Home / ಲೇಖನ / ವಿಜ್ಞಾನ / ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ ಚಿಕಿತ್ಸೆಯನ್ನು ಮಾಡಿ ಪುನಃಕೂದಲು ಸಮೃದ್ಧಗೊಳ್ಳುವಂತೆ ಮಾಡಲು ಇನ್ನೂ ಪ್ರಯೋಗಗಳು ಆಗಿಲ್ಲ. ೫೦ ವರ್ಷದೊಳಗಿನ ಸ್ತ್ರೀ ಪುರುಷರಿಗೆ ಬೊಕ್ಕತಲೆಯಾದರೆ ಅಂಥವಹರಿಗೆ ಒಬ್ಬ ಸಾಮಾನ್ಯರು ಒಂದು ತೈಲವನ್ನು ಕಂಡು ಹಿಡಿದಿದ್ದಾರೆ. ಇದು ಇವರ ಇತ್ತೀಚಿನ ಶೋಧನೆ, ಮೇಲ್ನೋಟದಲ್ಲಿ ‘ಅರಳೆಕಾಯಿ ಪಾಂಡಿತ್ಯ’ವೆಂದಾದರೂ ಇದರಲ್ಲಿಯೂ ವೈಜ್ಞಾನಿಕ ಕ್ರಿಯೆಗಳು ನಡೆದೇ ಕೂದಲುಗಳು ಅಂಕುರಿಸುತ್ತವೆ, ಎಂಬುದು ಸತ್ಯ.

ಸದ್ಯ ಸಾಗರದ ನಾರಾಯಣ ಬಂಢಾರಿ ವೃತ್ತಿಯಲ್ಲಿ ಕ್ಷೌರಿಕ ೪೦ ವರ್ಷಗಳಿಂದಲೂ ಉದ್ಯೋಗ ಮಾಡುತ್ತಿದ್ದ ಇವರು ಇತ್ತೀಚೆಗೆ ಗಿಡಮೂಲಿಕೆಗಳ ಸಂಗ್ರಹದಿಂದ ತೈಲವೊಂದನ್ನು ಕಂಡು ಹಿಡಿದು ಪ್ರಯೋಗಿಸಿ ಯಶಸ್ವಿಯಾದರು. ಈ ತೈಲದ ಹೆಸರು “ಕನಕ ಸಿಂಹಾದ್ರಿತೈಲ”. ಈಗಾಗಲೇ ಸಾವಿರಾರು ಜನ ಇದನ್ನು ಉಪಯೋಗಿಸಿ ಯಶಸ್ವಿಯಾಗಿದ್ದಾರೆ. ಸ್ನಾನದ ನಂತರ ದಿನ ಬಿಟ್ಟು ದಿನ ಹೀಗೆ ೪ ಬಾಟಲ್ ಮುಗಿಯುವವರೆಗೂ ಹಚ್ಚಿದರೆ ಕೇಶಗಳು ಪುನರ್‌ಸೃಷ್ಟಿಗೊಳ್ಳುತ್ತವೆ. ಇದರ ತಯಾರಿಕೆಯ ಮೂಲವನ್ನು ನಾರಾಯಣ ಬಂಢಾರಿ ಹೇಳಿಲ್ಲ. ಕೆಲವು ವಿದೇಶಿಯರೂ ಕೂಡ ಈ ತೈಲವನ್ನು ಕೊಂಡೊಯ್ದಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...