Home / ಲೇಖನ / ವಿಜ್ಞಾನ / ಲೇಸರ್ ಕಿರಣಗಳ ಅದ್ಭುತ ಶಕ್ತಿ(ವಿರಾಟ ಸ್ವರೂಪ)

ಲೇಸರ್ ಕಿರಣಗಳ ಅದ್ಭುತ ಶಕ್ತಿ(ವಿರಾಟ ಸ್ವರೂಪ)

‘ಲೇಸರ್ ಕಿರಣ’ವು ಇಂದು ಅತ್ಯಂತ ಮಹತ್ವದ ಪರಿಣಾಮಕಾರಿಯಾದ ಒಂದು ಬೆಳಕಿನ ಪುಂಜ. 1958ರಲ್ಲಿ ಡಾ|| ಟೌನ್ಸ್ ಕಂಡು ಹಿಡಿದಿದ್ದರೂ ಇತ್ತೀಚಿನ ವೈಜ್ಞಾನಿಕ ಅವಿಷ್ಕಾರಗಳ ದಸೆಯಿಂದಾಗಿ ಈ ಲೇಸರ್ ವಿರಾಟ ಸ್ವರೂಪಗಳ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಳ್ಳುವಲ್ಲಿ ವಿಜ್ಞಾನಿಗಳು ಶ್ರಮವಹಿಸಿದ್ದಾರೆ. ಇದರಿಂದಾಗಿ ಈಗಾಗಲೇ ಇದರ
ಕ್ರಾಂತಿಕಾರಕ ಬಳಕೆಗಳು ನಡೆಯುತ್ತಲಿವೆ. ವಿಕಿರಣವನ್ನು ಉದ್ದೀಪನಗೊಳಿಸಿ ಉತ್ಕರ್ಷನ ಮೂಲಕ ಬೆಳಕನ್ನು ಹೆಚ್ಚಿಸುವುದು ಇದರ ತತ್ವವಾಗಿದೆ. ವಿಜ್ಞಾನ ವಿಷಯಗಳಲ್ಲಿನ, ಖಗೋಳ, ಭೂಗೋಳ, ವೈದ್ಯಕೀಯ ಶಾಸ್ತ್ರದಲ್ಲಿ ಅಪರಿಮಿತ ಉಪಯೋಗಗೊಳ್ಳುವ ಇದು ಮುಂದುವರಿದ ಜಗತ್ತಿಗೊಂದು ವರದಾನವೆಂದೇ ಹೇಳಬಹುದು.

ಈ ಲೇಸರ್ ಪ್ರಕಾಶವನ್ನು ತೀಕ್ಷ್ಣಗೊಳಿಸಿದರೆ ಒಂದು ಚದರ ಸೆಂಟಿಮೀಟರ್ ಸ್ಥಳದಲ್ಲಿ 50 ಕೋಟಿ ವ್ಯಾಟ್ ಶಕ್ತಿ ಸಂಗ್ರಹಿಸುತ್ತದೆಂದು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಇದರಿಂದಾಗಿ ಕಠಿಣವಾದ ಲೋಹವನ್ನು ಕರಗಿಸುವ, ಕತ್ತರಿಸುವ ಕೆಲಸವನ್ನು ಸಲೀಸಾಗಿ ಮಾಡಬಹುದು.

ಬಾಹ್ಯಾಕಾಶ : ಚಂದ್ರಗ್ರಹಕ್ಕೆ ಲೇಸರ್ ಕಿರಣವನ್ನು ರವಾನಿಸಿ ಅದು ಮರಳಿ ಬರಲು ತಗಲುವ ವೇಳೆಯನ್ನು ಚಂದ್ರ, ಭೂಮಿಯ ನಡುವಿನ ಅಂತರವೆಂದು ಕಂಡು ಹಿಡಿಯಬಹುದು.  ಬಲು ದೂರದ ನಕ್ಷತ್ರವನ್ನು ಬರಿಗಣ್ಣಿನಿಂದ ಕಾಯುವ ಆಕಾಶ ವೀಕ್ಷಕರಿಗೆ ವರದಾನವಾಗಿದೆ. ಕೃತಕ ಉಪಗ್ರಹಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಇದು  ನೆರವಾಗುತ್ತದೆ. ಮುಂದೊಂದು ದಿನ ಮಂಗಳನಲ್ಲಿ ಮನೆ ಮಾಡಿಕೊಂಡು ಟಿ. ವಿ. ಮೂಲಕ ಭೂಮಿಯ ಸ್ಲಿತಿಗತಿ- ಗಳನ್ನು ಲೇಸರ್’ ಸಹಾಯದಿಂದ ಮಾಡಬಹುದು. ವಾಯುಮಂಡಲದ ಅಧ್ಯಯನ, ಹವಾಮುನ್ಸೂಚನೆಯಿಂದ ತೊಡಗಿ ಮಾರುಕಟ್ಟೆಯ ವಿವಿಧ ದರಗಳವರೆಗೂ ಈ ಲೇಸರ್ ಸಹಕರಿಸುತ್ತದೆ.

ಭೂಗೋಳ : ಇದರಿಂದ ಭೂಮಿಯಲ್ಲಿ ಅಡಗಿದ ನಿಧಿ ನಿಕ್ಷೇಪಗಳನ್ನು ಪತ್ತೇಹಚ್ಚ ಬಹುದು. ಹೀಲಿಯಂ, ನಿಯೋನ್ ಗ್ಯಾಸಿನಿಂದ ಉತ್ಪಾದಿಸುವ ಲೇಸರ್ ಕಿರಣಗಳು ಪೃಥ್ವಿಯ ಅಳವನ್ನು ಇಂಚುಬಿಡದೇ ಪರೀಕ್ಷಿಸಿ ನಿಖರ ಫಲಿತಾಂಶ ನೀಡುತ್ತದೆ.

ವೈದ್ಯಕೀಯ : ಈ ಲೇಸರ್ ನೆರವಿನಿಂದ ಮಿದುಳು ಮತ್ತು ಸ್ನಾಯುಮಂಡಲಗಳು ದೇಹದ ಸೂಕ್ಷ್ಮ ಅಂಗಗಳು ಸಾಮಾನ್ಯಶಾಸ್ತ್ರ ಚಿಕಿತ್ಸೆಯಲ್ಲಿ ಸ್ವಲ್ಪ ಕೈತಪ್ಪಿದರೂ ರೋಗಿಯ ಮರಣ ನಿಶ್ಚಿತ. ಈ ಸಂದರ್ಭದಲ್ಲಿ ಲೇಸರ್ ಕಿರಣಗಳ ಸಹಾಯದಿಂದ ಯಾವುದೇ ಹಾನಿ ಆಗದಂತೆ ಸ್ನಾಯುಮಂಡಲದ, ಮಿದುಳಿನ ಸೂಕ್ಷ್ಮ ರೋಗಪೀಡಿತ ಸ್ಥಳಗಳ ಕಾಯಿಲೆಗಳನ್ನು ಗುಣಪಡಿಸಬಹುದು. ಮಿದುಳು ಹುಣ್ಣು ಮತ್ತು ಕ್ಯಾನ್ಸರ್ ಗಡ್ಡೆಯನ್ನು ಯಾವ ನೋವಿಲ್ಲದೇ
ಕತ್ತರಿಸಬಹುದು. ಕಣ್ಣಿನ ಚಿಕಿತ್ಸೆ ಮಾಡಿದಾಗ ರಟಿನಾವನ್ನು ಅದರ ಸ್ಥಾನದಲ್ಲಿರಿಸಲು ಲೀಸರ್‌ನಿಂದಷ್ಟೆ ಸಾಧ್ಯವೆಂದು ಖಚಿತವಾಗಿದೆ. ಮೂತ್ರಕೋಶದಲ್ಲಿನ ಕಲ್ಲುಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೇ ಲೇಸರ್ ಪ್ರಯೋಗದಿಂದ ಅದನ್ನು ಅಲ್ಲಿಯೇ ಕರಗಿಸಿ ಮೂತ್ರದ ಮೂಲಕ ಹೊರಹೋಗುವಂತೆ ಮಾಡಬಹುದು.

ಹೀಗೆ ಎಲ್ಲರಂಗಗಳಲ್ಲಿಯೂ ಯಶಸ್ವಿಯಾಗಿ ಪ್ರಯೋಗಿಸಲ್ಬಡುವ ಈ ಲೇಸರ್ ಮುಂದೊಂದು ದಿನ ವಿಜ್ಞಾನದ ಯಾವೊಂದು ಸಂತೋಧನೆಗೂ ಅಗತ್ಯವಾಗಬಹುದು ಮತ್ತು ಮನೆಮನೆಗಳ ಯಂತ್ರಗಳ ಅಂತರಂಗದಲ್ಲಿ ಈ ಲೇಸರ್ ಕುಳಿತು ಏನೆಲ್ಲ ಚಮತ್ಕಾರವನ್ನು ಮಾಡಬಹುದು.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...