Home / ಕವನ / ಅನುವಾದ / ಶಿಶು ಗೀತೆ

ಶಿಶು ಗೀತೆ

ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ?
ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು?

ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ
ಮಗುಗಳ ಮಾಣಿಕ್ಯನಂಥ ಕಿಲಕಿಲನೆ ನಗುವ ಮಗು?

ಮಗಳೇ, ಮಗಳೇ, ನಿನ್ನ ಮಗುವನ್ನು ಮುದ್ದು ಮಾಡಲು ನನಗೂ ಆಸೆ, ಮಗಳೇ.
ಅಜ್ಜಿಯ ಪ್ರೀತಿ ತೋರಿ, ಬೊಚ್ಚು ಬಾಯಲ್ಲಿ ಮುದ್ದಿಟ್ಟು ನಗುವ ಆಸೆ, ಮಗಳೇ.

ಮಗುವಿನ ತಲೆಯ ಮೇಲೆರಡು ಪುಟ್ಟ ಕೋಡು ಮೊಳೆತಿವೆಯಲ್ಲ, ಯಾಕೋ?
ಅಮೆರಿಕದ ಶೂ ತೊಟ್ಟು ನಮ್ಮ ಮನೆಯಂಗಳ ದಾಟಿ ನ್ಯೂಯಾರ್ಕಿಗೆ ಹೆಜ್ಜೆ ಹಾಕುವಂತೆ ಕಾಣುವನಲ್ಲ?

ಟಿವಿಯ ಹಾಡು ನೋಡುತ್ತಾ ಕಂಪ್ಯೂಟರಿನ ಆಟ ಆಡುತ್ತಾ
ಮೈ ಜ್ವರ ಬಂದ ಹಾಗೆ ಬಿಸಿಯಾಗಿ ಮುಟ್ಟಿದರೆ ಸುಡುವುದಲ್ಲಾ?

ನಿನ್ನೆದೆಯ ಹಾಲಿನ ಪರಿಮಳದ ಬದಲು ಮಗವಿನೆದೆಗೆ ಪ್ಯಾರಿಸ್ಸಿನ ಸೆಂಟಿನ ವಾಸನೆ ಇಳಿದಿದೆಯಲ್ಲ?
ಎಳೆ ಚಿಗುರ ಕೈ ಬೆರಳು, ಚೆಕ್ಕು ಪುಸ್ತಕದ ಹಾಳೆಗೆ ಸೈನು ಹಾಕುವ ಪೆನ್ನಿನಂತಿವೆಯಲ್ಲಾ?

ಒಂದು ಕಣ್ಣಲ್ಲಿ ಗಾಳ, ಇನ್ನೊಂದರಲ್ಲಿ ಬಂದೂಕು ಕಾಣುತ್ತೆಯಲ್ಲಾ?
ಕಿವಿ ಮೊರದಗಲವಾಗಿ ಚೂಪಾಗಿ, ಪಾದ ಹಿಂದುಮುಂದಾಗಿವೆಯಲ್ಲಾ?

ಅಮ್ಮಾ ಅಮ್ಮಾ, ನನ್ನ ಮಗನ ಕಂಡರೆ ಪ್ರೀತಿಯಿಲ್ಲವೇನಮ್ಮಾ?
ಹೇಳಮ್ಮಾ, ನಿನ್ನ ಮೊಮ್ಮಗನ ಕಂಡರೆ ಅಕ್ಕರೆ ಇಲ್ಲವೇನಮ್ಮಾ?

ಮಣ್ಣಲ್ಲಿ‌ಆಡಿ, ಹಕ್ಕಿ ಗುಬ್ಬಿ ನೋಡಿ, ಕತೆ ಹೇಳಜ್ಜಿ ಅನ್ನುತ್ತಾ ಪಕ್ಕದಲ್ಲಿ ಮಲಗುವ ಮೊಮ್ಮಗ
ಒಂದು ತುತ್ತು‌ಅನ್ನತಿನ್ನಲು ಮನೆಯೆಲ್ಲ‌ಅಡ್ಡಾಡಿಸುವ ಮೊಮ್ಮಗ

ಆ ಆಟ, ಊ ಊಟ ಅನ್ನುತ್ತಾ ಇದು ನನ್ನ ಅಂಗಿ, ನನ್ನ ಮನೆ, ನನ್ನ ತಟ್ಟೆ ಅಂತ ಜಗಳಾಡುವ
ಮುದ್ದು ಮೊಮ್ಮಗ ಬರುತ್ತಾನೆಂದುಕೊಂಡಿದ್ದೆನಲ್ಲೇ ತಾಯಿ!
*****
ಮೂಲ: ಚಾರ್ಲ್ಸ್ ಕಾಸ್ಲೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...