Home / ಕವನ / ಕವಿತೆ / ಜಗಜ್ಯೋತಿ

ಜಗಜ್ಯೋತಿ

ಜಗಜ್ಯೋತಿಯೇ ಯುಗ ಜ್ಯೋತಿಯೇ
ಮಹಾಂತ ಮಹಿಮನೆ ಬಸವಣ್ಣ || ಪ ||
ಏಕ ದೇವನನು ನಂಬಿದೆ ತೋರಿದೆ
ನೀನೇ ಇಂದಿಗು ಗತಿಯಣ್ಣ || ಅ.ಪ.||

ಒಂದೊಂದು ಜಾತಿಗೊಂದೊಂದು ದೈವ
ದೇವರು ಜಾತಿಗಳಗಣಿತವು
ಜಾತಿಯೊಂದೆ ಮನುಕುಲವು ದೈವವೂ
ಒಂದೇ ಸಾರಿದೆ ಸನ್ಮತವು || ೧ ||

ಒಬ್ಬನೇ ದೇವನು ಸರ್ವಕೆ ಒಡೆಯನು
ಇನ್ನೊಬ್ಬನಿಗೆಲ್ಲಿಯ ಜಾಗ
ಅನೇಕ ದೇವರ ಕಲ್ಪನೆ ಸಮಾಜ
ದನೈಕ್ಯ ಭೇದದ ರೋಗ || ೨ ||

ವಿಶ್ವವನ್ನು ತುಂಬಿರುವ ಲಿಂಗವನು
ಅಂಗದಲ್ಲಿ ಸಾಕಾರಗೊಳಿಸಿದೆ
ವಿಶ್ವ ಜೀವರಲಿ ವಿಶ್ವೇಶನ ಕಂಡೆ
ವಿಶ್ವಮಾನವನ ರೂಪುಗೊಳಿಸಿದೆ || ೩ ||

ಸಂಕೇತ ರೂಪ ಇಷ್ಟಲಿಂಗವದು
ಸಕಲವು ಅವನದೆ ರೂಪಗಳು
ಒಬ್ಬನೆ ಈಶ್ಚರ ಅವನೆ ಲಿಂಗ ಶಿವ
ಸಲ್ಲವು ಕಲ್ಪನೆ ರೂಪಗಳು || ೪ ||

ಪ್ರಾಣಲಿಂಗಕೆ ಕಾಯುವೆ ಸೆಜ್ಜೆ
ಅವಗೇಕೆ ಗುಡಿಯ ಗೊಡವೆ
ವಿಶ್ಚದ ಲಿಂಗಕೆ ಗಗನವೆ ದೇಗುಲ
ಅವಗೆಂಥ ಪೂಜೆ ಒಡವೆ || ೫ ||

ಮೂರ್ತಿ ಪೂಜೆಯಲಿ ಭವ್ಯ ಗುಡಿಗಳಲಿ
ಹಣದ ಸ್ವಾರ್ಥವುಂಟು
ದೇವರ ವ್ಯಾಪಾರಿಗಳನು ಖಂಡಿಸಿ
ತೋರಿದೆ ನೇರದ ನಂಟು || ೬ ||
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...