Home / ಕವನ / ಕವಿತೆ / ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ
ನೆಲೆ ನಿಂತು ಜೀವಗಳ ಕಾದವಳೆ ||

ಕಂದಗಳ ಕಾದವಳೆ
ಜೀವಿನ ಮರದವಳೆ
ಕೇಳಿದ್ದ ಕೊಟ್ಟವಳೆ
ಬೇಡಿದ್ದ ಬಿಟ್ಟವಳೆ ||

ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ
ಬೇವ ತಿಂದು ಬೇವನುಟ್ಟಮ್ಮ
ಸಿಡುಬ ನುಂಗಿ ಕಂದಗಳ ಕಾದವಳೆ
ಪ್ಲೇಗಮ್ಮನನ್ನು ಬಿಡದೆ ನುಂಗಿದವಳೆ ||

ಜೋಗಿಯ ಪ್ರಸಂಗ

ಮೇಳ:     ತಾಯೆ ನೀ ಯಾರೆ
ಅಂತರ್‍ಗಟ್ಟೆ ಮಾರಿ ||

ಕೇಡು ಬಯಸಿದವಗೆ
ಕೇಡು ನೀಡಿದೆ ಕೊಡುಗೆ
ಒಳಿತು ಬಯಸಿದವಗೆ
ಕೊಟ್ಟೆ ಬಯಸಿದ ಹಾಗೆ ||

ನಿಂತಲ್ಲೆ ನಿಂತವಳೆ
ಕುಂತಲ್ಲೆ ಕುಂತವಳೆ
ಬ್ರಹ್ಮಾಂಡ ತಿಳಿದವಳೆ
ಸಕಲವಾ ನಡೆದವಳೆ

ರೂಪದೊಳು ರೂಪವಿಲ್ಲ
ಕಾಯದೊಳು ಕಾಯವಿಲ್ಲ
ಇಲ್ಲವೆಂದರೆ ಐದೀ
ಐದಿಯೆಂದರೆ ಇಲ್ಲ ||

ಹೆಬ್ಬೂರು ನಿಗರು ಶಿಖೆಯ ಗಣಂಗು ಪ್ರಸಂಗ

ಮೇಳ:    ಮಾಟಗಾತಿ ಮಾಯಗಾತಿ
ಏನೆ ನಿನ್ನ ಕೀರುತಿ ||

ಮಾಯಾವ ಗೆದ್ದವಳೆ
ಗೆಲುವನ್ನೆ ಹೊದ್ದವಳೆ
ಮೀಯ ಬಂದವರಿಗೆಲ್ಲ
ಹಿಂಗು ತಿನ್ನಿಸಿದವಳೆ ||

ಗರಿ ನಿರಿಗೆ ಸೆರಗ ತಾಯಿ
ಸೋಜಿಗವೆ ಮಹಾಮಾಯಿ
ಪಿಂಡಾಂಡ ಬ್ರಹ್ಮಾಂಡವೆಲ್ಲ
ನಿನ್ನ ಸೀರೆಯಾಯಿತಲ್ಲ ||

ತ್ರಿಮೂರ್ತಿಗಳ ತ್ರಿಶೂಲ ಮಾಡಿ
ದಿಕ್ಕು ದೆಸೆನೆಲ್ಲ ಪಟ್ಟಣ ಮಾಡಿ
ಅಂತರದ ನಿನ್ನ ಕಟ್ಟೆಯ ಒಳಗೆ
ಜೀವ ಕಾಯುವ ಕಾಯಕದೊಳಗೆ ||

ಮೇಳ:    ಕಿಲಗುಡವ ಹಸಿಗೂಸ
ನುಂಗೀದನಲ್ಲ
ಕೂಸಾದ ಅಮ್ಮನ್ನ
ನುಂಗೀದನಲ್ಲ ||

ಹೊಟ್ಟೇಲಿಂದ ತಾಯಿ
ಬಿಳಲಾದಳಲ್ಲ
ಬೆಳಬೆಳೆದು ಮಾಯಾವಿ
ಮರವಾದಳಲ್ಲ ||

ಕಂಚಿ ವೀರನ ಪ್ರಸಂಗ

ಮೇಳ:     ಕಂಚಿಯ ವೀರನೊಬ್ಬ
ಅಂತರಗಟ್ಟೆವ್ವನ ಸುದ್ದಿಕೇಳಿ
ಗೆಲ್ಲುತ್ತೇನಂತ ಬಂದಾನೆ
ತಂದನ್ನಾ ತಾನ ||

ವೀರಾನ ವೇಸ ಧರಿಸಿ
ಬರುತಾನೆ ಕಂಚಿ ಕಡಿಯಿಂದ
ತಂದನ್ನಾ ತಾನ ||

ಮೇಳ :    ಅವ್ವಾ ತಾಯೆ
ಅಂತರಗಟ್ಟೆವ್ವ ||

ಕಾಯಿ ಹಣ್ಣು ಮಾಡಿದವಳೆ
ಕಲ್ಲು ನೀರು ಮಾಡಿದವಳೆ
ಬೀಜ ವೃಕ್ಷ ಮಾಡಿದವಳೆ ||

ಮೂರು ಲೋಕ ಬ್ರಹ್ಮಾಂಡವನೆ
ಸೀರೆ ಮಾಡಿ ಸುತ್ತಿ ನೆರಿಗೇಲಿ
ನೆಲದ ಕಂದಗಳ ಕಾದವಳೆ ||

ತಂದನ್ನೊ ತಾನೊ
ತಾನಂದಾನೊ ತಾನೊ ||

ಬಾಳ ಹಸನು ಮಾಡಲು ಕುಂತು
ಕಂದಗಳಿಗೆ ಜೀವ ಹಿಡಿದು ಕುಂತು
ಜಗದ ಜುಟ್ಟ ನಡುಗಿಸಿದವಳೆ
ಬಂದ ಮಕ್ಕಳನ್ನೆಲ್ಲ ಕಾಪಾಡಿದವಳೆ ||

ಹಂಸದ ಮೇಲಿನ ಪದ

ಹುಡುಕಿ ಬಂದಾ ಹಂಸೆ
ಎತ್ತ ಹಾರಿತು ನಂಬಿಸಿ ||

ಸೆಳೆದಿತ್ತು ಕಣ್ಣಮಿಂಚ
ಹಾಕಿ ಪ್ರೀತಿಯ ಹೊಂಚ
ಕರೆದೊಯ್ಯಲು ಮುಗಿಲತ್ತ
ಕಾಣದೆ ಹೋಯಿತೆತ್ತ ||

ಅಮೃತವ ಕುಡಿದ ಹಂಸೆ
ಬಿಟ್ಟು ಮಾನವ ಹಿಂಸೆ
ನಲಿನಲಿದು ನರಕವ
ಮಾಡಿತಲ್ಲ ಸ್ವರ್ಗವ ||

ಏಕತಾರಿಯ ಕಾಯಿ
ಹಣ್ಣಾದಂತೆ ಕಾಯ
ತಂತಿ ನಾದದ ಇಂಪು
ತತ್ವ ಗ್ಯಾನದ ತಂಪು ||

*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...