Home / ಲೇಖನ / ವಿಜ್ಞಾನ / ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ದಂತ ಚಿಕತ್ಸೆಯಲ್ಲಿ ಹೊಸ ಹೆಜ್ಜೆ

ಹಲ್ಲೇ ಮುಖಕ್ಕೆ ಭೂಷಣ. “ದಾಳಿಂಬೆಯ ಬೀಜದಂತೆ’ ಎಂದು ಹೊಗಳುವುದು ಸುಂದರವಾದ ಕ್ರಮಬದ್ದವಾದ ಹಲ್ಲುಗಳನ್ನು ನೋಡಿಯೆ. ಸಾಮಾನ್ಯವಾಗಿ ಕೆಲವರಿಗೆ ಹುಳಕಲ್ಲಿನಿಂದ ಹಲ್ಲು ಕೆಟ್ಟು ಹೋಗಬಹುದು ಅಥವಾ ಸ್ವಚ್ಛತೆ ಕಾಪಾಡದಿದ್ದರೆ ಕೊಳತು ಹೋಗಬಹುದು. ಆಗ ರಾತ್ರಿ ಇಡೀ ನಿದ್ದೆ ಬಾರದೇ ನೋವಿನಿಂದ ಪರಿತಪಿಸಬಹುದು.
ಕಪೋಲಗಳು ಊದಿಕೊಂಡು ಮುಖದ ಮುದ್ರೆಯೇ ಅಸಹ್ಯವಾಗಬಹುದು. ಇದಕ್ಕೆಲ್ಲಮದ್ದು ಎಂದರೆ ಹಲ್ಲುಕೀಳಿಸು- ವುದು. ಆಗಲೂ ಸಹ ವಸಡುಗಳಿಗೆ ಚುಚ್ಚುಮದ್ದು ಹಾಕಿ ಮರಗಟ್ಟಸಿ ಹಲ್ಲನ್ನು ಕೀಳಬೇಕಾಗುತ್ತದೆ. ಏನೇ ಮರಗಟ್ಟದ್ದರೂ ಇದೊಂದು ಯಮ ಶಿಕ್ಷೆಯೆ. ಅದರಲ್ಲೂ ಬೇರುಗಟ್ಟಿ ಇದ್ದರೆ ಕೀಳುವುದು ಬಹಳ ಹೊತ್ತಾಗಬಹುದು.

ಆದರೆ ಇತ್ತೀಚಿಗೆ ದಂತವೈದ್ಯ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ನೋವಿನಿಂದ ಪರಿತಪಿಸುವ, ಮುಖ ಊದಿಸಿಕೊಳ್ಳುವ ಸಂದರ್ಭಕ್ಕೆ ತಿಲಾಂಜಲಿಯನ್ನು ಇತ್ತೀಚಿನ ವಿಜ್ಞಾನಿಗಳು ಇಟ್ಟಿದ್ದಾರೆ. ಲೇಸರ್ ತಂತ್ರ ವಿಧಾನದಿಂದ ಸರ್ಜರಿಯ ಅಗತ್ಯವಿಲ್ಲದೆ ಕಡಿಮೆ ಎಂದರೆ 40 ಸೆಕೆಂಡಿನಿಂದ 3 ನಿಮಿಷದೊಳಗಾಗಿಯೇ ಲೇಸರ್ ಚಿಕಿತ್ಸೆಯಿಂದ ಗುಣಪಡಿಸಬಹುದೆಂದು ಹೇಳುತ್ತಾರೆ. ದಂತಗಳ ಚಿಕಿತ್ಸೆಗ ಲೇಸರ್ ತಂತ್ರವಿಧಾನ ಬಳಸುವು
ದರಿಂದ ಸೂಕ್ಷ್ಮವಾದ ವಸಡುಗಳಿಗೆ ಯಾವುದೇ ಅಪಾಯವಾಗಲೀ, ಗಾಯವಾಗಲೀ, ಆಗದೇ ವಾಸ್ತವ ಸ್ಲಿತಿಯ-
ಲ್ಲಿದ್ದಂತೆ ಇರಬಹುದು. ಈ ಲೇಸರ್ ಕಿರಣವು ಹಲ್ಲುಗಳ ಒಳಗಡೆಯ ವರೆಗೆ ಹೋಗಿ ಯಾವುದೇ ದಂತ ರೋಗವನ್ನು ನಿರ್ಮೂಲನೆ ಮಾಡುವ ಶಕ್ತಿಯನ್ನು ಹೊಂದಿದೆ. ಸಬ್‌ಮ್ಯೂಕಸ್ ಫೈಫ್ರೋಸಿಸ್ ರೋಗವು ಹೆಚ್ಚಾಗಿ ಪಾನ್‌ಮಸಾಲ, ತಂಬಾಕು, ಸಿಗರೇಟು ಸೇವನೆ, ಶರಾಬು, ಅತಿಯಾಗಿ ಯಾವುದೇ ಪದಾರ್ಥವನ್ಪು ಅಗಿದರೆ ಬಾಯಿಯ ಮೃದುವಾದ
(ಮಾಂಸ)ವು ಮೂಲಕ ಒರಟಾಗಿ, ಬಾಯಿಬಿಡಲಾಗುವುದೇ ಇಲ್ಲ. ಅಗಿಯುಲಾಗುವುದಿಲ್ಲ. ಹಿಂದೆ ಅಪರೇಷನ್ ಮೂಲಕ ಮಾಡಿಸಿಕೊಂಡ ಚಿಕಿತ್ಸೆಗೆ ಆರು ತಿಂಗಳು ಸಮಯ ಹಿಡಿದರೆ ಈಗ ಈ ಲೇಸರ್ ಕಿರಣ ಚಿಕಿತ್ಸೆಯಿಂದ 15 ರಿಂದ 2 ತಿಂಗಳೊಳಗಾಗಿ ವಾಸಿಯಾಗುತ್ತದೆ. ಪೂರ್ತಿ ಚಿಕಿತ್ಸೆ ನೋವಿಲ್ಲದೇ ನಡೆಯುತ್ತದೆ ಇದರಂತೆ ಹಲ್ಲುಗಳಿಗೆ ತಣ್ಣನೆಯ ಅಥವಾ ಬಿಸಿ ಪದಾರ್ಥಗಳು ಸ್ಪರ್ಷಗೊಂಡಾಗ ಮೈ’ಝುಂ’ ಎಂದು ನೋವಾಗುವ ದಂತ ಚಿಕಿತ್ಸೆಯನ್ನು ಕೂಡ ಒಂದು ನಿಮಿಷದಲ್ಲಿ ಮಾಡಬಹುದು. ಹುಳಕಲ್ಲು ಆದರೆ “ರೊಟ್‌ಕೆನಾಲ್’ ಚಿಕಿತ್ಸೆಯ ಮೂಲಕ
ಸರಿಪಡಿಸಬಹುದು.
1) ವಸಡುಗಳಲ್ಲಿ ರಕ್ತ ಕೀವು ಬರುತ್ತಿದ್ದರೆ,
2) ಹಲ್ಲುಗಳು ಅಲ್ಲಾಡುತ್ತಿದ್ದರೆ,
3) ಹಲ್ಲುಗಳ ಸಮಾನಾಂತರ ಮೂಳೆ ಸಡಿಲವಾಗಿದ್ದರೆ,
4) ಬಾಯಿಯಲ್ಲಿ ಹುಣ್ಣುಗಳಾಗಿದ್ದರೆ,
5) ಬಾಯಿಯ ನರಗಳಲ್ಲಿ ಆಗುವ ಸೊಂಕಿನಿಂದ ಒಳಕೆನ್ನೆ, ಹಣೆ, ತುಟಿಗಳಿಗೆ ನೋವಾಗುತ್ತಿದ್ದರೆ,
6) ಬಾಯಿ ತೆರೆದಾಗ ಮತ್ತು ಮುಚ್ಚುವಾಗ ಶಬ್ದಬರುತ್ತಿದ್ದರೆ.

ಹೀಗೆ ಬಾಯಿ ಮತ್ತು ವಸಡು, ಹಲ್ಲುಗಳಿಗೆ ಅದ ಯಾವುದೇ ರೀತಿಯ ರೋಗವನ್ನು ನಿವಾರಿಸಲು ಲೇಸರ್‌ಕಿರಣ ಚಿಕಿತ್ಸೆ ತಂತ್ರ ಹೊಂದಿದ ವೈದ್ಯರು ಮೊದಲು ಹಲ್ಲುಗಳನ್ನು ಶುಭಗ್ರಗೊಳಿಸಿ ಆಯಾ ರೋಗಕೈ ತಕ್ಕಂತೆ ಲೇಸರ್ ಕಿರಣಗಳ ಪ್ರಯೋಗ ಮಾಡಿ ಗುಣಪಡಿಸುತ್ತಾರೆ. ಈ ಮೊದಲು ವಸಡಿನ ಆಪರೇಷನ್ ಅಥವಾ ಬಾಯಿ ಊದುವಿಕೆ,
ತಿಂಗಳುಗಟ್ಟಲೆ ನರಳುವಿಕೆ, ಸಾವಿರಾರು ರೂಪಾಯಿಗಳ ವ್ಯಯ ಈ ಯಾವ ಸಮಸ್ಯೆಗಳೂ ಇಲ್ಲದೆ ಲೇಸರ್ ತಂತ್ರವಿಧಾನದಿಂದ ನೋವಿಲ್ಲದೇ ದಂತ ರೋಗವನ್ನು ಪರಿಹರಿಸಿ ಕೊಳ್ಳಬಹುದು. ಲೇಸರ್ ಕಿರಣಗಳ ಪ್ರಭಾವವನ್ನು ಡಾ|| ಟೌನ್ಸ್ ತಿಳಿಸುತ್ತಾರೆ. ಈ ಅದ್ಭುತವಾದ ಲೇಸರ್ ಶಕ್ತಿಯನ್ನು 1958ರಲ್ಲಿ ಇವರು ಕಂಡು ಹಿಡಿದರೂ ದಂತ ವೈದ್ಯಕೀಯದಲ್ಲಿ ಇತ್ತೀಚಿಗೆ ಈ ಪ್ರಯೋಗಗಳಾಗುತ್ತಿರುವುದು ಭವಿಷ್ಯದ ದಂತ ರೋಗಿಗಳಿಗೆ
ಶುಭ ಸೂಚನೆಯಾಗಿದೆ.

*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...