Home / ಕವನ / ಕವಿತೆ / ಪ್ರತೀಹಾರಿ

ಪ್ರತೀಹಾರಿ

ಅರಸನಾಣತಿಯಂತೆ ಹಳುವಿನಲಿಳಿದು ಮಲೆಗಳನೇರಿ,
ಹೊರಟು ನಡೆದನು, ಪ್ರತೀಹಾರಿ! ಆಜ್ಞಾಧಾರಕ;
ಸಂಧ್ಯಾ ಸಮೀರಣದಿ, ತುಂಬುಬಯಲಲಿ ಹೊರಟು,
ಝುರಿನೀರು ತಿಳಿಹೊಳೆಯ ದಟ್ಟಡವಿ ಪಾತ್ರದಲಿ;
ನಡೆದು ಮರಳಿದ ಹಾದಿ ಪೂರ್ವಪರಿವಿಡಿದು.
ಅಲೆದಲೆದು ಬಸವಳಿದು ಕತ್ತಲೆಯಕೂಟದಲಿ,
ನೋಡಿ ಬೆದರಿದ ಮಿಂಚು ಹೊಳೆಹರಿದುದನು ಕಂಡು;
ಆಜ್ಞೆ ಹೊರೆಹೊತ್ತು, ಅರಸನಾಣತಿಗೆ ಒಳಪಟ್ಟು;
ಮಿಂಚಿನಲಿ ನಡೆದು ಸವೆದನು ಹಾದಿ ಮುಬ್ಬಿನಲಿ,
ಸಣ್ಣದನಿ ಕಹಳೆ, ಕಾನನದ ನೀರವದಿ ಕೇಳಿಬಂದಿತು ಒಮ್ಮೆ;
ನಡುವೆ ಪ್ರವಾಸಿಗನ ಎಚ್ಚರಿಸಿ, ಬೆದರಿಸಿತು ಕೊನೆಗೆ;
ಗುಡುಗು ಸಿಡಿಲುಗಳು ಮುಗಿಲಿನಲಿ ಗಜರುವ ತೆರದಿ,
ಕಾನನದ ನೀರವವ ಒಡೆದು ದನಿಗೂಡಿಸಿತು ಕಹಳೆ;
ಹೊರಳಿ ಭರದಿ ಸಾಗಿದನವನು, ಅತಿದೂರ ನೇರದಲಿ
ಕಿರುದೀಪ ಅಡವಿಯಲಿ ಮಿನುಗುತಿದುದನು ಕಂಡು;
ಹಚ್ಚಹಳುವಿನಲಿ, ಗೂಢಕಾನನದ ಕತ್ತಲಲಿ;
ಕಿರುದೀಪಕಿರಣ, ಹಾದಿಗನ ಜತೆಯಾಯ್ತು;
ಇಮ್ಮಡಿಸಿ, ಮುನ್ನಡೆದು; ದೀರ್ಘಹೆಜ್ಜೆಯಲಿ;
ದುಮ್ಮಿಕ್ಕಿ, ಮೌನದಲಿ ಮರೆಯಾದನವನು;
ಪ್ರತೀಹಾರಿ! ದಿಗ್ವಾರ್ತೆ ಠಾಣೆಯಲಿ ಘೋಷಿಸಲು ಅಂದು.
*****

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...