Home / ಲೇಖನ / ವಿಜ್ಞಾನ / ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ

ರಕ್ತದಲ್ಲಿ ಸೀಸದ ಪ್ರಮಾಣ ಮತ್ತು ವಿಟಮಿನ್ – ಸಿ

ವಿಟಾಮಿನ ‘ಸಿ’ ಯು ರಕ್ತದಲ್ಲಿಯ ಸೀಸದ ಪ್ರಮಾಣದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನಗಳಿಂದ ದೃಢಪಟ್ಟಿದೆ. ಅಮೇರಿಕಾ ಪರಿಸರ, ಪರಿಸರ ರಕ್ಷಣಾ ಸಂಸ್ಥೆಯ ಹೊಸ ಅಧ್ಯಯನ ಪ್ರಕಾರ “ಎಸ್ಕಾರ್ಬಿಕ್ ಆಮ್ಲ” (ವಿಟಾಮಿನ್-ಸಿ) ಕಡಿಮೆಯಾಗುವುದು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸೀಸದಿಂದ ಕೂಡಿದ ಧೂಳು, ಸೀಸದಿಂದ ಕೂಡಿದ ಪೆಂಟ್‌ಗಳು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸುತ್ತದೆ. ವೈದ್ಯಕೀಯ ಪ್ರಯೋಗವೊಂದು ವಿಟಾಮಿನ್ – ಸಿ ಮತ್ತು ರಕ್ತದಲ್ಲಿರುವ ಸೀಸದ ಪ್ರಮಾಣದ ಸಂಬಂಧವನ್ನು ದೃಢಗೂಳಿಸಿದೆ. ಆದರೂ 1000 mg ವಿಟಾಮಿನ್-ಸಿಯು, ಧೂಮಪಾನಿಗಳ ರಕ್ತದಲ್ಲಿರುವ ಸೀಸದ ಪ್ರಮಾಣವನ್ನು ಕಡಿಮೆಗೊಳಿಸುತ್ತ ಹೋಗುತ್ತದೆ. ಧೂಮಪಾನವು ವಿಟಾಮಿನ್ ಸಿಯು ಜೈವಿಕ ವಿಭಜನೆಯನ್ನು ಅಧಿಕಗೊಳಿಸವದೇ ಹೆಚ್ಚು, ಇದರಿಂದ ಸೀಸದ ಪ್ರಮಾಣವು ದೇಹ ಸೇರುವುದೆಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಸೀಸದ ಪ್ರಮಾಣವು ದೇಹದಲ್ಲಿ ಹೆಚ್ಚುವುದು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿ ತಲೆನೋವು, ಅನೀಮಿಯಾ, ನೆನಪಿನ ಶಕ್ತಿಕಡಿಮೆಗೊಳಿಸುವಿಕೆ, ಕಿಡ್ನಿ-ರೋಗ, ಹೊಟ್ಟೆ ನೋವು ಮುಂತಾದವುಗಳು ಕಾಣಸಿಕೊಳ್ಳುವ ಸಾಧ್ಯತೆಗಳಿವೆ. ಮಾನವನಲ್ಲಿ ಕೆಲವು ಸಸ್ತನಿಗಳಂತೆ ವಿಟಾಮಿನ್ ‘ಸಿ’ ದೇಹದಲ್ಲಿಯೇ ಉತ್ಪತ್ತಿಯಾಗುವುದಿಲ್ಲ. ಇದು ಆಹಾರದಿಂದಲೇ ಲಭ್ಯವಾಗುತ್ತದೆ. ಧೂಮಪಾನಿಗಳಲ್ಲಿ ೬೦೦ ಮಿ. ಗ್ರಾಂ ಧೂಮಪಾನವಮ್ನ ಸೇವಿಸಿದಾಗ ೧೦೦ ಗ್ರಾಂ ವಿಟಾಮಿನ್ ಸಿ, ಅನ್ನು ಪ್ರತಿದಿನ ತೆಗೆದುಕೊಳ್ಳಬೇಕಾಗುತ್ತದೆ. (ಅದನ್ನು ಆರ್.ಡಿ ಎ. ಅಥವಾ ರೆಕಮಂಡೆಡ್ ಡೈಲಿ ಎಲಿವನ್ಸ್ ಎನ್ನುತ್ತಾರೆ) ಮಕ್ಕಳಿಗೆ ದಿನವೊಂದಕ್ಕೆ ೪೫ ಮಿ.ಗ್ರಾಂ. ವಿಟಾಮಿನ್ ‘ಸಿ’ ಆರೋಗ್ಯಕ್ಕೆ ಒಳ್ಳೆಯದು. ಸಮಗಾತ್ರದ ಕಿತ್ತಳೆ ಹಣ್ಣು ೬೦ ರಿಂದ ೮೦ ಮಿ. ಗ್ರಾ. ವಿಟಾಮಿನ್ ‘ಸಿ’ ಅನ್ನು ಹೊಂದಿರುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...