Home / ಕವನ / ಕವಿತೆ / ಯದುಮಣಿಯ ಜನುಮದಿನ

ಯದುಮಣಿಯ ಜನುಮದಿನ

ಯಾದವರ ಜಿವಸುಳಿ ವುರಿಗೆರೆಯು ಮೈಸೂರು
ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು
ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು

ಆದಿಯಿಂ ರಾಜ ಕಂಠೀರವರ ದೇವಚಾ
ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ
ಮೋದದಲಿ ರಾಜಸಿರಿ ಹಾದಿಯಲಿ ಎಣಿಸಿಹಳು ಮಹಿಷರ ನೆನಹಿನಲ್ಲಿ

ದಳವಿ ನ್ನೊಂದರಳುತಲಿದೆ ನೋಡಿರಿ
ತಿಳಿಹೃದಯದ ತೆರೆ ತೆಗೆಯುತಲಿರುವುದು
ತಿಳಿ! ಯಾದವ ಶಕುತಿಯ ದಳವೆದ್ದಿತು! ಈ ದಿನ ಜನುಮದಿನ

ಸುಳಿಸುಳಿ ಕಂಪಿನ ಸುಳಿಯಲಿ ಪ್ರಜೆಗಳು
ಕಳಕಳ ರವದಲಿ ಕೂಡುತ ಹರಿದರು
ಇಳೆಯೊಳು ಹೊಸದಿನ ವೊಂದುರಿಯುತಲಿದೆ ಕಾಂತಿಯ ನೋಡೆನುತ

ವನವನಾಂ ತರದಿಂದ ಹೊರಸೂಸು ತಿರಸುರಭಿ
ಘನಪಥದಲತಿಥಿ ಜನ ಮನಮರೆದು ಸುಳಿಸುಳಿಯೆ
ಸನುಮತದ ಸುಳಿಯಿಡುತ ಚಿರದಿನದ ಗೆಳೆತನವು
ಬಲು ಬಿರಿದು ಸುರಿಯೆ ಮಧುವು

ಮನವರಳಿ ಕಂಪೊಗೆಯೆ ಮಹಿಷೂರ ನಾಡೊಳಗೆ
ಜನುಮದಿನ ಜನವಿದಕೆ! ಜನುಮದಿನ ಯಾದವರ
ಘನಜೋತಿಲತೆಗಿದುವೆ! ಜನುಮದಿನ ವೈಭವಕೆ!
ಜನುಮದಿನ! ಸುಖಶಾಂತಿಗೆ

ಜಗದಲಿ ಕೋಲಾ ಹಲವಿದು ಹೊಳಲಿಡೆ
ಚಿಗುರಲು ಹೊಸದಿನ ವರಳಲು ರವಿಸುಮ
ಬಗೆಬಗೆ ನಿಧಿಗಳ ನೊಗೆದಿಡೆ ಧರಣಿಯು ಕೈಗಾಣಿಕೆಯೆನುತ

ಮಿಗೆಸವಿ ಪುರುಳನು ಪ್ರಜೆಗಳು ತರುತಿರೆ
ಸೊಗೆಯಿಪ ನೆನಹವು ಹಾರುತಬರುತಿರೆ
ಗಗನಕೆ ನೆಗೆದಿತು ಹಳದಿನದಂಚೆಯು ಹೊಸದಿನ ದನಿಗೊಡಲು

ನುಂಗುತಲಿ ಮಲಗೆದ್ದು ಹಳೆದಿನದ ದುಗುಡಗಳ
ಸಂಗಡಲೆ ಚಿಗಿದೆದ್ದು ಗಂಡಭೇರುಂಡವದು
ಕಂಗಳಿರೆ ಭರವಸೆಯ ಜೋತಿಯೆರಡೆನುವಂತೆ ಮೀಯುತಿರೆ ಆಗಸದಲಿ

ಕೆಂಗಿರುಣದಲಿ ಮಿಂದು ಯದುಮಣಿಯ ಮನವಿಂದು
ಸಿಂಗರಿಸಿ ಕೈಬಿಗಿದ ಜನವೃಂದವನು ಬಿಗಿದು
ಕಂಗಳಾಹೊಳಹಿನಲಿ! ಕಂಬನಿಯ ಮಿಡಿಯೆ! ನವ
ಜೀವಕಾದಿಯಿದು! ಎನುತ

ಮಂಜುಳ ರವವೇ ನೆನ್ನುತ ಚಿನನ
ಕಂಜಗಳರಳಲು ಕೇಶವಗವಿಯಿಂ
ದಂಜುತ ಬರುತಲೆ ಗೊಂದಲ ವೇನನೆ! ಚಂಡಿಯು ನಸುನಗಲು

“ನಂಜಿನ ಕೋರೆಯು ಸಡಲಿವೆಕಾಲಗೆ!
ಆಂಜದಿರಂಜದಿರವಮುಳಿದರೆ! ನೀ”
ನಂಜನಗೂಡಲಿ ಧೈರ್ಯದ ನುಡಿಬರೆ ಕೊಂಡಿಯು ಸಡಲಿದವು

ದಿನದೇರು ಬಹಮುಂದೆ ಬಿಳಿಗೊಳದ ಕಳಶದಲಿ
ಹನಿಸಿಡುವೆ ಸೈಕತವ ಗೋದೆಯಲಿ ನಾಮಿಂದು
ಮನವಾಜಿಯೇರುತಲಿ ತುಂಬುವೆನು ತುಂಗೆಯಲಿ
ಭದ್ರೆಯಲಿ ಶುಭಜಲವನು

ವನಪಥವ ಕಾವೇರಿ ಬಿಡುವುದರ ಮುಮ್ಮುಂದೆ
ಹನಿಸಿಡುವೆ ಕಳಶಕ್ಕೆ! ಶಿರಿಯುಗದ ಜೀವನವ!
ಘನಪಾದವೆರಡನ್ನು ತೊಳೆಯುವೆನು ಬಾ! ವಿಭುವೆ!
ಕರುನಾಡ ಹೃದಯದಲ್ಲಿ

ನಲಿದೆದ್ದು ಹಂಪೆಯಲಿ ಶಿಖಿಯೆತ್ತೆ ಕೊಳಲನ್ನು
ಜಲ! ಜೋಗ ಪಾತ್ರದಲ್ಲಿ ಜಯಘೋಷ ಮಾಡುತಿರೆ
ತಿಳಿನೆನಹ ಗಂಗರಸ ಚಾಲುಕ್ಯ ಹೊಯ್ಸಳರು
ಶುಭದಿನವು ! ಸಾಧುವೆನಲು

ಅಲೆಯೆದ್ದು ತೀರಗಳ ನಪ್ಪುತಲೆ ಬೆಳೆಯಿರೆನೆ
ಕಳಕಳವು ಕಾಳೆಯಿಡಲರಿವಿನಟಿವಿಯ ದೂರಿ
ಘಳಿರನಿದೂ! ವೈತಾಳಿ! ಮಹಿಷೂರಮಂಗಳಕೆ
ಶ್ರೀ ಕೃಷ್ಣ ಏಳೆನುತಿದೆ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...