Home / ಕವನ / ಕವಿತೆ / ಅಹಲ್ಯೆ

ಅಹಲ್ಯೆ

ಕನಸುಗಳು ಕತ್ತಲಲ್ಲಿ ಕರಗಿ ಹೋಗಿ
ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ
ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು
ಇರುವೆಗಳಂತೆ ಸದ್ದು ಮಾಡದೇ
ಮುಚ್ಚಿದ ಬಾಗಿಲುಗಳ ಸಂದಿಯಿಂದ
ಹರಿದು ಬಂದಾಗ ಕಣ್ಣುಗಳ ತುದಿಯಿಂದ
ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್ಯೆ

ಕಾಲುದಾರಿ ರಸ್ತೆರಹದಾರಿ ಏನೊಂದೂ ಆಗದ
ನನ್ನ ಪ್ರೇಮದ ನಡುಗೆ ಬರೀ
ಅವರಿವರ ಕಣ್ಣುಗಳ ನೋಟಗಳ ಅರೆಸುವಿಕೆ
ನೆನೆಪುಗಳು ತೂತು ತೂತಾದ ಜಾಲರಿಯ
ಭಂಗಿಗಳು ಸೋರಿಹೋದ ಕಣಗಳ ನೆನಪು
ಗೋಡೆ ಮೇಲಿನ ಗಡಿಯಾರ ಸುಮ್ಮನೆ
ಬಾರಿಸುತ್ತದೆ. ಗಂಟೆಗಳ ಕಾಯುತ್ತಾ ಕುಳಿತ ಅಹಲ್ಯೆ.

ಸ್ಪರ್ಶದಲಿ ಚಿಗುರಿನಲಿ ಮೌನದಲಿ
ಬೆರಗು ವಿಸ್ಮಯಗಳ ಹಾದಿ ಪಯಣದಲಿ
ಒಂಟಿ ಕಂದೀಲು ಹಿಡಿದು ಕಲ್ಲಾದ ಉಸಿರು
ಓಣಿಯ ತುಂಬೆಲ್ಲಾ ಬರೀ ಕೆಸರು ಯಾವ
ಸೂಚನೆಗಳು ಯೋಚನೆಗಳು ಗಾಳಿಯಲಿ
ನೀಲಿಯಲಿ ನದಿಯಲಿ ಹರಿದು ಬರೆಯಲು
ಕನಸುಗಳ ಬಣ್ಣದ ಎಳೆಗಳ ನೇಯ್ಗೆ, ಎದೆಯ ಮಗ್ಗದಲಿ
ಸ್ಪರ್ಶ ಸುಖದ ಕಾವು ಹರಡುವ ಸೂರ್ಯನಿಗಾಗಿ,
ಕಾಯುತ್ತಾ ಕುಳಿತ ಅಹಲ್ಯೆ ಇವಳು.

ಮೂಡಿಸಿದ ಮೂಡಲಲಿ ಕೆಂಪುಹಿತ
ಬಣ್ಣದೋಕುಳಿ ಆಡಿದ ಸಂಜೆಯ
ಬಾನಿನ ತುಂಬಾ ರೆಕ್ಕೆಗಳ ಬಿಚ್ಚಿ ಹಾರಾಡಿ
ಸಾಗಿದ ಬೆಳ್ಳಕ್ಕಿ ಹಿಂಡು, ಚಂದ್ರನಿಲ್ಲದ
ಇರುಳಲ್ಲಿ ನಕ್ಷತ್ರಗಳ ಲೋಕಗಳ ಚುಕ್ಕಿಗಳು
ಮಿನುಗಿ ಊರೆಲ್ಲಾ ನಿಶ್ಯಬ್ದ ಬಂದೇ ಬರುವ
ಅವನ ಹೆಜ್ಜೆ ಸಪ್ಪಳದಲ್ಲಿ ಕಲ್ಲಾಗಿ ಪವಡಿಸಿದ
ನಾಳೆಯ ಆಗಮಕೆ ಕಾದ ಅಹಲ್ಯೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...