Home / ಲೇಖನ / ವಿಜ್ಞಾನ / ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಮಾನವ ಹುಟ್ಟಿ ೨ ದಶಲಕ್ಷ ವರ್ಷಗಳಾದವು

ಈ ಜಗತ್ತಿನಲ್ಲಿ ಅಸಂಖ್ಯ ಜೀವಕೋಶಗಳಿವೆ. ಪ್ರಾಣಿ, ಪಕ್ಷಿ ಕೀಟ, ಉರುಗಜಾತಿಯ ಕಸೇರಕುಗಳು, ಈ ಭೂಮಿಯ ಮೇಲೆ ಹುಟ್ಟಿ ವರ್ಣವೈವಿಧ್ಯಮಯವಾಗಿ ಬದುಕುತ್ತಿವೆ. ಈ ಎಲ್ಲ ಜೀವಿಗಳಲ್ಲಿ ಅರಿವು ಹೊಂದಿದ, ಪಂಚೇಂದ್ರಿಯಗಳ ಸಾಕ್ಷಿಯುಳ್ಳ ಮಾನವನ ಉಗಮವು ೨ ದಶಲಕ್ಷ ವರ್ಷಗಳ ಹಿಂದೆ ಆಯಿತು ಮತ್ತು ಆಫ್ರಿಕಾ ಖಂಡವೇ ಈ ಮಾನವ ಜೀವಿಯ ಜನನ ಸ್ಥಳವಾಯಿತು! ಸುಮಾರು ೨೦೦೦ ದಶಲಕ್ಷ ವರ್ಷಗಳ ಹಿಂದೆ ಸಮುದ್ರದಲ್ಲಿ “ಸಣ್ಣ ಬ್ಯಾಕ್ಟೀರಿಯಾಗಳು ಕಾಣಿಸಿಕೊಂಡವು. ಇದೇ ಭೂಮಿಯ ಮೇಲೆ ಕಾಣಿಸಿಕೊಂಡು “ಪ್ರಥಮ ಜೀವಿಗಳು” ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಕಾಲಾನುಕ್ರಮದಲ್ಲಿ ನೆಲದಮೇಲೆ ಸಸ್ಯಗಳು, ಪಾಚಿಗಳೂ, ನೀರಿನಲ್ಲಿ ಹುಳುಗಳೂ ಮತ್ತು ಅಂಬಲಿ ಮೀನಿನಂತಹ ಜೀವಿಗಳೂ ಕಂಡು ಬಂದವು. ಸಸ್ಯಗಳು ಆಮ್ಲಜನಕವನ್ನು ಬಿಡುಗಡೆ ಮಾಡುವುದರ ಮೂಲಕ “ಓಜೋನ್” ಪದರ ರಚನೆಯಾಯಿತು. ಈ ಪದರವು ಸೂರ್ಯನಿಂದ ಹೊರಹೊಮ್ಮಿದ ಅಪಾಯಕಾರಿ ಕಿರಣಗಳನ್ನು ಭೂಮಿಗೆ ತಲುಪದಂತೆ ತಡೆಯುವುದರ ಮೂಲಕ ಜೀವಿಗಳ ಏಳಿಗೆಗೆ ಅನುವು ಮಾಡಿಕೊಟ್ಟಿತು. ಸುಮಾರು ೪೫೦ ದಶಲಕ್ಷ ವರ್ಷಗಳ ಹಿಂದೆ ಜಲಾಂತರಾಳದಲ್ಲಿ ಚಿಪ್ಪನ್ನು ಹೊಂದಿದ “ಟ್ರೈಲೋಬೈಟ್ಸ್‌” ಎಂಬ ಪ್ರಾಣಿಗಳು ಹುಟ್ಟಿಕೊಂಡವು. ಮತ್ತೆ ದಶಲಕ್ಷ ವರ್ಷಗಳ ಹಿಂದೆ ನೀರಿನಲ್ಲಿ ಜೀವಿಗಳು ಅಭಿವೃದ್ಧಿ ಹೊಂದಿದವು. ಇದೇ ವೇಳೆ ನೀರಿನಲ್ಲಿ ಪ್ರಥಮ ಮೀನುಗಳು ಮತ್ತು ನೆಲದ ಮೇಲೆ ‘ಕುಕ್ ಸೋನಿಯಾ’ ಎಂಬ ನಿಜವಾದ ಅಧಿಕೃತ ಸಸ್ಯಗಳು ಹುಟ್ಟಿಕೊಂಡವು.

ಸುಮಾರು ೧೫೦ ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ‘ಡೈನೋಸಾರ್’ಗಳು ಕಾಣಿಸಿಕೊಂಡವು. ಈ ಪ್ರಾಣಿಗಳು ವಿವಿಧ ರೀತಿಯ ಸರಿಸೃಪಗಳನ್ನು ಮತ್ತು ಹಾರಬಲ್ಲ ಸಾಮರ್ಥ್ಯವನ್ನು ಹೊಂದಿದ ‘ಟೇರೊಸಾಸರ್’ಗಳನ್ನು ಒಳಗೊಂಡಿದ್ದವು. ಹೆಚ್ಚಿನ ಡೈನೋಸಾಗಳು ಬೃಹದಾಕಾರದ ದೇಹದೊಂದಿಗೆ ಹಾವಿನಂತಹ ತೆಳುವಾದ ಕತ್ತು ಸಣ್ಣ ತಲೆಗಳನ್ನು ಹೊಂದಲಾರಂಭಿಸಿದವು ಸುಮಾರು ೬೫ ದಶಲಕ್ಷವರ್ಷಗಳ ಹಿಂದೆ ‘ಡೈನೋಸಾರ್’ ಅವನತಿ ಹೊಂದುವರೆಗೂ ಭೂಮಿಯ ಮೇಲೆ ಪ್ರಾಣಿ ಮತ್ತು ಸಸ್ಯವರ್ಗಗಳೆರಡಲ್ಲೂ ಈ ಜೀವಿಗಳು ವಿಕಾಸ ಹೊಂದಿದವು. ಹೀಗೆ ಭೂಮಿಯ ಮೇಲೆ ಜೀವಿಗಳ ಜೀವವಿಕಾಸವಾದ
ಚರಿತ್ರೆ ವಿಜ್ಞಾನ ಜಗತ್ತಿನಲ್ಲಿ ಮೂಡಿಬಂದಿದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...