Home / ಕವನ / ಕವಿತೆ / ಪತ್ರ ವಾಹಿನಿ

ಪತ್ರ ವಾಹಿನಿ

ದೂರದ ಗೋವೆಯಿಂದ ವಧು ಬಂದಿತ್ತು
ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು.
ಕಣ್ಗಳೇ ಆಡಿದವು ನೂರಾರು ಮಾತು,
ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು.
ಬಾಂಧವ್ಯಕೆ ಭಾಷೆಯ ಬಂಧನವಿಲ್ಲ
ಹಲವು ಭಾಷೆಗಳಲ್ಲಿ ಹರಿಯಿತು ಪತ್ರ ಪ್ರವಾಹ
ವ್ಯವಸ್ಥಿತ ಮದುವೆ ಆಯಿತು ಪ್ರೇಮ ವಿವಾಹ
ನಿಶ್ಚಿತದ ಬಳಿಕ ಉಳಿದಿದ್ದುದು
ನೂರು ದೀರ್ಘ ದಿನಗಳು, ಬರೆದುದು ನೂರೇ ಪತ್ರ!
ಇಬ್ಬರದೂ ಸೇರಿ ಸಾವಿರ ಪುಟಗಳು ಮಾತ್ರ
ಕಥೆ, ಕವನ, ಕನಸು, ಹಗಲುಗನಸು,
ನಾಟಕ, ರೂಪಕ, ಧಾರಾವಾಹಿ…
ಏನೆಲ್ಲ ರೂಪಗಳಲ್ಲಿ ಹರಿಯಿತು ಪತ್ರಧಾರೆ.
ದಿನ ದಿನವೂ ಕಾಯುತ್ತಿದ್ದೆವು ಪತ್ರಕ್ಕಾಗಿ
ರಾಮನಿಗಾಗಿ ಕಾದ ಶಬರಿಯಂತೆ
ಮಳೆಗಾಗಿ ಕಾದ ಚಾತಕ ಪಕ್ಷಿಯಂತೆ.
ಆಫೀಸಿನಲ್ಲಿ ಮನೆಯಲ್ಲಿ ಎಲ್ಲೆಲ್ಲೂ
ಅದೇ ಮಾತು – ಗುಲ್ಲೋ ಗುಲ್ಲು.
ಯಾರೂ ಆಗದ ಲಗ್ನ ಇವರೇ ಆದಂತೆ
ಎಂದವರ ಅಸೂಯಾಗ್ನಿಗೆ ತುಪ್ಪ ಹುಯ್ದಂತೆ
ಪತ್ರ ರೂಪದಿ ಭಾವಗಳು ಹೊರ ಹೊಮ್ಮಿ ಪಸರಿಸಿ
ವಿರಹ ವೇದನೆಯ ತಣಿಸಿತ್ತು
ಮನಕೆ-ಮನವ ತಲುಪಿಸಿತ್ತು
ಸುಂದರ ವೈವಾಹಿಕ ಜೀವನಕೆ
ಭದ್ರ ಬುನಾದಿಯ ಹಾಕಿತ್ತು
ಮಧುರ ಮಿಲನವು ಹೃದಯಗಳ ಬೆಸೆದಿತ್ತು
*****
೨೦-೦೩-೧೯೮೪

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...