Home / ಕವನ / ಕವಿತೆ / ಕ್ಷಿತಿಜದೆಡೆಗೆ

ಕ್ಷಿತಿಜದೆಡೆಗೆ

ಮುಗಿದುಹೋಯ್ತು ಬಂದ ಕೆಲಸ
ಇನ್ನು ಹೊರಡಬೇಕು
ದಿಗಂತದೆಡೆಗೆ ಪಯಣ
ಮುಗಿದು ಹೋದ
ಬಾಳಿಗರ್ಥ ಹುಡುಕಿ
ವ್ಯರ್ಥವಾದ ಮೇಲೆ
ಹೋಗಿ ಸೇರುವ ಕಡಲ ತಡಿಯ

ಕ್ಷಿತಿಜದಂಚಿನ ಬೆಳ್ಳಿ ರೇಖೆಯ
ಮೇಲೆ ಬಾನಿರಬಹುದು ಶೂನ್ಯ
ಶೂನ್ಯ ಶೂನ್ಯವ ಮೀರಿ ನಿಲ್ಲುವ
ಕೆಚ್ಚೆದೆ ಬಂದಿದೆ,
ಬೆಚ್ಚದೇ ನಡೆಯಬೇಕೀಗ

ಕಳೆದು ಹೋಗಿಹ
ಅನಂತ ಸಂಬಂಧಗಳ ಮೇಲೆ
ಎಳೆಯಬೇಕೀಗ ಕಲ್ಲಿನಾಗೋಡೆ
ನೆನೆವೂ ಬರದಂತೆ
ಅನುಭವವೂ ಇರದಂತೆ
ಕಪ್ಪಾಗಬೇಕು ಎಲ್ಲಾ ಹಿಂದಿನ ಚಿತ್ರ!

ಹೊರಟಿಹ ಕಾರ್ಯ ಹಿರಿದೇನಲ್ಲಾ
ಆದರೆ ಮಾಡಲಿರುವುದೆಲ್ಲಾ ದೊಡ್ಡದೇ
ಬಾನಿನಾಚೆಯಲಿ ಬೆಳಕಿದೆಯೋ?
ಕತ್ತಲಿದೆಯೋ?
ಬರಿಯ ಬೆತ್ತಲಿದೆಯೋ? ನಮಗೆ ತಿಳಿದಿಲ್ಲ.

ಹೊರಟಿರುವೆವು ನಿರಾಶ್ರಿತರಾಗಿ
ಭುವಿಯಿಂದ ಕ್ಷಿತಿಜದೆಡೆಗೆ
ನಾವಾರೂ ಸ್ವಾರ್ಥಿಗಳಲ್ಲ
ಕ್ಷಿತಿಜ ನಮ್ಮದೂ ಅಲ್ಲ
ಬೇರಾರದೂ ಆಗಿರಲಿಲ್ಲ!

ತಲುಪಬೇಕಿರುವ ಗುರಿ ಒಂದೇ ಈಗ
ತಲುಪುವುದೂ ಮುಖ್ಯವಲ್ಲ
ದಾರಿ ಸಾಗುವುದೇ ಮುಂದೆ?
ಎಂಬುದೇ ಮೊದಲ ಪ್ರಶ್ನೆ-

ಹೆಚ್ಚಾಗೇ ಇರಲಿ ಎಂದು
ಬುತ್ತಿ ತಂದಿದ್ದೇವೆ ಜಾಸ್ತಿಯೇ
ಅದು ಮುಗಿದು ಹೋಗುವ ಮುನ್ನ
ಸೇರಬೇಕು ದಿಗಂತವನ್ನ
ಆಸೆ ಹಿರಿದೇನಲ್ಲಾ
ಆದರೆ ಗುರಿ ಮಾತ್ರ ಹಿರಿದೇ
ಸಾಗುತಿರುವೆವು ನಾವು ಕ್ಷಿತಿಜದೆಡೆಗೆ
ನಿರಂತರ ಯಾತ್ರಿಕರು ನಾವು
ಗುರಿ ಸೇರಬಲ್ಲೆವೇ?
ಇಲ್ಲ ನಮ್ಮ ಗುರಿಯೇ ಮರೀಚಿಕೆಯೇ?
ಎಂಬುದೇ ಉಳಿದ ಪ್ರಶ್ನೆ ಈಗ!
*****

Tagged:

Leave a Reply

Your email address will not be published. Required fields are marked *

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...