Home / ಕವನ / ನೀಳ್ಗವಿತೆ / ಕಾಸೀ ದೇಸಾಂತ್ರೀ ನೆಡುದಾನೇ

ಕಾಸೀ ದೇಸಾಂತ್ರೀ ನೆಡುದಾನೇ

ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ
ಶಂಗಡ ಗುಲಗಂಜೀ ಬಲಬಂದೂ ||೧||

ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ,
ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨||

“ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ
ಹನ್ನೆರಡೆ ವರುಶೀನ ತಲ ದಂಡೂ ||೩||

ಹನ್ನೆರಡು ವರುಶೀನ ತಲದಂಡ್‌ ಹೋಗಿ ಬರುತೇನೇ
ಅವಗೆ ಮಾಲಕ್ಷ್ಮೀ ಕೊಡತೇನೇ’ ||೪||

ಅಟ್ಟಂಬೂ ಮಾತಾ ಹೇಳಾನೆ ಲಣ್ಣಯ್ಯಾ
ತಂಗೀ ಮಾಲಕ್ಷ್ಮಿ | ಕರೂದಾನೇ ||೫||

“ಗೆಂಟ ಕಟ್ಟಲು ಬೇಡಾ ಪಟ್ಟೀ ಉಡಲುಬೇಡಾ
ಕಲ್ಲೂ ಮಾಳುಗೀಯಾ ಇಳಿಬೇಡಾ || ತಂಗಮ್ಮಾ ||೬||

ಹನ್ನರಡ್‌ ವರುಶೀನಾ ತಲದಂಡೂ
ಹನ್ನೆರಡ್‌ ವರುಶೀನಾ ತಲದಂಡ್ಗ್‌ ಹೋಗಿ ಬರುತೇ” ||೭||

ಅಟ್ಟಂಬೂ ಮಾತಾ ಕೇಳಾನ ಸಲೂಜಾಣಾ
ಕೊಟ್ಟೂಗೀ ಕದವಾ ಜಡೂದಾನೇ || ಸಲೂಜಾಣ ||೮||

ಐದ್‌ಕಂಡ್ಗ ಹೊಲಕೇ ಹೊಡೂದಾನೇ
“ಅದುವೇನೇ ಮಾಲಕ್ಷ್ಮೀ, ಇದುವೇನೇ ಮಾಲಕ್ಷ್ಮೀ ||೯||

ಹೋಕ್ಕಾಲದ ನಿದ್ರೀ ನಿನಗೇನೇ
ಹೋಕ್ಕಾಲದಾ ನಿದ್ರಿ ನಿನಗೇನೇ ಮಾಲಕ್ಷ್ಮೀ ||೧೦||

ಐದ್‌ಕಂಡ್ಗ್ ಹೊಲವಾ ಕಾಯವೇನೇ?”
ಅಟ್ಟಂಬೂ ಮಾತಾ ಕೇಳಾಳ ಮಾಲಕ್ಷ್ಮೀ
ಬಣ್ಣಾದಾ ದಾಬಾ ಬಲಗೈಲೀ ||೧೧|

ಬಣ್ಣದಾ ದಾಬಾ ಬಲಗೈಲೀ ಲಿಡಕಂಡೀ
ಕಲ್ಲೂ ಮಾಳಿಗಿಯಾ ಇಳದಾಳೇ ||೧೨||

ಕಲ್ಲಾಲೂ ಮಾಳುಗೀ ಇಳದಾಳೇ ಮಾಲಕ್ಷ್ಮೀ
ಐದ ಕಂಡಗ ಹೊಲಕೇ ನೆಡುದಾಳೇ ||೧೩||

ಲಿಂಬಿ ಮರದಡಿಗೇ ನಿತ್ತಿರುವ ಸುಲೂಜಾಣಾ
“ಹಾಂಗ್‌ ಹೋಗಾ ಕದವಾ ತಿರಗಯ್ಯಾ” ||೧೪||

“ಅತ್ತೀಯಾ ಮಗನಲ್ಲ ಮತ್ತು ಸೋದರವಲ್ಲಾ
ಹಾಂಗ್‌ ಹೋಗಾ ಕರವಾ ತಿರಗಯ್ಯ” ||೧೫||

“ಅತ್ತೀಯಾ ಮಗಾ ಹೌದು ಮತ್ತೂ ಸೋದರ ಹೌದು
ಹಾಂಗ್‌ ಹೋಗಾ ಕರವಾ ತಿರಗಯ್ಯಾ” ||೧೬||

ಅಟ್ಟಂಬೂ ಮಾತಾ ಕೇಳಾನೆ ಸುಲೂಜಾಣಾ
ಕೊಟ್ಟೂಗೀಗ ಕರವಾ ಜಡದಾನೇ ||೧೭||

ಕೊಟ್ಟೂಗೀಗೇ ಕರವಾ ಜಡದಾನೆ ಸುಲೂಜಾಣಾ
ಬೆಳ್ಳೀ ದಾಬುನಲ್ಲಿ ಬಿಗುದಾನೇ ಸುಲೂಜಾಣಾ ||೧೮||

ಕಲ್ಲೂ ಮಾಳುಗಿಗೇ ನೆಡದಾನೆ
ಕಲ್ಲಲೂ ಮಾಳುಗಿಗೇ ನೆಡದಾನೆ ಸುಲೂಜಾಣಾ
ಅಲ್ಲೀ ಉಂಡಿದುರೂ ವಡನೂಟಾ ||೧೯||

ಅಟ್ಟಂಬೂ ಮಾತಾ ಕೇಳಾವ್ನೆ ಲಣ್ಣಯ್ಯ
ಹನ್ನೆರಡ ವರುಶೀನಾ ತಲದಂಡೂ ||೨೦||

ಹನ್ನೆರಡೂ ವರುಶೀನಾ ತಲದಂಡೂ ಹಿಂದಾಲೆ ಬಂದೀ
ತಂಗೀಯಾ ಕರದೇ ನುಡೀದಾನೆ ||೨೧||

“ಮೊಕವೇಕೇ ಬಾಡೀತೇ? ನೆರಿಯಾಕೇ ಕುಂದೀತೇ?
ಸೀರಿ ನೆರಿಮುಡಿಯೂ ಸಡಲೀತೇ? ||೨೨||

ಸೀರೀಯೂ ನೆರಿಮುಡಿ ಸಡಲಾಯ್ತು ತಂಗಮ್ಮಾ
ಗೋವೇ ಜಂಗಮ್ಮಾಗೊಲಿದ್ಯೇನೇ ||೨೩||

ಹಂಡನೂ ಹಾದೀತೂ ಹುಂಡಿನೂ ಲೊದ್ದೀತೂ
ಶಣ್ಣಾಕೂಡಿನ್ಯೇಮ್ಮೇ ಶಳುದೀತೂ” ||೨೪||

“ಶಣ್ಣಲೂ ಕೋಡೀನ್ಯೆಮ್ಮೇ ಶಳುದೀತೂ ಲಣ್ಣಯ್ಯ
ಸೀರೀ ನೆರಿಮುಡಿಯೂ ಸಡಲಾಯೂ” ||೨೫||

ಅಟ್ಟಂಬೂ ಮಾತಾ ಕೇಳಾನೆ ಲಣ್ಣಯ್ಯ
ಅರವತ್ತೂ ಗೆಣ್ಣೀನಾ ಹರಕೋಲಾ | ಹರಕೋಲಾ ತಡಕಂಡೀ
ಅರೂಮುರುಪೆಟ್ಟಾ ಹೂಡದಾನೀ ||೨೬||

“ನನಗೇಕೇ ಹೊಡುತೀಯೊ? ನನಗೇಕೇ ಬಯ್ದೀಯೋ
ನನ್ನಾ ಕೋಡ್ಯೇಕೇ ಕೊಯ್ದಿಯೋ? ||೨೭||

ನನ್ನಾಲೂ ಕೋಡ್ಯಾಕೆ ಕೊಯ್ದಿಯೋ ಲಣ್ಣಯ್ಯಾ,
ಗೋವೀ ಜಂಗಮ್ಮಾಗೊಲೀದಾಳೇ” ||೨೮||

ಅಟ್ಟಂಬೂ ಮಾತಾ ಕೇಳಾನೇ ಲಣ್ಣಯ್ಯಾ
ತಮ ಬಾವಾನಾ ಕರದಾನೇ ||೨೯||

“ಹಾದಿಗೆ ಹಂದರ ನೀಡೂ ಬೀದಿಗೆ ಚಪ್ಪರ ನೀಡು
ಮದವೇ ಸಂಗ್ರಮ್ಮಾ ಕನಕೊಳ್ರೋ ||೩೦||

ಮದವೀಯಾ ಸಂಗ್ರಮ್ಮಾ ಕನಕೊಳೋ” ಲಂದ ಹೇಳೀ
ಕಾಸೀ ದೇಸಾಂತ್ರೇ ನೆಡುದಾನೇ ||೩೧||
*****

ಕೆಲವು ಪದಗಳ ವಿವರಣೆ:

ಜಡುದಾನೆ = ಜಡಿದನು, ಶಬ್ದವಾಗುವಂತೆ ಬಾಗಿಲು ಹಾಕಿದನು
ಹೊಕ್ಕಾಲ = ಹೋಗುವ ಕಾಲ, ಹಾಳಾಗುವ ಕಾಲ
ನೆರಿ = ಸೀರೆಯ ನಿರಿ
ಶಳುದೀತು = ಸೆಳೆಯಿತು
ಗೆಣಲ್ಲಿ = ಗಂಟು
ಸಂಗ್ರಮ್ಮ = ಸಂಗ್ರಹ
ಅವಶ್ಯ ಸಿದ್ಧತೆ ಅನಕೊಳ್ಳೊ = ಅನುವಾಗು
ದಾಬು = ಪಶುವನ್ನು ಕಟ್ಟುವ ಹಗ್ಗ

ಹೇಳಿದವರು: ಮಾದೇವಿ ನಾರಾಯಣ ನಾಯ್ಕ, ಗೇರಸೊಪ್ಪೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...