Home / ಕವನ / ಕವಿತೆ / ನಾಚಿಗಿ ಬರತೈತೆ ನನಗಂಡಾ

ನಾಚಿಗಿ ಬರತೈತೆ ನನಗಂಡಾ

ನಾಚಿಗಿ ಬರತೈತೆ ನನಗಂಡಾ ನಿನಕೂಡ
ನಾಚಿಗಿ ಬರತೈತೆ ||ಪಲ್ಲ||

ಬಾಯಾಗ ಹಲ್ಲಿಲ್ಲ ಕಣ್ಣಾಗ ಎಣ್ಣಿಲ್ಲ
ಸಗತಿಲ್ಲ ನಡಿಗೀ ಸುಗತಿಲ್ಲ
ಜೋತಾಡಿ ಹೋಗ್ತೀದಿ ಮಾತಾಡಿ ಬೀಳ್ತೀದಿ
ಮೈಮ್ಯಾಲ ವೈನಾ ನಿನಗಿಲ್ಲ ||೧||

ಗೆಳತೇರು ಗರತೇರು ಗ್ವಾಡಂಬಿ ಚಲುವೇರು
ತೇರಂತ ಅಂತಾರ ನಿನಕಂಡ
ಗಂಡನ್ನ ಜಗ್ಗಾಕ ಹಗ್ಗೊಂದ ಬೇಕಂತ
ನಗತಾರ ಸೂಳ್ಯಾರ ಮನಗಂಡ ||೨||

ಮಿಸ್ಯಾಗ ಕರಿ ಇಲ್ಲ ಮಗ್ನ್ಯಾಗ ಹಸನಿಲ್ಲ
ತುಟಿಯಾಗ ತಂಬೂರಿ ನಿನಗಿಲ್ಲ
ತಲಿತುಂಬ ಬುರುಬೂರಿ ಹೇನಂತ ಕೂರೆಂತ
ಕೌವ್ವಂತ ನಗತಾರ ಹಗಲೆಲ್ಲ ||೩||

ಹರೆಯಾದ ಹುಡಗೀಯ ಬೆಡಗೀಯ ಮಡದೀಯ
ಮಗ್ಗಲಕ ಕರದೀಯ ಕುರ್ರಂತ
ಪಂಚೇತಿ ಬಂತಲ್ಲ ಸಂತ್ಯಾಗ ಚಿಂತ್ಯಾತ
ಚಿರ್ಚಾದ ಚಲುವೆಲ್ಲ ಚುರ್ರಂತ ||೪||

ಗಂಡಂದ್ರು ಗಂಡಲ್ಲ ಹೆಣ್ಣಂದ್ರು ಹೆಣ್ಣಲ್ಲ
ಹುಟ್ಟಿದ್ರು ಹುಟ್ಟಿಲ್ಲ ನನಗಂಡಾ
ಮೆಟ್ಟಿದ್ರು ಮೆಟ್ಟಿಲ್ಲ ಕಟ್ಟಿದ್ರು ಕಟ್ಟಿಲ್ಲ
ಹೊಲವಿಲ್ಲ ಮನಿಯಿಲ್ಲ ಮಹಗಂಡಾ ||೫||
*****
ಗಂಡ = ನಿರಾಕಾರ ಪರಮಾತ್ಮ
ಗೆಳತೇರು = ಐಹಿಕ ಭೋಗಗಳು
ಮಡದಿ = ಆತ್ಮ

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...