Home / ಲೇಖನ / ವಿಜ್ಞಾನ / ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ಹಲ್ಲೇ ಮುಖಕ್ಕೆ ಭೂಷಣ. “ದಾಳಿಂಬೆಯ ಬೀಜದಂತೆ’ ಎಂದು ಹೊಗಳುವುದು ಸುಂದರವಾದ ಕ್ರಮಬದ್ದವಾದ ಹಲ್ಲುಗಳನ್ನು ನೋಡಿಯೆ. ಸಾಮಾನ್ಯವಾಗಿ ಕೆಲವರಿಗೆ ಹುಳಕಲ್ಲಿನಿಂದ ಹಲ್ಲು ಕೆಟ್ಟು ಹೋಗಬಹುದು ಅಥವಾ ಸ್ವಚ್ಛತೆ ಕಾಪಾಡದಿದ್ದರೆ ಕೊಳತು ಹೋಗಬಹುದು. ಆಗ ರಾತ್ರಿ ಇಡೀ ನಿದ್ದೆ ಬಾರದೇ ನೋವಿನಿಂದ ಪರಿತಪಿಸಬಹುದು.
ಕಪೋಲಗಳು ಊದಿಕೊಂಡು ಮುಖದ ಮುದ್ರೆಯೇ ಅಸಹ್ಯವಾಗಬಹುದು. ಇದಕ್ಕೆಲ್ಲಮದ್ದು ಎಂದರೆ ಹಲ್ಲುಕೀಳಿಸು- ವುದು. ಆಗಲೂ ಸಹ ವಸಡುಗಳಿಗೆ ಚುಚ್ಚುಮದ್ದು ಹಾಕಿ ಮರಗಟ್ಟಸಿ ಹಲ್ಲನ್ನು ಕೀಳಬೇಕಾಗುತ್ತದೆ. ಏನೇ ಮರಗಟ್ಟದ್ದರೂ ಇದೊಂದು ಯಮ ಶಿಕ್ಷೆಯೆ. ಅದರಲ್ಲೂ ಬೇರುಗಟ್ಟಿ ಇದ್ದರೆ ಕೀಳುವುದು ಬಹಳ ಹೊತ್ತಾಗಬಹುದು.

ಆದರೆ ಇತ್ತೀಚಿಗೆ ದಂತವೈದ್ಯ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ನೋವಿನಿಂದ ಪರಿತಪಿಸುವ, ಮುಖ ಊದಿಸಿಕೊಳ್ಳುವ ಸಂದರ್ಭಕ್ಕೆ ತಿಲಾಂಜಲಿಯನ್ನು ಇತ್ತೀಚಿನ ವಿಜ್ಞಾನಿಗಳು ಇಟ್ಟಿದ್ದಾರೆ. ಲೇಸರ್ ತಂತ್ರ ವಿಧಾನದಿಂದ ಸರ್ಜರಿಯ ಅಗತ್ಯವಿಲ್ಲದೆ ಕಡಿಮೆ ಎಂದರೆ 40 ಸೆಕೆಂಡಿನಿಂದ 3 ನಿಮಿಷದೊಳಗಾಗಿಯೇ ಲೇಸರ್ ಚಿಕಿತ್ಸೆಯಿಂದ ಗುಣಪಡಿಸಬಹುದೆಂದು ಹೇಳುತ್ತಾರೆ. ದಂತಗಳ ಚಿಕಿತ್ಸೆಗ ಲೇಸರ್ ತಂತ್ರವಿಧಾನ ಬಳಸುವು
ದರಿಂದ ಸೂಕ್ಷ್ಮವಾದ ವಸಡುಗಳಿಗೆ ಯಾವುದೇ ಅಪಾಯವಾಗಲೀ, ಗಾಯವಾಗಲೀ, ಆಗದೇ ವಾಸ್ತವ ಸ್ಲಿತಿಯ-
ಲ್ಲಿದ್ದಂತೆ ಇರಬಹುದು. ಈ ಲೇಸರ್ ಕಿರಣವು ಹಲ್ಲುಗಳ ಒಳಗಡೆಯ ವರೆಗೆ ಹೋಗಿ ಯಾವುದೇ ದಂತ ರೋಗವನ್ನು ನಿರ್ಮೂಲನೆ ಮಾಡುವ ಶಕ್ತಿಯನ್ನು ಹೊಂದಿದೆ. ಸಬ್‌ಮ್ಯೂಕಸ್ ಫೈಫ್ರೋಸಿಸ್ ರೋಗವು ಹೆಚ್ಚಾಗಿ ಪಾನ್‌ಮಸಾಲ, ತಂಬಾಕು, ಸಿಗರೇಟು ಸೇವನೆ, ಶರಾಬು, ಅತಿಯಾಗಿ ಯಾವುದೇ ಪದಾರ್ಥವನ್ಪು ಅಗಿದರೆ ಬಾಯಿಯ ಮೃದುವಾದ
(ಮಾಂಸ)ವು ಮೂಲಕ ಒರಟಾಗಿ, ಬಾಯಿಬಿಡಲಾಗುವುದೇ ಇಲ್ಲ. ಅಗಿಯುಲಾಗುವುದಿಲ್ಲ. ಹಿಂದೆ ಅಪರೇಷನ್ ಮೂಲಕ ಮಾಡಿಸಿಕೊಂಡ ಚಿಕಿತ್ಸೆಗೆ ಆರು ತಿಂಗಳು ಸಮಯ ಹಿಡಿದರೆ ಈಗ ಈ ಲೇಸರ್ ಕಿರಣ ಚಿಕಿತ್ಸೆಯಿಂದ 15 ರಿಂದ 2 ತಿಂಗಳೊಳಗಾಗಿ ವಾಸಿಯಾಗುತ್ತದೆ. ಪೂರ್ತಿ ಚಿಕಿತ್ಸೆ ನೋವಿಲ್ಲದೇ ನಡೆಯುತ್ತದೆ ಇದರಂತೆ ಹಲ್ಲುಗಳಿಗೆ ತಣ್ಣನೆಯ ಅಥವಾ ಬಿಸಿ ಪದಾರ್ಥಗಳು ಸ್ಪರ್ಷಗೊಂಡಾಗ ಮೈ’ಝುಂ’ ಎಂದು ನೋವಾಗುವ ದಂತ ಚಿಕಿತ್ಸೆಯನ್ನು ಕೂಡ ಒಂದು ನಿಮಿಷದಲ್ಲಿ ಮಾಡಬಹುದು. ಹುಳಕಲ್ಲು ಆದರೆ “ರೊಟ್‌ಕೆನಾಲ್’ ಚಿಕಿತ್ಸೆಯ ಮೂಲಕ
ಸರಿಪಡಿಸಬಹುದು.
1) ವಸಡುಗಳಲ್ಲಿ ರಕ್ತ ಕೀವು ಬರುತ್ತಿದ್ದರೆ,
2) ಹಲ್ಲುಗಳು ಅಲ್ಲಾಡುತ್ತಿದ್ದರೆ,
3) ಹಲ್ಲುಗಳ ಸಮಾನಾಂತರ ಮೂಳೆ ಸಡಿಲವಾಗಿದ್ದರೆ,
4) ಬಾಯಿಯಲ್ಲಿ ಹುಣ್ಣುಗಳಾಗಿದ್ದರೆ,
5) ಬಾಯಿಯ ನರಗಳಲ್ಲಿ ಆಗುವ ಸೊಂಕಿನಿಂದ ಒಳಕೆನ್ನೆ, ಹಣೆ, ತುಟಿಗಳಿಗೆ ನೋವಾಗುತ್ತಿದ್ದರೆ,
6) ಬಾಯಿ ತೆರೆದಾಗ ಮತ್ತು ಮುಚ್ಚುವಾಗ ಶಬ್ದಬರುತ್ತಿದ್ದರೆ.

ಹೀಗೆ ಬಾಯಿ ಮತ್ತು ವಸಡು, ಹಲ್ಲುಗಳಿಗೆ ಅದ ಯಾವುದೇ ರೀತಿಯ ರೋಗವನ್ನು ನಿವಾರಿಸಲು ಲೇಸರ್‌ಕಿರಣ ಚಿಕಿತ್ಸೆ ತಂತ್ರ ಹೊಂದಿದ ವೈದ್ಯರು ಮೊದಲು ಹಲ್ಲುಗಳನ್ನು ಶುಭಗ್ರಗೊಳಿಸಿ ಆಯಾ ರೋಗಕೈ ತಕ್ಕಂತೆ ಲೇಸರ್ ಕಿರಣಗಳ ಪ್ರಯೋಗ ಮಾಡಿ ಗುಣಪಡಿಸುತ್ತಾರೆ. ಈ ಮೊದಲು ವಸಡಿನ ಆಪರೇಷನ್ ಅಥವಾ ಬಾಯಿ ಊದುವಿಕೆ,
ತಿಂಗಳುಗಟ್ಟಲೆ ನರಳುವಿಕೆ, ಸಾವಿರಾರು ರೂಪಾಯಿಗಳ ವ್ಯಯ ಈ ಯಾವ ಸಮಸ್ಯೆಗಳೂ ಇಲ್ಲದೆ ಲೇಸರ್ ತಂತ್ರವಿಧಾನದಿಂದ ನೋವಿಲ್ಲದೇ ದಂತ ರೋಗವನ್ನು ಪರಿಹರಿಸಿ ಕೊಳ್ಳಬಹುದು. ಲೇಸರ್ ಕಿರಣಗಳ ಪ್ರಭಾವವನ್ನು ಡಾ|| ಟೌನ್ಸ್ ತಿಳಿಸುತ್ತಾರೆ. ಈ ಅದ್ಭುತವಾದ ಲೇಸರ್ ಶಕ್ತಿಯನ್ನು 1958ರಲ್ಲಿ ಇವರು ಕಂಡು ಹಿಡಿದರೂ ದಂತ ವೈದ್ಯಕೀಯದಲ್ಲಿ ಇತ್ತೀಚಿಗೆ ಈ ಪ್ರಯೋಗಗಳಾಗುತ್ತಿರುವುದು ಭವಿಷ್ಯದ ದಂತ ರೋಗಿಗಳಿಗೆ
ಶುಭ ಸೂಚನೆಯಾಗಿದೆ.

*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...