Home / ಕವನ / ಕವಿತೆ / ದೀಪಾಳಿಯ ಕೋಟೆಯಾಟವು

ದೀಪಾಳಿಯ ಕೋಟೆಯಾಟವು

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |
ಒಂದು ಸುತ್ತಿನ ಕೋಟಿ, ಅದರೊಳಗೊಂದು ಚಂದದ ಬಸವ || ೧ ||

ಬಸವನು ಸ್ವರ್ಗದೊಳೂ ಬೆನ್ನೊಳು ಪರಶಿವನನು ಹೊರುವಾ |
ಬಸವನಮೇಲ್ಹತ್ತಿ, ಪರಶಿವಮೂಜಗವನು ಪೊರೆವಾ || ೨ ||

ಪರಶಿವನಾಜ್ಞೆಯಲೀ, ಬಸವನು ಜನಿಸಿದ ಭೂಮಿಯಲಿ |
ಪರಶಿವನಾಜ್ಞೆಯನೂ, ಬಸವನು ಬೀರಿದ ಭೂಮಿಯಲಿ || ೩ ||

ಬಸವನು ಮಾದರಸ, ಮನೆಯೊಳು ಜನಿಸಿದಮಗನಾಗಿ |
ಬಸವನು ತಾಪೊರೆದಾ, ಪತಿತರ ಪಾವನ ಮಾಡುತಲೀ || ೪ ||

ಬಸವನು ಜನಿವಾರ, ಬಿಸುಟುತೆ ಜಾತಿಯ ಗೂಡಿಸಿದ |
ಬಸವನ ದೆಯೆದಿಂದೇ, ಭಾರತ ಜನಗೂಡಿತುವೊಂದೇ || ೫ ||

ಋಷಿವರ ಬಸವಂಣಾ, ಸಂಗಮಕ್ಷೇತ್ರದಿತಪಿಸುತ್ತೇ |
ಕೃಷಿವಲರುದ್ಧಾರ, ಮಾಡಿದ ಬಸವಜನೋದ್ದಾರಾ || ೬ ||

ಬಸವನು ಭಕುತಿಯಲಿ, ಸಂಗನನರ್ಚಿಸಿ ನಿತ್ಯದಲಿ |
ಎಸೆದನು ಭೂಮಿಯಲಿ, ಭಕ್ತರಮಾಲಿಕೆ ಪದಕದಲಿ || ೭||

ಬಸವನು ತಾಹೊರಟಾ, ಮಂತ್ರಿಯ ಬಳದೇವನ ಮನೆಗೆ |
ಬಸವನ ಮೆಚ್ಚುತಲಿ, ಮಗಳನುಯಿತ್ತನು ಬಳದೇವಾ || ೮ ||

ಬಸವನ ಚಾತುರ್ಯ, ಶೆಳೆಯಿತು ಮನವನು ಬಿಜ್ಜಳನ |
ಬಸವನ ನೇಮಿಸಿದಾ, ಮಂತ್ರಿಯತಾಣದಿ ಬಿಜ್ಜಳನೂ || ೯||

ಬಸವನ ದಯದಿಂದೇ, ಧಾವಿಸಿ ಬಂದುದು ಶರಣಜನಾ |
ಬಸವನ ದರುಶನದೀ, ಹೊಂದಿತು ಸಂತಸ ಸೌಖ್ಯಗಳಾ || ೧೦ ||

ಬಸವನ ಪರಿಕಿಸಲೂ ಹೊರಟನು ಅಲ್ಲಮಪ್ರಭು ತಾನೂ |
ಬಸವನ ನೋಡುತಲಿ, ತುಂಬಿತು ಹರುಷವು ಅವನಲ್ಲೀ || ೧೧ ||

ಊರೂರಿಗೆ ಬಸವಾ, ಕಟ್ಟಿದ ಮಠಗಳನೊಂದೊಂದೂ |
ಬೇರೂರಿದ ಹಳೆಯ, ದೋಷವನೋಡಿಸಿದನು ಬಸವಾ || ೧೨ ||

ಮಠದೊಳಗಯ್ಯನಿಗೆ, ಶಿಶುಗಳನೋದಿಸೆ ವಿಧಿಸಿದನೂ |
ಶಠರನು ದೂಡಿದನೂ, ಧರ್ಮದ ಸೋಗಿಲಿ ಮೆರೆವೆವರಾ || ೧೩ ||

ಅನ್ನವ ನೀಡಿಸಿದಾ, ಮಠದಲಿ ಹಸಿದಿಹ ಜನಪದಕೇ |
ತನ್ನವರೆಲ್ಲರನೂ, ತಿಳಿಯುವ ದಾರಿಯ ತೋರಿಸಿದಾ || ೧೪ ||

ಮಾನವ ಜನವೆಲ್ಲಾ, ಮನುವಿನ ಸಂತತಿ ತಾನೆಂದೂ |
ಬೋಧೆಯ ಮಾಡಿದನೂ, ಜನಗಳನೊಂದನುಗೂಡಿಸುತೇ || ೧೫ ||

ರಾಟಿಯ ತಿರುವುತಲೀ, ನೂಲಲಿ ಬಟ್ಟೆಯ ನೇಯುತಲೀ |
ಥಾಟಿಲಿ ಮೆರೆಯುತಲೀ, ಬಾಳುವ ಧಾಟಿಯ ತೋರಿದನೂ || ೧೬ ||

ಕಾಯಕ ಕೈಲಾಸ, ವೆಂಬುವ ತತ್ವನ ಬೋಧಿಸಿದಾ |
ನಾಯಕ ಬಸವಂಣಾ, ಮಾಡದ ಕಾಯಕವೇನಣ್ಣಾ || ೧೬ ||

ಬಸವನು ಮಾಡಿದುದೇ ಬಸವನ ತಮ್ಮನು ಮೋಹನನೂ |
ಎಸಗುತೆ ಭಾರತಕೇ, ತಂದನು ಸ್ವಾತಂತ್ರದ ಲಕುಮಿ || ೧೮ ||

ಬಸವನು ಮೋಹನರೂ, ಶೇರುತೆ ಪರಶಿವ ಸಾನ್ನಿಧ್ಯಾ |
ಎಸೆವರು ದಿಟ್ಟಿಗಳಾ, ನಮ್ಮೊಳು ಪ್ರೇಮವ ಬೀರುತಲೀ || ೧೯ ||

ಬಸವನ ತತ್ವಗಳಾ, ಜನಗಳು ಪಾಲಿಸೆ ಸಂತತದೀ |
ಬಸವನು ಮೋಹನರೂ, ಮಾಳ್ಪರು ತಾಂಡವ ನೃತ್ಯಗಳಾ || ೨೦ ||

ಬಸವಕ ಬಸವೆನ್ನಿರೇ, ಬಸವನ ಪಾದಕೆ ಶರಣೆನ್ನಿರೇ |
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...