Home / ಕವನ / ಕವಿತೆ / ರಸಾಯಣ

ರಸಾಯಣ

ತಾಯ ಗರ್‍ಭದ ಭ್ರೂಣ
ಅಲ್ಲಿಂದಲೇ ಶುರು ಪಯಣ!
ಚಕ್ರವ್ಯೂಹಕ್ಕೆ ಹೊಗುವ ದಾರಿ
ಆಲಿಸಿದ ಅರ್‍ಭಕ ಕೇಳಿಸಿಕೊಳ್ಳಲಿಲ್ಲ
ಹೊರಬರುವ ದಾರಿ!
ಮಾತೆ ಗರ್‍ಭದಿ ಜಾರಿ
ಹೊರಬರುವ ಪರಿ
ಎಲ್ಲಾ ಸರಿ!
ಇಂಚಿಂಚು ಬೆಳೆತ
ಅಲ್ಲಿ ಇಲ್ಲಿಯ ಸೆಳೆತ
ಬಾಲ್ಯಕ್ಕೆ ಮೊಳೆತ
ಕೌಮಾರ್‍ಯ, ಪ್ರೌಢತ್ವ ವಿಕಸಿತ!
ಬೆತ್ತಲೆ ಮಗು ಈಗೆತ್ತಲೋ!
ಆಹಾರ ಜೀರ್‍ಣ
ಶರೀರಕೆ ಪೋಷಣೆ ಪೂರ್‍ಣ!
ವಿಟಮಿನ್ನು ಪ್ರೋಟಿನ್ನು
ಜೀವ ಕೋಶಗಳ ಪೋಣಿಸಿದ ಮಾಲೆ
ಅಮೈನೋ ರಸಾಯನ
ಬಾಡದೆ ಇರುವದೆ?
ಮತ್ತೆ ಅರಳುವ ಜಾಡು
ತಡಕಾಡು!
ಸಹಸ್ರಾರು ಲಕ್ಷ ವೀರ್‍ಯಾಣು
ಚಿಮ್ಮಿದರೂ
ಜೀವನ ಚಿಲುಮೆ ಜಿಗಿಯಲು
ಒಂದೇ ಸಫಲ!
ಉಳಿದವು ಆತುಮಗಳಾಗಲು
ಕಾಯಬೇಕು
ಮತ್ತೆ ಹುಟ್ಟಲು
ಮೊದಲು ಸಾಯಬೇಕು!

ಭಾಗ – ೨

ಮೊನ್ನೆ ಚಿರಿಡಿಗೆದ್ದದ್ದು
ಸುಮ್ಮನೆ ಅಲ್ಲ!
ಕಾರಣ ಅದಕೆ
ಹಾರ್‍ಮೋನುಗಳ ಅಲ್ಪ ಉತ್ಪತ್ತಿ!
ಎಚ್ಚರ ತಪ್ಪಿ ಬಿದ್ದಿದ್ದಕ್ಕೆ
ಕಡಿಮೆ ಸಕ್ಕರೆ ಪ್ರಮಾಣ ಕಾರಣ!
ರಸವೆ ಜನನ
ವಿರಸ ಮರಣ
ರಸಾಯನವೇ ಜೀವನ
ಇಲ್ಲವೆ ಇದರಿಂದ ಪಲಾಯನ!
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...