Home / ಲೇಖನ / ಇತರೆ / ವಚನ ವಿಚಾರ – ಜ್ಞಾನ-ಕ್ರಿಯೆ

ವಚನ ವಿಚಾರ – ಜ್ಞಾನ-ಕ್ರಿಯೆ

ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ
ತಾಗುವ ಮೊನೆಗಾಧಾರವಾಗಿ
ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ
ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ

[ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯಲ್ಲಿ, ವಿಹಂಗನ ಹಕ್ಕಿಯ, ಕ್ರೀ-ಕ್ರಿಯೆ, ಕಾಬನ್ನಕ್ಕ-ಕಾಣುವವರೆಗೆ]

ಅಂಬಿಗರ ಚೌಡಯ್ಯನ ವಚನ, ಜ್ಞಾನ ಮತ್ತು ಕ್ರಿಯೆಗಳಿಗೆ ಇರುವ ಸಂಬಂಧವನ್ನು ಈ ವಚನ ವಿವರಿಸುತ್ತದೆ.

ಇಲ್ಲಿ ಒಂದು ರೂಪಕವಿದೆ. ಅದು ಬಾಣದ ರೂಪಕ. ಬಾಣದ ಹಿಳಿಕಿನಲ್ಲಿ ಹಕ್ಕಿಯ ಗರಿಯನ್ನು ಕಟ್ಟಿರುವುದುಂಟು. ಆ ಗರಿಯ ಕಾರ್‍ಯ ಏನೆಂದರೆ ಗುರಿಯನ್ನು ಮುಟ್ಟುವ ಮೊನೆಗೆ ಸಹಾಯಮಾಡುವುದು. ಹಿಂಬದಿಯ ಗರಿಯ ಬೆಂಬಲ, ಸಮತೋಲ ಇಲ್ಲದಿದ್ದರೆ ಬಾಣವು ದೂರ ಹೋಗದು.

ಹಾಗೆಯೇ ಕ್ರಿಯೆ ಎಂಬುದು ಬಾಣ, ಅರಿವು ಅನ್ನುವುದು ಬಾಣದ ಹಿಳಿಕಿನಲ್ಲಿರುವ ಗರಿ ಎಂದು ಚೌಡಯ್ಯ ಹೇಳುತ್ತಾನೆ. ಈ ಅರಿವು ಮತ್ತು ಕ್ರಿಯೆಯ ವ್ಯತ್ಯಾಸವನ್ನು, ಸಂಬಂಧವನ್ನು ಅರಿಯುವವರೆಗೆ ಅರಿವು, ಕುರುಹು (ಸಂಕೇತ, ಲಾಂಛನ) ಎಲ್ಲವೂ ಬೇಕು ಅನ್ನುತ್ತಾನೆ.

ಆಧುನಿಕ ಕಾಲದಲ್ಲಿ ಜ್ಞಾನ (ನಾಲೆಜ್) ಮತ್ತು ಕ್ರಿಯೆ (ಆಕ್ಷನ್) ಕುರಿತು, ಪ್ರಾಕ್ಟಿಸ್‌ ಮತ್ತು ಥಿಯರಿ ಕುರಿತು ಅನೇಕ ಚರ್ಚೆಗಳು ನಡೆದಿವೆ. ಆಧುನಿಕ ಪೂರ್‍ವ ಕಾಲದಲ್ಲಿ ಜ್ಞಾನ ಮತ್ತು ಕ್ರಿಯೆಗಳ ಸಂಬಂಧ ಕುರಿತು ನಡೆದ ಚರ್ಚೆಯ ನಿದರ್‍ಶನವಾಗಿ ಈ ವಚನ ಕಾಣುತ್ತದೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...