ಕೊಚ್ಚಿಹಾಕುವಷ್ಟು,
ಸುಟ್ಟುಬಿಡುವಷ್ಟು,
ಪುಡಿಪುಡಿಮಾಡಿ ಬಿಸಾಕುವಷ್ಟು ಕೆಟ್ಟ ದ್ವೇಷ.
ಇದಕ್ಕೆಲ್ಲಿದೆ ಕೊನೆ?
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...