Home / ಲೇಖನ / ವಿಜ್ಞಾನ / ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ

ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ

ವಿಟಾಮಿನ ‘ಸಿ’ ಯು ರಕ್ತದಲ್ಲಿಯ ಸೀಸದ ಪ್ರಮಾಣದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನಗಳಿಂದ ದೃಢಪಟ್ಟಿದೆ. ಅಮೇರಿಕಾ ಪರಿಸರ, ಪರಿಸರ ರಕ್ಷಣಾ ಸಂಸ್ಥೆಯ ಹೊಸ ಅಧ್ಯಯನ ಪ್ರಕಾರ “ಎಸ್ಕಾರ್ಬಿಕ್ ಆಮ್ಲ” (ವಿಟಾಮಿನ್-ಸಿ) ಕಡಿಮೆಯಾಗುವುದು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸೀಸದಿಂದ ಕೂಡಿದ ಧೂಳು, ಸೀಸದಿಂದ ಕೂಡಿದ ಪೆಂಟ್‌ಗಳು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸುತ್ತದೆ. ವೈದ್ಯಕೀಯ ಪ್ರಯೋಗವೊಂದು ವಿಟಾಮಿನ್ – ಸಿ ಮತ್ತು ರಕ್ತದಲ್ಲಿರುವ ಸೀಸದ ಪ್ರಮಾಣದ ಸಂಬಂಧವನ್ನು ದೃಢಗೂಳಿಸಿದೆ. ಆದರೂ 1000 mg ವಿಟಾಮಿನ್-ಸಿಯು, ಧೂಮಪಾನಿಗಳ ರಕ್ತದಲ್ಲಿರುವ ಸೀಸದ ಪ್ರಮಾಣವನ್ನು ಕಡಿಮೆಗೊಳಿಸುತ್ತ ಹೋಗುತ್ತದೆ. ಧೂಮಪಾನವು ವಿಟಾಮಿನ್ ಸಿಯು ಜೈವಿಕ ವಿಭಜನೆಯನ್ನು ಅಧಿಕಗೊಳಿಸವದೇ ಹೆಚ್ಚು, ಇದರಿಂದ ಸೀಸದ ಪ್ರಮಾಣವು ದೇಹ ಸೇರುವುದೆಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಸೀಸದ ಪ್ರಮಾಣವು ದೇಹದಲ್ಲಿ ಹೆಚ್ಚುವುದು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿ ತಲೆನೋವು, ಅನೀಮಿಯಾ, ನೆನಪಿನ ಶಕ್ತಿಕಡಿಮೆಗೊಳಿಸುವಿಕೆ, ಕಿಡ್ನಿ-ರೋಗ, ಹೊಟ್ಟೆ ನೋವು ಮುಂತಾದವುಗಳು ಕಾಣಸಿಕೊಳ್ಳುವ ಸಾಧ್ಯತೆಗಳಿವೆ. ಮಾನವನಲ್ಲಿ ಕೆಲವು ಸಸ್ತನಿಗಳಂತೆ ವಿಟಾಮಿನ್ ‘ಸಿ’ ದೇಹದಲ್ಲಿಯೇ ಉತ್ಪತ್ತಿಯಾಗುವುದಿಲ್ಲ. ಇದು ಆಹಾರದಿಂದಲೇ ಲಭ್ಯವಾಗುತ್ತದೆ. ಧೂಮಪಾನಿಗಳಲ್ಲಿ ೬೦೦ ಮಿ. ಗ್ರಾಂ ಧೂಮಪಾನವಮ್ನ ಸೇವಿಸಿದಾಗ ೧೦೦ ಗ್ರಾಂ ವಿಟಾಮಿನ್ ಸಿ, ಅನ್ನು ಪ್ರತಿದಿನ ತೆಗೆದುಕೊಳ್ಳಬೇಕಾಗುತ್ತದೆ. (ಅದನ್ನು ಆರ್.ಡಿ ಎ. ಅಥವಾ ರೆಕಮಂಡೆಡ್ ಡೈಲಿ ಎಲಿವನ್ಸ್ ಎನ್ನುತ್ತಾರೆ) ಮಕ್ಕಳಿಗೆ ದಿನವೊಂದಕ್ಕೆ ೪೫ ಮಿ.ಗ್ರಾಂ. ವಿಟಾಮಿನ್ ‘ಸಿ’ ಆರೋಗ್ಯಕ್ಕೆ ಒಳ್ಳೆಯದು. ಸಮಗಾತ್ರದ ಕಿತ್ತಳೆ ಹಣ್ಣು ೬೦ ರಿಂದ ೮೦ ಮಿ. ಗ್ರಾ. ವಿಟಾಮಿನ್ ‘ಸಿ’ ಅನ್ನು ಹೊಂದಿರುತ್ತದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...