Home / ಕವನ / ಕವಿತೆ / ಅವಸರ ಬೇಡ

ಅವಸರ ಬೇಡ

ಬವಣೆಯ ಬದುಕು
ಭರವಸೆಯಲಿ ಸವೆಸುತ್ತಾ
ದುಡಿಮೆಯಲಿ ಕಾಲ ಕಳೆಯುತ್ತಾ
ತಿನ್ನುವ ಅನ್ನವ ತೊರೆದು
ಹೊರಟೆಯೇನಣ್ಣ ಆತ್ಮಹತ್ಯೆಗೆ
ಆತುರಬೇಡ… ಅವಸರಬೇಡ
ನಿನ್ನ ಒಡಲ ಕುಡಿಗಳಿಹರು
ಆತಂಕಬೇಡ ನಾವಿರುವೆವು ನಿಮಗಾಗಿ

ಹಸಿವೆ.. ಹರಿ ಹಾಯ್ದರೂ…
ನಾವೆಲ್ಲಾ… ಒಂದೊತ್ತಿನ
ಉಣ್ಣುವ ಊಟವು ಬಿಟ್ಟು
ಮೇಘನ ಮೇಲೆ ಆಣೆಯಿಟ್ಟು
ಬೇಡೋಣ ಭೂತಾಯಿ ಒಲವಿಗೆ
ಆತಂಕಬೇಡ ನಾವಿರುವೆವು ನಿಮಗಾಗಿ

ಹೋಗಿಯೇ… ಬಿಡಲಿ
ಅನುಕಂಪವಿರದೆ ಈ ದೇಹದ
ಆ ಒಂದು ಕ್ಷಣ ಉಸಿರು…
ಆಗಲಿ ಆವಾಗಲಾದರೂ
ಭೂಮಡಿಲ ಒಡಲು ಹಸಿರು
ಆತಂಕಬೇಡ ನಾವಿರುವೆವು ನಿಮಗಾಗಿ

ಬದುಕು ಬರಿ ಬರವಲ್ಲ
ಸುಡು ಬಿಸಿಲಿನಿ ಸಿಡೆಲೆಯಾದರೂ
ಬಿಡಲು-ಕೈಬಿಡಳು ಭೂಮಾತೆ
ತನ್ನ-ಕುಡಿಗಳಾಗಿರುವ…
ನಮ್ಮೆಲ್ಲರನ್ನೂ…. ಪೊರೆದವಳು
ಆತಂಕಬೇಡ… ನಾವಿರುವೆವು ನಿಮಗಾಗಿ

ಬೆಂಕಿ ಉಂಡೆಯ ಝಳದಲ್ಲೂ
ತಂಪನೆಯ ತಂಗಾಳಿ ಕಾಣುತ
ಮೈಕೊರೆವ ಮಾಗಿ ಚಳಿಯಲ್ಲೂ
ಬೆಚ್ಚಗಿನ ಬದುಕು ಅರಸಿದವರು
ಆತಂಕಬೇಡ… ನಾವಿರುವೆವು ನಿಮಗಾಗಿ

ಬಿಸಿಲು-ಗಾಳಿ-ಮಳೆಯೆನ್ನದೆ
ಮೈ-ಕೈ ಒಡ್ಡಿ ಮುದಡದ
ಬೆಳೆದು… ಬಾಳಿದವು…
ನನ್ನೂರಿನ ಹೆಮ್ಮೆಯ ಸಿರಿಯುಳ್ಳ
ನಾಡಿನ ಸಾರ್ವಭೌಮರು ನೀವು
ಆತಂಕಬೇಡ… ನಾವಿರುವೆವು ನಿಮಗಾಗಿ

ಬಿಡುವದಿಲ್ಲ… ನಾವು…
ಶರಣಾಗಲು ಸಾವಿಗೇ ನೀವು
ಬರದ ಬೇಗೆಯ ಹಲವು
ವೃಷ್ಟಿ-ಅನಾವೃಷ್ಟಿಗಳೇ ಮುತ್ತಲಿ
ಆತಂಕಬೇಡ ನಾವಿರುವೆವು ನಿಮಗಾಗಿ

ಬೆಂಕಿ ಉಗುಳುತ ಚೆಲ್ಲಲಿ
ಧರೆಯೆ ದಹಿಸುತಲಿ…
ಎದೆಗುಂದಿ… ತಲೆಬಾಗದೆ
ಧೈರ್ಯ ಒಂದೆ ಸರ್ವಸಾಧನೆ
ಮೇರು ಸವಾಲು ಸ್ವೀಕಾರವಿರಲಿ
ಆತಂಕಬೇಡ ನಾವಿರುವೆವು ನಿಮಗಾಗ….

ಬದುಕು-ಗೆಲ್ಲುತಲಿ
ಜಗವೆಲ್ಲಾ ಗೆಲ್ಲಿರಿ…
ಆತ್ಮಹತ್ಯೆಯ ಆಲಿಂಗನದಿ
ಬಡತನದ ಭೂತಕ್ಕೆ ಬೆದರಿ
ಮರೀಚಿಕೆ ಸವಾರಿಬೇಡ
ಆತಂಕಬೇಡ… ನಾವಿರುವೆವು
ನಿಮಗಾಗಿ ಸದಾ… ನಿಮಗಾಗಿ

*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...