Home / ಲೇಖನ / ವ್ಯಕ್ತಿ / ತಿರುಪ್ಪಾವೈ – ಮುನ್ನುಡಿ

ತಿರುಪ್ಪಾವೈ – ಮುನ್ನುಡಿ

ಧರ್ಮಭೂಮಿ ಎನಿಸಿಕೊಂಡಿರುವ ಭಾರತದ ಇತಿಹಾಸದುದ್ದಕ್ಕೂ ಸಾಧುಸಂತರು, ಭಕ್ತಶ್ರೇಷ್ಠರು, ವೇದಾಂತಿಗಳು, ಮಹಾತ್ಮರೂ ಜನ್ಮತಾಳಿ ತಮ್ಮ ತತ್ವಜ್ಞಾನವನ್ನು ಜನತೆಗೆ ನೀಡಿದ್ದಾರೆ. ಅಂತಹ ಭಕ್ತರಲ್ಲಿ ತಮಿಳುನಾಡಿನ ಭಕ್ತಪರಂಪರೆಯಲ್ಲಿ ಅಗ್ರಗಣ್ಯರಾದ ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು ಆಂಡಾಳ್. “ಆಂಡಾಳ್” ಎಂದರೆ ಆಳಿದವಳು ಎಂಬ ಅರ್ಥ ಬರುತ್ತದೆ. ತನ್ನ ಅನನ್ಯ ಭಕ್ತಿಯಿಂದ ಪರಮಾತ್ಮನ ಮನವನ್ನು ಗೆದ್ದು ಆಳಿದವಳು “ಆಂಡಾಳ್”. ಉತ್ತರ ಭಾರತದಲ್ಲಿ ಜನಿಸಿ ಶ್ರೀಕೃಷ್ಣನಿಗೆ ಒಲಿದ ಭಕ್ತ ಮೀರಾಳಂತೆ ದಕ್ಷಿಣ ಭಾರತದಲ್ಲಿ ಶ್ರೀಕೃಷ್ಣನನ್ನೇ ಪತಿಯೆಂದು ಪರಿಗಣಿಸಿದ ಭಕ್ತೆ “ಆಂಡಾಳ್”.

ಆಂಡಾಳ್ ಸೀತೆಯಂತೆ ಭೂಮಿಯಲ್ಲಿ ದೊರೆತ ಅಯೋನಿಜೆ, ಆಂಡಾಳ್ ದೇವಿಯ ಕಥೆ ಸುಂದರವಾದ ಪೌರಣಿಕ ಕಥೆಯಂತಿದ್ದರೂ, ಇದು ಸತ್ಯ ಘಟನೆ. ಇದನ್ನು ಹಲವಾರು ವಿದ್ವಾಂಸರೂ, ಸಂಶೋಧಕರೂ ಆಳವಾಗಿ ಅಭ್ಯಾಸ ಮಾಡಿ ಹಲವಾರು ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ.

ಆಂಡಾಳ್ ಅವತರಿಸಿದ ಕಾಲ ಕ್ರಿ.ಶ. ೭-೮ ಶತಮಾನಗಳ ಮಧ್ಯಭಾಗವೆಂದೂ, ತಮಿಳುನಾಡಿನ ಪಾಂಡ್ಯ ದೇಶದ ರಾಜ ವಲ್ಲಭದೇವನ ಕಾಲವೆಂದೂ ವಿದ್ವಾಂಸರ ಅಭಿಪ್ರಾಯ. ಆದರೆ ಉಪನ್ಯಾಸಕರನೇಕರ ಅಭಿಪ್ರಾಯ ಆಂಡಾಳ್ ಜನನ ಕಲಿಯುಗ ಆರಂಭವಾಗಿ ಇನ್ನೂರು ವರ್ಷಗಳಿಗೆ ಸರಿಯಾಗಿ ಎಂದು. ಏನೇ ಇದ್ದರೂ ಆಂಡಾಳ್ ಕಾಲ್ಪನಿಕ ವ್ಯಕ್ತಿಯಲ್ಲ. ಆಂಡಾಳ್ ದೊರೆತ ತುಳಸೀವನ, ಆಂಡಾಳ್ ದೇವಿಯ ಸಾಕು ತಂದೆ ಪೆರಿಯಾಳವಾರ್ ಸನ್ನಿಧಿ. ಅವರಿಬ್ಬರೂ ಪೂಜಿಸಿದ ವಟಪತ್ರಶಾಯಿ ದೇವಾಲಯ, ಇವೆಲ್ಲವೂ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನಲ್ಲಿ ಈಗಲೂ ಇವೆ. ಆಂಡಾಳ್ ದೇವಿಯ ಅನನ್ಯ ಭಕ್ತಿಗೆ ಒಲಿದು ಆಕೆಯ ಕೈಹಿಡಿದ ಶ್ರೀರಂಗನಾಥನ ದೇವಾಲಯ ಈಗಿನ ತಿರುಚ್ಚಿನಾಪಳ್ಳಿ ಜಿಲ್ಲೆಯ ಶ್ರೀರಂಗ ಕ್ಷೇತ್ರಗಳನ್ನು ಸಂದರ್ಶಿಸಿ ಭಗವಂತನನ್ನು ಹಾಡಿ ಸ್ತುತಿಸಿದಳೆಂದು ತಿಳಿದುಬರುತ್ತದೆ. ಅವುಗಳಲ್ಲಿ ತಿರುವರಂಗಂ ಪೆರಿಯಕೋಯಿಲ್ (ಶ್ರೀರಂಗಂ), ತಿರುಕ್ಕಣ್ಣಪುರಂ, ತಿರುಮಾಲಿರಂ ಚೋಮಲೈ (ಅಯ್ಯಗರ್ ಕೋಯಿಲ್‌), ತಿರುವೇಂಗಡಂ (ತಿರುಪತಿ) ಮುಂತಾದವು ಮುಖ್ಯವಾದವು.

ಆಂಡಾಳ್ ದೇವಿಗೆ ಹಲವಾರು ಹೆಸರುಗಳಿವೆ. ಭೂಮಿಯಲ್ಲಿ ದೊರೆತವಳಾದ್ದರಿಂದ ‘ಗೋದಾದೇವಿ’ ಎಂದೂ ಮಹಾಲಕ್ಷ್ಮಿಯ ಅವತಾರವಾದ್ದರಿಂದ ‘ನೀಳಾದೇವಿ’ ಎಂದೂ, ತಾನೂ ಮೊದಲು ಹೂ ಮುಡಿದು ಆ ಹೂಗಳನ್ನೇ ಭಕ್ತಿಭಾವದಿಂದ ಭಗವಂತನಿಗೆ ಅರ್ಪಿಸಿದುದರಿಂದ “ಶೂಡಿಕ್ಕುಡುತ್ತ ನಾಚ್ಚಿಯಾರ್” ಎಂದೂ ಹೆಸರುಗಳುಂಟು.

ಗೋಕುಲದ ಗೋಪ ಕನೈಯರು ಕಾತ್ಯಾಯಿನೀ ವ್ರತವನ್ನು ಆಚರಿಸಿ ತಮ್ಮ ಪ್ರಾಣೇಶ್ವರನನ್ನು ಪಡೆದಂತೆ ಆಂಡಾಳ್ ತನ್ನ ಗೆಳತಿಯರೊಂದಿಗೆ ಪ್ರಾಣೇಶ್ವರನ ಪ್ರಾಪ್ತಿಗಾಗಿ ಆಚರಿಸಿದ ವ್ರತವೇ “ತಿರುಪ್ಪಾವೈ”. ಮೂವತ್ತು ಹಾಡುಗಳುಳ್ಳ ಈ ಸುಂದರ ಗ್ರಂಥವನ್ನು ಆಂಡಾಳ್ ತಾನೇ ರಚಿಸಿ ಹಾಡಿದ್ದಾಳೆ. ‘ತಿರು’ ಎಂದರೆ ಒಳ್ಳೆಯ, ‘ಪಾವೈ’ ಎಂದರೆ ವ್ರತ. ಈ ವ್ರತದ ಫಲ ಕಾಲಕಾಲಕ್ಕೆ ವೃಷ್ಟಿ, ಕನ್ಯೆಯರಿಗೆ ಸೌಮಾಂಗಲ್ಯ ಪ್ರಾಪ್ತಿ. ಅವರವರಿಗೆ ತಮ್ಮ ತಮ್ಮ ಇಷ್ಟ ಕಾರ್ಯ ಸಿದ್ಧಿ ಮತ್ತು ಮೋಕ್ಷ ಸಾಧನೆಗೆ ಮಾರ್ಗ ಈ “ತಿರುಪ್ಪಾವೈ”.

ಈ ತಿರುಪ್ಪಾವೈಯನ್ನು ಶ್ರೀ ವೈಷ್ಣವ ದೇವಾಲಯಗಳಲ್ಲಿ ಧನುರ್ಮಾಸ (ಮಾರ್ಗಶಿರ)ದ ಮೂವತ್ತು ದಿನಗಳೂ ಉಪನ್ಯಾಸ ಮಾಡುತ್ತಾರೆ. ಈಗಾಗಲೇ ಎಷ್ಟೋ ಮಹಾನುಭಾವರು ಈ ಗ್ರಂಥವನ್ನು ಕನ್ನಡ, ತೆಲುಗು ಮತ್ತಿತರ ಭಾಷೆಗಳಿಗೆ ಭಾಷಾಂತರಿಸಿದ್ದಾರೆ. ಡಾ|| ಎಂ. ಎಲ್. ವಸಂತಕುಮಾರಿಯವರು ಹಾಡಿರುವ ತಿರುಪ್ಪಾವೈ ಕ್ಯಾಸೆಟ್ಟುಗಳು ಕೂಡಾ ಬಿಡುಗಡೆಯಾಗಿವೆ. ಈ ತಿರುಪ್ಪಾವೈಯನ್ನು ಪಾರಾಯಣ ಮಾಡಿದವರಿಗೆ ಸಕಲ ಇಷ್ಟಾರ್ಥ ನೆರವೇರುತ್ತದೆಂಬ ಹಿರಿಯ ನುಡಿಯಂತೆ ನಾವೂ ಭಕ್ತಿಭಾವದಿಂದ ಈ ಗ್ರಂಥವನ್ನು ಓದೋಣ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...