Home / ಲೇಖನ / ವಿಜ್ಞಾನ / ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಜಗತ್ತಿನಲ್ಲಿ ಅಸಂಖ್ಯ ಜೀವಕೋಶಗಳಿವೆ. ಪ್ರಾಣಿ, ಪಕ್ಷಿ ಕೀಟ, ಉರುಗಜಾತಿಯ ಕಸೇರಕುಗಳು, ಈ ಭೂಮಿಯ ಮೇಲೆ ಹುಟ್ಟಿ ವರ್ಣವೈವಿಧ್ಯಮಯವಾಗಿ ಬದುಕುತ್ತಿವೆ. ಈ ಎಲ್ಲ ಜೀವಿಗಳಲ್ಲಿ ಅರಿವು ಹೊಂದಿದ, ಪಂಚೇಂದ್ರಿಯಗಳ ಸಾಕ್ಷಿಯುಳ್ಳ ಮಾನವನ ಉಗಮವು ೨ ದಶಲಕ್ಷ ವರ್ಷಗಳ ಹಿಂದೆ ಆಯಿತು ಮತ್ತು ಆಫ್ರಿಕಾ ಖಂಡವೇ ಈ ಮಾನವ ಜೀವಿಯ ಜನನ ಸ್ಥಳವಾಯಿತು! ಸುಮಾರು ೨೦೦೦ ದಶಲಕ್ಷ ವರ್ಷಗಳ ಹಿಂದೆ ಸಮುದ್ರದಲ್ಲಿ “ಸಣ್ಣ ಬ್ಯಾಕ್ಟೀರಿಯಾಗಳು ಕಾಣಿಸಿಕೊಂಡವು. ಇದೇ ಭೂಮಿಯ ಮೇಲೆ ಕಾಣಿಸಿಕೊಂಡು “ಪ್ರಥಮ ಜೀವಿಗಳು” ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಕಾಲಾನುಕ್ರಮದಲ್ಲಿ ನೆಲದಮೇಲೆ ಸಸ್ಯಗಳು, ಪಾಚಿಗಳೂ, ನೀರಿನಲ್ಲಿ ಹುಳುಗಳೂ ಮತ್ತು ಅಂಬಲಿ ಮೀನಿನಂತಹ ಜೀವಿಗಳೂ ಕಂಡು ಬಂದವು. ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುವುದರ ಮೂಲಕ “ಓಜೋನ್” ಪದರ ರಚನೆಯಾಯಿತು. ಈ ಪದರವು ಸೂರ್ಯನಿಂದ ಹೊರಹೊಮ್ಮಿದ ಅಪಾಯಕಾರಿ ಕಿರಣಗಳನ್ನು ಭೂಮಿಗೆ ತಲುಪದಂತೆ ತಡೆಯುವುದರ ಮೂಲಕ ಜೀವಿಗಳ ಏಳಿಗೆಗೆ ಅನುವು ಮಾಡಿಕೊಟ್ಟಿತು. ಸುಮಾರು ೪೫೦ ದಶಲಕ್ಷ ವರ್ಷಗಳ ಹಿಂದೆ ಜಲಾಂತರಾಳದಲ್ಲಿ ಚಿಪ್ಪನ್ನು ಹೊಂದಿದ “ಟ್ರೈಲೋಬೈಟ್ಸ್‌” ಎಂಬ ಪ್ರಾಣಿಗಳು ಹುಟ್ಟಿಕೊಂಡವು. ಮತ್ತೆ ದಶಲಕ್ಷ ವರ್ಷಗಳ ಹಿಂದೆ ನೀರಿನಲ್ಲಿ ಜೀವಿಗಳು ಅಭಿವೃದ್ಧಿ ಹೊಂದಿದವು. ಇದೇ ವೇಳೆ ನೀರಿನಲ್ಲಿ ಪ್ರಥಮ ಮೀನುಗಳು ಮತ್ತು ನೆಲದ ಮೇಲೆ ‘ಕುಕ್ ಸೋನಿಯಾ’ ಎಂಬ ನಿಜವಾದ ಅಧಿಕೃತ ಸಸ್ಯಗಳು ಹುಟ್ಟಿಕೊಂಡವು.

ಸುಮಾರು ೧೫೦ ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ‘ಡೈನೋಸಾರ್’ಗಳು ಕಾಣಿಸಿಕೊಂಡವು. ಈ ಪ್ರಾಣಿಗಳು ವಿವಿಧ ರೀತಿಯ ಸರಿಸೃಪಗಳನ್ನು ಮತ್ತು ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದ ‘ಟೇರೊಸಾಸರ್’ಗಳನ್ನು ಒಳಗೊಂಡಿದ್ದವು. ಹೆಚ್ಚಿನ ಡೈನೋಸಾಗಳು ಬೃಹದಾಕಾರದ ದೇಹದೊಂದಿಗೆ ಹಾವಿನಂತಹ ತೆಳುವಾದ ಕತ್ತು ಸಣ್ಣ ತಲೆಗಳನ್ನು ಹೊಂದಲಾರಂಭಿಸಿದವು ಸುಮಾರು ೬೫ ದಶಲಕ್ಷವರ್ಷಗಳ ಹಿಂದೆ ‘ಡೈನೋಸಾರ್’ ಅವನತಿ ಹೊಂದುವರೆಗೂ ಭೂಮಿಯ ಮೇಲೆ ಪ್ರಾಣಿ ಮತ್ತು ಸಸ್ಯವರ್ಗಗಳೆರಡಲ್ಲೂ ಈ ಜೀವಿಗಳು ವಿಕಾಸ ಹೊಂದಿದವು. ಹೀಗೆ ಭೂಮಿಯ ಮೇಲೆ ಜೀವಿಗಳ ಜೀವವಿಕಾಸವಾದ
ಚರಿತ್ರೆ ವಿಜ್ಞಾನ ಜಗತ್ತಿನಲ್ಲಿ ಮೂಡಿಬಂದಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

 

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...