Home / ಲೇಖನ / ವಿಜ್ಞಾನ / ಶೀತದ ಕ್ಯಾನ್ಸರ್ ನಿವಾರಕ ಟೊಮ್ಯಾಟೊ

ಶೀತದ ಕ್ಯಾನ್ಸರ್ ನಿವಾರಕ ಟೊಮ್ಯಾಟೊ

ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಡಾ|| ಪೌಲಿಂಗ್ ಅವರು ವಿಟ್ಟಾಮಿನ್ ‘ಸಿ’ ಯ ಮೇಲೆ ಸಂಶೋಧನೆ ನಡೆಯಿಸಿ ಟೊಮ್ಯಾಟೋ ಬಳಸುವುದರಿಂದ ಶೀತದಿಂದ ಬರುವ ಕ್ಯಾನ್ಸರ್ ಅನ್ನು ತಡೆಗಟ್ಟಿಬಹುದೆಂದು ದೃಢಪಡಿಸಿದ್ದಾರೆ. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಸುವ ಪೌಷ್ಠಿಕವಾದ ತರಕಾರಿ, ಆದರೂ ಇದರ ಅಂತರಂಗದಲ್ಲಿ ಅಡಗಿದ ದ್ರವ್ಯಗಳು ಇರುವಿಕೆ ಗೊತ್ತಾವುದೇ ಇಲ್ಲ.

ಮೊದಲನೆಯದ್ದಾಗಿ ವಿಟಾಮಿನ್ ‘ಸಿ’ ಟೊಮ್ಯಾಟೋದಲ್ಲಿ ಅಧಿಕವಾಗಿದೆ. ವಿಟಮಿನ್ ‘ಎ’ ಸಹ ವಿಪುಲವಾಗಿದೆ. ಇದೂ ಅಲ್ಲದೇ ‘ಪೊಲಿಕ್ ಆಸಿಪ್’ ಎಂಬ ಇನ್ನೂಂದು ವಿಟಮಿನ್ ಸಹ ಇದರಲ್ಲಿ ಇವೆ. ಇದಕ್ಕೆ ಕೆಂಪು ವರ್ಣ ಬರುವಂತೆ ಮಾಡಲು ‘ಲೈಕೋಪಿನ್’ ಘಟಕವಿದೆ. ಮಹತ್ವದ ಸಂಗತಿ ಎಂದರೆ ಈ ಘಟಕವು ಕ್ಯಾನ್ಸರ್, ಪುಪ್ಟಸಕ್ಯಾನ್ಸರ್ ಹಾಗೂ ಜಠರಕ್ಯಾನ್ಸರ್‍ಗಳನ್ನು ಪ್ರತಿಬಂಧಿಸುವ ಶಕ್ತಿ ಈ ಟೊಮ್ಯಾಟೋಕ್ಕೆ ಇದೆ. ಇದನ್ನು ತಾಜಾರೂಪದಲ್ಲಾದರೂ ಆಗಲಿ, ಅಡುಗೆಯಲ್ಲಿ ಬಳಸಿಯಾಗಲಿ, ಉಪಯೋಗಿಸುವುದು ಶ್ರೇಷ್ಠವಾದುದು.

‘ಎ’ ವಿಟ್ಯಾಮಿನ್ ಕಡಿಮೆಯಾಗಿ ಲಕ್ಷಗಟ್ಟಲೇ ಮಕ್ಕಳು ಕುರುಡರಾಗಿರುತ್ತಿರುವ ವಿಷಯ ಗೊತ್ತಿರುವ ಸಂಗತಿಯೇ ಆಗಿದೆ. ಪೊಲಿಕ್ ಆಸಿಪ್ ವಿಟಮಿನ್ ದೊರೆಯದೇ ಲಕ್ಷಗಟ್ಟಲೇ ಜನರು ರಕ್ತ ಹೀನತೆಯಿಂದ ಬಿಳಲುತ್ತಿರುವುದು ತಿಳಿದ ವಿಷಯ. ವಿಶೇಷವಾಗಿ ಗರ್ಭಿಣಿಯರಲ್ಲಿ ಈ ಕೊರತೆ ಕಂಡು ಅವರು ರಕ್ತ ಹೀನತೆಯಿಂದ ಬಳಲುವರಲ್ಲದೇ ಅವರ ಗರ್ಭದಲ್ಲಿರುವ ಶಿಶುವು ಸಹ ರಕ್ತ ಹೀನತೆಯಿಂದ ಬಳಲಿ ಊನಾಗುವ ಸಾಧ್ಯತೆಗಳಿವೆ. ವಿಟ್ಯಾಮಿನ್ ‘ಸಿ’ ಯಿಂದ ಶೀತದ ಕ್ಯಾನ್ಸರ್ ರೋಗ ತಡೆಯುವ ಶಕ್ತಿಯನ್ನು ಹೊಂದಿದೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...