Home / ಲೇಖನ / ವ್ಯಕ್ತಿ / ತಿರುಪ್ಪಾವೈ – ಮುನ್ನುಡಿ

ತಿರುಪ್ಪಾವೈ – ಮುನ್ನುಡಿ

ಧರ್ಮಭೂಮಿ ಎನಿಸಿಕೊಂಡಿರುವ ಭಾರತದ ಇತಿಹಾಸದುದ್ದಕ್ಕೂ ಸಾಧುಸಂತರು, ಭಕ್ತಶ್ರೇಷ್ಠರು, ವೇದಾಂತಿಗಳು, ಮಹಾತ್ಮರೂ ಜನ್ಮತಾಳಿ ತಮ್ಮ ತತ್ವಜ್ಞಾನವನ್ನು ಜನತೆಗೆ ನೀಡಿದ್ದಾರೆ. ಅಂತಹ ಭಕ್ತರಲ್ಲಿ ತಮಿಳುನಾಡಿನ ಭಕ್ತಪರಂಪರೆಯಲ್ಲಿ ಅಗ್ರಗಣ್ಯರಾದ ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು ಆಂಡಾಳ್. “ಆಂಡಾಳ್” ಎಂದರೆ ಆಳಿದವಳು ಎಂಬ ಅರ್ಥ ಬರುತ್ತದೆ. ತನ್ನ ಅನನ್ಯ ಭಕ್ತಿಯಿಂದ ಪರಮಾತ್ಮನ ಮನವನ್ನು ಗೆದ್ದು ಆಳಿದವಳು “ಆಂಡಾಳ್”. ಉತ್ತರ ಭಾರತದಲ್ಲಿ ಜನಿಸಿ ಶ್ರೀಕೃಷ್ಣನಿಗೆ ಒಲಿದ ಭಕ್ತ ಮೀರಾಳಂತೆ ದಕ್ಷಿಣ ಭಾರತದಲ್ಲಿ ಶ್ರೀಕೃಷ್ಣನನ್ನೇ ಪತಿಯೆಂದು ಪರಿಗಣಿಸಿದ ಭಕ್ತೆ “ಆಂಡಾಳ್”.

ಆಂಡಾಳ್ ಸೀತೆಯಂತೆ ಭೂಮಿಯಲ್ಲಿ ದೊರೆತ ಅಯೋನಿಜೆ, ಆಂಡಾಳ್ ದೇವಿಯ ಕಥೆ ಸುಂದರವಾದ ಪೌರಣಿಕ ಕಥೆಯಂತಿದ್ದರೂ, ಇದು ಸತ್ಯ ಘಟನೆ. ಇದನ್ನು ಹಲವಾರು ವಿದ್ವಾಂಸರೂ, ಸಂಶೋಧಕರೂ ಆಳವಾಗಿ ಅಭ್ಯಾಸ ಮಾಡಿ ಹಲವಾರು ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ.

ಆಂಡಾಳ್ ಅವತರಿಸಿದ ಕಾಲ ಕ್ರಿ.ಶ. ೭-೮ ಶತಮಾನಗಳ ಮಧ್ಯಭಾಗವೆಂದೂ, ತಮಿಳುನಾಡಿನ ಪಾಂಡ್ಯ ದೇಶದ ರಾಜ ವಲ್ಲಭದೇವನ ಕಾಲವೆಂದೂ ವಿದ್ವಾಂಸರ ಅಭಿಪ್ರಾಯ. ಆದರೆ ಉಪನ್ಯಾಸಕರನೇಕರ ಅಭಿಪ್ರಾಯ ಆಂಡಾಳ್ ಜನನ ಕಲಿಯುಗ ಆರಂಭವಾಗಿ ಇನ್ನೂರು ವರ್ಷಗಳಿಗೆ ಸರಿಯಾಗಿ ಎಂದು. ಏನೇ ಇದ್ದರೂ ಆಂಡಾಳ್ ಕಾಲ್ಪನಿಕ ವ್ಯಕ್ತಿಯಲ್ಲ. ಆಂಡಾಳ್ ದೊರೆತ ತುಳಸೀವನ, ಆಂಡಾಳ್ ದೇವಿಯ ಸಾಕು ತಂದೆ ಪೆರಿಯಾಳವಾರ್ ಸನ್ನಿಧಿ. ಅವರಿಬ್ಬರೂ ಪೂಜಿಸಿದ ವಟಪತ್ರಶಾಯಿ ದೇವಾಲಯ, ಇವೆಲ್ಲವೂ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿ ಈಗಲೂ ಇವೆ. ಆಂಡಾಳ್ ದೇವಿಯ ಅನನ್ಯ ಭಕ್ತಿಗೆ ಒಲಿದು ಆಕೆಯ ಕೈಹಿಡಿದ ಶ್ರೀರಂಗನಾಥನ ದೇವಾಲಯ ಈಗಿನ ತಿರುಚ್ಚಿನಾಪಳ್ಳಿ ಜಿಲ್ಲೆಯ ಶ್ರೀರಂಗ ಕ್ಷೇತ್ರಗಳನ್ನು ಸಂದರ್ಶಿಸಿ ಭಗವಂತನನ್ನು ಹಾಡಿ ಸ್ತುತಿಸಿದಳೆಂದು ತಿಳಿದುಬರುತ್ತದೆ. ಅವುಗಳಲ್ಲಿ ತಿರುವರಂಗಂ ಪೆರಿಯಕೋಯಿಲ್ (ಶ್ರೀರಂಗಂ), ತಿರುಕ್ಕಣ್ಣಪುರಂ, ತಿರುಮಾಲಿರಂ ಚೋಮಲೈ (ಅಯ್ಯಗರ್ ಕೋಯಿಲ್‌), ತಿರುವೇಂಗಡಂ (ತಿರುಪತಿ) ಮುಂತಾದವು ಮುಖ್ಯವಾದವು.

ಆಂಡಾಳ್ ದೇವಿಗೆ ಹಲವಾರು ಹೆಸರುಗಳಿವೆ. ಭೂಮಿಯಲ್ಲಿ ದೊರೆತವಳಾದ್ದರಿಂದ ‘ಗೋದಾದೇವಿ’ ಎಂದೂ ಮಹಾಲಕ್ಷ್ಮಿಯ ಅವತಾರವಾದ್ದರಿಂದ ‘ನೀಳಾದೇವಿ’ ಎಂದೂ, ತಾನೂ ಮೊದಲು ಹೂ ಮುಡಿದು ಆ ಹೂಗಳನ್ನೇ ಭಕ್ತಿಭಾವದಿಂದ ಭಗವಂತನಿಗೆ ಅರ್ಪಿಸಿದುದರಿಂದ “ಶೂಡಿಕ್ಕುಡುತ್ತ ನಾಚ್ಚಿಯಾರ್” ಎಂದೂ ಹೆಸರುಗಳುಂಟು.

ಗೋಕುಲದ ಗೋಪ ಕನೈಯರು ಕಾತ್ಯಾಯಿನೀ ವ್ರತವನ್ನು ಆಚರಿಸಿ ತಮ್ಮ ಪ್ರಾಣೇಶ್ವರನನ್ನು ಪಡೆದಂತೆ ಆಂಡಾಳ್ ತನ್ನ ಗೆಳತಿಯರೊಂದಿಗೆ ಪ್ರಾಣೇಶ್ವರನ ಪ್ರಾಪ್ತಿಗಾಗಿ ಆಚರಿಸಿದ ವ್ರತವೇ “ತಿರುಪ್ಪಾವೈ”. ಮೂವತ್ತು ಹಾಡುಗಳುಳ್ಳ ಈ ಸುಂದರ ಗ್ರಂಥವನ್ನು ಆಂಡಾಳ್ ತಾನೇ ರಚಿಸಿ ಹಾಡಿದ್ದಾಳೆ. ‘ತಿರು’ ಎಂದರೆ ಒಳ್ಳೆಯ, ‘ಪಾವೈ’ ಎಂದರೆ ವ್ರತ. ಈ ವ್ರತದ ಫಲ ಕಾಲಕಾಲಕ್ಕೆ ವೃಷ್ಟಿ, ಕನ್ಯೆಯರಿಗೆ ಸೌಮಾಂಗಲ್ಯ ಪ್ರಾಪ್ತಿ. ಅವರವರಿಗೆ ತಮ್ಮ ತಮ್ಮ ಇಷ್ಟ ಕಾರ್ಯ ಸಿದ್ಧಿ ಮತ್ತು ಮೋಕ್ಷ ಸಾಧನೆಗೆ ಮಾರ್ಗ ಈ “ತಿರುಪ್ಪಾವೈ”.

ಈ ತಿರುಪ್ಪಾವೈಯನ್ನು ಶ್ರೀ ವೈಷ್ಣವ ದೇವಾಲಯಗಳಲ್ಲಿ ಧನುರ್ಮಾಸ (ಮಾರ್ಗಶಿರ)ದ ಮೂವತ್ತು ದಿನಗಳೂ ಉಪನ್ಯಾಸ ಮಾಡುತ್ತಾರೆ. ಈಗಾಗಲೇ ಎಷ್ಟೋ ಮಹಾನುಭಾವರು ಈ ಗ್ರಂಥವನ್ನು ಕನ್ನಡ, ತೆಲುಗು ಮತ್ತಿತರ ಭಾಷೆಗಳಿಗೆ ಭಾಷಾಂತರಿಸಿದ್ದಾರೆ. ಡಾ|| ಎಂ. ಎಲ್. ವಸಂತಕುಮಾರಿಯವರು ಹಾಡಿರುವ ತಿರುಪ್ಪಾವೈ ಕ್ಯಾಸೆಟ್ಟುಗಳು ಕೂಡಾ ಬಿಡುಗಡೆಯಾಗಿವೆ. ಈ ತಿರುಪ್ಪಾವೈಯನ್ನು ಪಾರಾಯಣ ಮಾಡಿದವರಿಗೆ ಸಕಲ ಇಷ್ಟಾರ್ಥ ನೆರವೇರುತ್ತದೆಂಬ ಹಿರಿಯ ನುಡಿಯಂತೆ ನಾವೂ ಭಕ್ತಿಭಾವದಿಂದ ಈ ಗ್ರಂಥವನ್ನು ಓದೋಣ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...