Home / ಲೇಖನ / ಇತರೆ / ತಂಗಾಳಿ

ತಂಗಾಳಿ

ಹಳೆಯ ನಾಣ್ಣುಡಿಗಳೆಷ್ಟೋ ಈಗಿನ ಕಾಲದಲ್ಲಿ ಅನಾವಶ್ಯಕವಾಗಿವೆ.  ಈಗಿನ ಕಾಲಕ್ಕನುಸಾರವಾಗಿ ಅವುಗಳ ತಿದ್ದುಪಡೆಯ ಅವಶ್ಯವಿದೆ. ಉದಾ ಹರಣಾರ್ಥ, ಹಳ್ಳಿಗಳಲ್ಲಿಯ ವಯೋವೃದ್ದರು ಈಗಲೂ “ದೀಪದ ಕೆಳಗೆ ಬೆಳಕು ಇರುವದಿಲ್ಲ” ಎಂದು ಅನ್ನುತ್ತಾರೆ. ಆದರೆ ಈಗ ಇಲೆಕ್ಟ್ರಿಕ್ ದೀವಿಗೆ ಗಳ ಬೆಳಕು ದೀವಿಗೆಗಳ ಕೆಳಗೇ ಹೆಚ್ಚಾಗಿರುತ್ತದೆ!
***
ಕಾಲ ಬಂದಂತೆ ನಾವು ನಡೆಯಲೇಬೇಕು. “ಕಾಲ ಬಂದಂತೆ ನಡೆಯದಿದ್ದರೆ ಕಾಲು ಕೊಟ್ಟ ದೇವರು ಸಿಟ್ಟಾಗುವನು ” ಎಂದು ಶ್ರೀರಂಗರು ತಮ್ಮದೊಂದು ನಾಟಕದಲ್ಲಿ ಬರೆದಿದ್ದಾರೆ !
  * * *
“ಮಾತಿಗೆ ಮೊದಲು ಗಾದಿ, ಊಟಕ್ಕೆ ಮೊದಲು ಉಪ್ಪಿನಕಾಯಿ” ಎಂಬುದು ಬೇರೊಂದು ಹಳೆಯ ಗಾದಿಯ ಮಾತು. ಈಗಿನ ಕಾಲದಲ್ಲಿ ಇದರ ತಿದ್ದುಪಡೆಯ ಆವಶ್ಯಕತೆಯು ಹೆಚ್ಚಾಗಿ ಕಾಣುತ್ತದೆ.
“ಮಾತಿಗೆ ಮೊದಲು ಖುರ್ಚಿ, ವರ್ತಮಾನ ಪತ್ರದಲ್ಲಿ ಮೊದಲು ವಿನೋದ” ಎಂಬದು ಈಗಿನ ಕಾಲಕ್ಕೆ ಹೆಚ್ಚು ಉಚಿತವಾಗಿದೆ. ಇಲ್ಲವಾದರೆ,  ಇಂಗ್ರೇಜಿ ವರ್ತಮಾನಪತ್ರಗಳಲ್ಲಿ Current Topics, Tete-a-tete, Tipsy cake, En Passant, By the way ಮೊದಲಾದ ‘ಕಾಲಮು’  ಗಳೇಕೆ ತಲೆದೋರುತ್ತಿದ್ದವು? ಕನ್ನಡ ಪತ್ರಗಳಲ್ಲಿ “ಖಂಡತುಂಡ ಮಾತು”,  “ತುಣುಕು ಮಿಣಕು”, “ಹುರಕು ಬರಕು?”, “ಮಸಾಲೆಯ ದೋಸೆ”  ಮುಂತಾದ `ಕಾಲಮು’ಗಳೇಕೆ ಇರುತ್ತಿದ್ದವು?
* * *
ಆದ್ದರಿಂದ “ತಂಗಾಳಿ” ವಿನೋದದ ‘ಕಾಲಮು’ ಇರಬೇಕೆಂದು  ಯೋಜಿಸಿ ಪ್ರಾರಂಭಿಸಿದ್ದೇವೆ. ಆದರೆ ಪ್ರಾರಂಭಿಸುವ ಮೊದಲು ಅನೇಕ  ಸಾರೆ ವಿಚಾರ ಮಾಡಬೇಕಾಯಿತು. ಪ್ರತಿವಾರ ತಪ್ಪದೆ ಒಂದು ವಿನೋದ  ತರಂಗದ ‘ಕಾಲಮ್’ನ್ನು ವಾಚಕವೃಂದಕ್ಕೆ ಪೂರೈಸುವುದು ಸಾಮಾನ್ಯ  ಮಾತಲ್ಲ. ಓದಿ ನಗುವದು ಸುಲಭ ! ಬರೆದು ನಗೆಸುವದು ಕಠಿಣ !!   ವಾಚಕರು ರಸಿಕರೆಂಬ ಭಾವನೆಯಿಂದಲೇ ನಾವು ಮುಂದೆ ಸಾಗುತ್ತೇವೆ. ಅಂದರೇನೆ ಈ ‘ಕಾಲಮಿ’ನಿಂದ ವಿಶೇಷ ವಿನೋದವು ದೊರೆಯುವದು, ಅನೇಕ ಸಾರೆ ಅನೇಕ ವಿಷಯಗಳ ಮೇಲೆ ಬರೆಯಬೇಕಾಗುತ್ತದೆ.  ಲೇಖಕರ ಉದ್ದೇಶವಿರದಿದ್ದರೂ, ಎಷ್ಟೋ ಸಾರೆ ಹಲಕೆಲವು ವಿಷಯಗಳು  ಹಲಕೆಲವರಿಗೆ ಅಸಮಾಧಾನವನ್ನು ಉಂಟುಮಾಡುವ ಸಂಭವವಿದೆ. ಆದರೆ  ಓದುಗರು ಸೇತುವಿನ ಕಡೆಗೆ ಲಕ್ಷ ಕೊಡಬೇಕೇ ಹೊರತು, ಅಕಸ್ಮಾತ್ತಾಗಿ  ಆ ವಿಡಂಬನೆಯಲ್ಲಿಯ ಕೊಂಕುತನವು ತಮ್ಮಲ್ಲಿಯ ವಿಶಿಷ್ಟ ಗುಣಕ್ಕೆ  ಹೊಂದಿಕೆಯಾಗುವದೆಂಬ ಕಾರಣದಿಂದ ಅರಸಿಕರಾಗಬಾರದು. ಉದಾ  ಹರಣಾರ್ಥ; ಜೀವನದ ವಿಷಯವಾಗಿ ಬರೆದೆವೆಂದು ಕಲ್ಪಿಸುವಾ. ಊರಿಗೆ  ಒಬ್ಬನೇಕೆ, ಅನೇಕ ಜನ ಜಿಪುಣರಿರುವದು ಸಾಮಾನ್ಯವಾದ ಮಾತು.  ಜೀನತನದ ವಿಷಯವನ್ನು ಓದಿದ ಕೂಡಲೆ ವಾರಪತ್ರಿಕೆಯ ಸಂಪಾದಕರಿಗೆ  “ನೀವು ನಿಮ್ಮ ಪತ್ರವನ್ನು ಇನ್ನು ಮೇಲೆ ಕಳಿಸಬೇಡಿರಿ?” ಎಂದು  ಮುಂತಾಗಿ ಪತ್ರ ಬರೆಯುವದು ಉಚಿತವಲ್ಲ! ಒಂದು ವೇಳೆ ಹೀಗೆ ಬರೆದರೆ  ಒಬ್ಬ ವರ್ಗಣಿದಾರನು ಕಡಿಮೆಯಾಗುವದರಿಂದ ಪತ್ರಿಕೆಗೆ ಬಡತನ ಬರುವ ದಿಲ್ಲ. “ಜೀನನು ಕಡೆಗೂ ಜೀನನೇ ! ವರ್ಗಣಿ ಹಣ ಉಳಿಸಲಿಕ್ಕೆ ಮಾರ್ಗ  ತೆಗೆದನು !!” ಎಂದು ಅಂದು, ನಕ್ಕು ಪತ್ರ ಕಳಿಸುವದನ್ನು ನಿಲ್ಲಿಸಬಹುದು;  ಈ ವಿಷಯ ಕೆಲವರ ಮುಂದೆ ಹೇಳಬಹುದು. ಬಹಳವಾದರೆ ಮರುವಾರ  ಇದೇ ಕಾಲಮಿನಲ್ಲಿ ಪ್ರಕಟಿಸಬಹುದು .
  * * *
ಜೀನತನದ ವಿಷಯವಾಗಿ ಬರೆಯುವಷ್ಟರಲ್ಲಿ ಒಂದು ಚಿಕ್ಕ ಕಥೆಯು ನೆನಪಾಯಿತು:
ಒಂದು ಊರಲ್ಲಿ ಒಬ್ಬ ಮಹಾ ಜೀನನಿದ್ದನು. ಆತ ವಯಸ್ಸಿಗೆ ಬಂದ ತನ್ನ ಮಗನ ಸಲುವಾಗಿ ಕನ್ನೆಯನ್ನು ಹುಡುಕಲು ಹೊರಟನು. ಹೋದ ಹೋದಲ್ಲೆಲ್ಲ ತನ್ನಂಥ ಜೀನರ ಮನೆತನವನ್ನೇ ಹುಡುಕುತಲಿದ್ದ. ಕಡೆಗೆ ಒಂದು ಊರಲ್ಲಿ ಒಬ್ಬ “ಪ್ರಖ್ಯಾತ” ಜೀನನ ಮನೆ ಸಿಕ್ಕಿತು. ಮಾತುಕತೆ  ಸುರುವಾದೊಡನೆ “ನೀವು ಎಷ್ಟು ಜೀನರಿರುವಿರಾ?” ಎಂದು ಆತ ನೇರವಾಗಿ ಕೇಳಿಬಿಟ್ಟ ! ಕೂಡಲೆ ೨ನೇ ಜೀನನು ಅಭಿಮಾನದಿಂದ ಉತ್ತರಕೊಟ್ಟ.  “ನಮ್ಮ ಜೀನತನದ ಕಲ್ಪನೆಯಾಗಬೇಕೇ ನಿಮಗೆ ? ನಮ್ಮ ಅಜ್ಜಿ ಮುತ್ತಜ್ಞರ ಕಾಲದಿಂದ ನಮ್ಮ ಮನೆಯಲ್ಲಿ ಒಂದು ರೊಟ್ಟಿ ಇದೆ. ಊಟದ ವೇಳೆಯಾದ ಕೂಡಲೆ, ನಾವು ಒಂದು ಡಬರಿಯ ತುಂಬ ನೀರು ತುಂಬಿ ಅದರಲ್ಲಿ ರೊಟ್ಟಿಯನ್ನು ಎದ್ದಿ, ಅದನ್ನು ಹಾಗೇ ತೆಗೆದಿಡುತ್ತೇವೆ; ಆ ನೀರನ್ನೇ  ಕುಡಿದು ಸುಖದಿಂದ ಜೀವಿಸುತ್ತೇವೆ!” ಆಗ ಮೊದಲನೇ ಜೀನನಿಗೆ ಅಸಮಾ ಧಾನವಾಯಿತು. ಆತನೆಂದ: “ಛೇ! ನೀವು ಸಾಕಷ್ಟು ಜೀನರಿಲ್ಲ. ನಿಮ್ಮ  ಮಗಳು ನನ್ನ ಸೊಸೆಯಾಗಿ ಬಂದರೆ ನನ್ನ ಮನೆ ಹಾಳು ಮಾಡಿಯಾಳು,  ನಮ್ಮನ್ನು ದಿವಾಳಿ ತೆಗೆಸಿಯಾಳು. ನಮ್ಮ ಮನೆಯಲ್ಲಿಯೂ ಒಂದು ರೊಟ್ಟಿ ಇದೆ. ಊಟದ ವೇಳೆಗೆ ಒಂದು ಡಬರಿಯಲ್ಲಿ ನೀರು ತಂದು ಅದರ ಮೇಲೆ ರೊಟ್ಟಿಯ ನೆರಳು ಬೀಳುವಂತೆ ದೂರದಲ್ಲಿ ರೊಟ್ಟಿಯನ್ನು ಹಿಡಿಯುತ್ತೇವೆ.  ಆ ಮೇಲೆ ರೊಟ್ಟಿಯನ್ನು ತೆಗೆದಿಟ್ಟು ಆ ನೀರನ್ನು ಕುಡಿಯುತ್ತೇವೆ!”
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...