Home / ಕವನ / ಅನುವಾದ / ಚಹರೆಪಟ್ಟಿ

ಚಹರೆಪಟ್ಟಿ

ರಿಕಾರ್ಡು ಬರೆದುಕೋ.
ನಾನು ಅರಬ.
ನನ್ನ ಕಾರ್ಡಿನ ನಂಬರು ಐವತ್ತುಸಾವಿರ.
ಎಂಟು ಮಕ್ಕಳು.
ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ.
ಇದಕ್ಕೆ ಕೋಪ ಯಾಕೆ?
ರಿಕಾರ್ಡು ಬರೆದುಕೋ.

ನಾನು ಅರಬ
ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ.
ಎಂಟು ಮಕ್ಕಳು.
ಅವರ ಬ್ರೆಡ್ಡಿಗೆ, ಬಟ್ಟೆಗೆ, ಸ್ಕೂಲು ಪುಸ್ತಕಕ್ಕೆ
ಕಲ್ಲು ಕದಿಯುತ್ತೇನೆ.
ನಿಮ್ಮ ಮನೆ ಬಾಗಿಲಿಗೆ ಭಿಕ್ಷಕ್ಕೆ ಬಂದಿಲ್ಲವಲ್ಲ,
ನಿಮ್ಮಕಾಲಿಗೆ ಬಿದ್ದು ಬೇಡಿಲ್ಲವಲ್ಲ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ಬಿರುದಿಲ್ಲದ ಹೆಸರಿನವನು,
ಕೋಪದ ಸುಳಿಗೆ ಸಿಕ್ಕ ದೇಶದಲ್ಲಿ
ತಾಳ್ಮೆಯಿಂದ ಇರುವವನು.
ನನ್ನ ಬೇರು ಕಾಲದ ಆದಿಗಿಂತ ಹಳೆಯದು.
ಸಮುದ್ರಗಳು ಹುಟ್ಟುವ ಮುನ್ನ
ಸೈಪ್ರಸ್ಸು ಆಲಿವ್ವು ಮರಗಳು ಹುಟ್ಟುವ ಮುನ್ನ
ಜೊಂಡು ಬೆಳೆಯುವ ಮುನ್ನ
ಮುನ್ನ ಎಂಬ ಮುನ್ನ ಬೇರು ಬಿಟ್ಟಿದ್ದೆ.
ನಮ್ಮಪ್ಪ ನೇಗಿಲ ಕುಲದಿಂದ ಬಂದವನು,
ಶ್ರೀಮಂತ ಸರದಾರನಲ್ಲ,
ನಮ್ಮ ತಾತನೂ ರೈತ.
ವಂಶವೃಕ್ಷವಿಲ್ಲದವನು.
ನಮ್ಮ ಮನೆ
ಕೋಲು ಹೂತು ಹುಲ್ಲು ಹೊದಿಸಿದ ಗುಡಿಸಲು.
ನನ್ನ ಸ್ಥಿತಿಯಿಂದ ಸಮಾಧಾನವಾಯಿತೇ?
ನನ್ನ ಹೆಸರಿನ ಜೊತೆಗೆ ಮನೆತನದ ಹೆಸರು ಇಲ್ಲ.
ರಿಕಾರ್ಡು ಬರೆದುಕೋ.

ನಾನು ಅರಬ.
ಕೂದಲ ಬಣ್ಣ : ದಟ್ಟ ಕಪ್ಪು.
ಕಣ್ಣಿನ ಬಣ್ಣ : ಕಂದು.
ನನ್ನ ಗುರುತಿನ ಚಹರೆ : ನೆತ್ತಿಯ ಮೇಲೆ
ಮುಟ್ಟಿದವರ ಕೈ ಸೀಯಿಸಿಬಿಡುವ
ಮಂತ್ರಾಕ್ಷರಗಳಿವೆ ‘ಇಖಾಲ್’ ನೊಡನೆ ‘ಖೆಫಿಯೆ’
ನನ್ನವಿಳಾಸ : ದೂರದ, ಎಲ್ಲರೂ ಮರೆತ, ಹೆಸರಿಲ್ಲದ ಬೀದಿಗಳ,
ಎಲ್ಲರೂ ಕ್ವಾರಿಯಲ್ಲಿ ಹೊಲದಲ್ಲಿ ದುಡಿಯುವ
ಒಂದು ಹಳ್ಳಿ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ನೀವು ನಮ್ಮತಾತಂದಿರ ದ್ರಾಕ್ಷಿ ತೋಟ ಕದ್ದಿರಿ.
ನಾನು ದುಡಿಯುತ್ತಿದ್ದೆ
ನನ್ನಮಕ್ಕಳು ದುಡಿಯುತ್ತಿದ್ದರು.
ನನಗೆ ನನ್ನ ಮೊಮ್ಮಕ್ಕಳಿಗೆ
ಈ ಕಲ್ಲು ಬಂಡೆ ಮಾತ್ರ ಬಿಟ್ಟಿದ್ದೀರಿ.
ಸರ್ಕಾರ ಇದನ್ನೂ ತೆಗೆದುಕೊಳ್ಳುತ್ತೆಂದು ಹೇಳುತ್ತಾರೆ.
ಹೌದೆ ?

ಹೀಗೆ!
ರಿಕಾರ್ಡು ಬರೆದುಕೋ, ಮೊದಲ ಪುಟದ ಮೇಲುಗಡೆ :
ನನಗೆ ಜನರನ್ನು ಕಂಡರೆ ದ್ವೇಷವಿಲ್ಲ.
ನಾನು ಯಾರ ಜಮೀನಿನೊಳಗೂ ಕಾಲಿಡುವುದಿಲ್ಲ.
ಆದರೂ, ನನಗೆ ಹಸಿವಾದರೆ
ನನ್ನನ್ನು ಓಡಿಸಿದವರ ಮಾಂಸ ತಿನ್ನುತ್ತೇನೆ.
ಹುಷಾರು, ನನ್ನ ಹಸಿವಿನ ಬಗ್ಗೆಹುಷಾರು!
ನನ್ನ ಕೋಪದ ಬಗ್ಗೆ ಹುಷಾರು!
*****
ಮೂಲ: ಮಹಮೂದ್ ದರ್‍ವೇಶ್

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...