Home / ಕವನ / ನೀಳ್ಗವಿತೆ / ಕಾಸೀ ದೇಸಾಂತ್ರೀ ನೆಡುದಾನೇ

ಕಾಸೀ ದೇಸಾಂತ್ರೀ ನೆಡುದಾನೇ

ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ
ಶಂಗಡ ಗುಲಗಂಜೀ ಬಲಬಂದೂ ||೧||

ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ,
ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨||

“ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ
ಹನ್ನೆರಡೆ ವರುಶೀನ ತಲ ದಂಡೂ ||೩||

ಹನ್ನೆರಡು ವರುಶೀನ ತಲದಂಡ್‌ ಹೋಗಿ ಬರುತೇನೇ
ಅವಗೆ ಮಾಲಕ್ಷ್ಮೀ ಕೊಡತೇನೇ’ ||೪||

ಅಟ್ಟಂಬೂ ಮಾತಾ ಹೇಳಾನೆ ಲಣ್ಣಯ್ಯಾ
ತಂಗೀ ಮಾಲಕ್ಷ್ಮಿ | ಕರೂದಾನೇ ||೫||

“ಗೆಂಟ ಕಟ್ಟಲು ಬೇಡಾ ಪಟ್ಟೀ ಉಡಲುಬೇಡಾ
ಕಲ್ಲೂ ಮಾಳುಗೀಯಾ ಇಳಿಬೇಡಾ || ತಂಗಮ್ಮಾ ||೬||

ಹನ್ನರಡ್‌ ವರುಶೀನಾ ತಲದಂಡೂ
ಹನ್ನೆರಡ್‌ ವರುಶೀನಾ ತಲದಂಡ್ಗ್‌ ಹೋಗಿ ಬರುತೇ” ||೭||

ಅಟ್ಟಂಬೂ ಮಾತಾ ಕೇಳಾನ ಸಲೂಜಾಣಾ
ಕೊಟ್ಟೂಗೀ ಕದವಾ ಜಡೂದಾನೇ || ಸಲೂಜಾಣ ||೮||

ಐದ್‌ಕಂಡ್ಗ ಹೊಲಕೇ ಹೊಡೂದಾನೇ
“ಅದುವೇನೇ ಮಾಲಕ್ಷ್ಮೀ, ಇದುವೇನೇ ಮಾಲಕ್ಷ್ಮೀ ||೯||

ಹೋಕ್ಕಾಲದ ನಿದ್ರೀ ನಿನಗೇನೇ
ಹೋಕ್ಕಾಲದಾ ನಿದ್ರಿ ನಿನಗೇನೇ ಮಾಲಕ್ಷ್ಮೀ ||೧೦||

ಐದ್‌ಕಂಡ್ಗ್ ಹೊಲವಾ ಕಾಯವೇನೇ?”
ಅಟ್ಟಂಬೂ ಮಾತಾ ಕೇಳಾಳ ಮಾಲಕ್ಷ್ಮೀ
ಬಣ್ಣಾದಾ ದಾಬಾ ಬಲಗೈಲೀ ||೧೧|

ಬಣ್ಣದಾ ದಾಬಾ ಬಲಗೈಲೀ ಲಿಡಕಂಡೀ
ಕಲ್ಲೂ ಮಾಳಿಗಿಯಾ ಇಳದಾಳೇ ||೧೨||

ಕಲ್ಲಾಲೂ ಮಾಳುಗೀ ಇಳದಾಳೇ ಮಾಲಕ್ಷ್ಮೀ
ಐದ ಕಂಡಗ ಹೊಲಕೇ ನೆಡುದಾಳೇ ||೧೩||

ಲಿಂಬಿ ಮರದಡಿಗೇ ನಿತ್ತಿರುವ ಸುಲೂಜಾಣಾ
“ಹಾಂಗ್‌ ಹೋಗಾ ಕದವಾ ತಿರಗಯ್ಯಾ” ||೧೪||

“ಅತ್ತೀಯಾ ಮಗನಲ್ಲ ಮತ್ತು ಸೋದರವಲ್ಲಾ
ಹಾಂಗ್‌ ಹೋಗಾ ಕರವಾ ತಿರಗಯ್ಯ” ||೧೫||

“ಅತ್ತೀಯಾ ಮಗಾ ಹೌದು ಮತ್ತೂ ಸೋದರ ಹೌದು
ಹಾಂಗ್‌ ಹೋಗಾ ಕರವಾ ತಿರಗಯ್ಯಾ” ||೧೬||

ಅಟ್ಟಂಬೂ ಮಾತಾ ಕೇಳಾನೆ ಸುಲೂಜಾಣಾ
ಕೊಟ್ಟೂಗೀಗ ಕರವಾ ಜಡದಾನೇ ||೧೭||

ಕೊಟ್ಟೂಗೀಗೇ ಕರವಾ ಜಡದಾನೆ ಸುಲೂಜಾಣಾ
ಬೆಳ್ಳೀ ದಾಬುನಲ್ಲಿ ಬಿಗುದಾನೇ ಸುಲೂಜಾಣಾ ||೧೮||

ಕಲ್ಲೂ ಮಾಳುಗಿಗೇ ನೆಡದಾನೆ
ಕಲ್ಲಲೂ ಮಾಳುಗಿಗೇ ನೆಡದಾನೆ ಸುಲೂಜಾಣಾ
ಅಲ್ಲೀ ಉಂಡಿದುರೂ ವಡನೂಟಾ ||೧೯||

ಅಟ್ಟಂಬೂ ಮಾತಾ ಕೇಳಾವ್ನೆ ಲಣ್ಣಯ್ಯ
ಹನ್ನೆರಡ ವರುಶೀನಾ ತಲದಂಡೂ ||೨೦||

ಹನ್ನೆರಡೂ ವರುಶೀನಾ ತಲದಂಡೂ ಹಿಂದಾಲೆ ಬಂದೀ
ತಂಗೀಯಾ ಕರದೇ ನುಡೀದಾನೆ ||೨೧||

“ಮೊಕವೇಕೇ ಬಾಡೀತೇ? ನೆರಿಯಾಕೇ ಕುಂದೀತೇ?
ಸೀರಿ ನೆರಿಮುಡಿಯೂ ಸಡಲೀತೇ? ||೨೨||

ಸೀರೀಯೂ ನೆರಿಮುಡಿ ಸಡಲಾಯ್ತು ತಂಗಮ್ಮಾ
ಗೋವೇ ಜಂಗಮ್ಮಾಗೊಲಿದ್ಯೇನೇ ||೨೩||

ಹಂಡನೂ ಹಾದೀತೂ ಹುಂಡಿನೂ ಲೊದ್ದೀತೂ
ಶಣ್ಣಾಕೂಡಿನ್ಯೇಮ್ಮೇ ಶಳುದೀತೂ” ||೨೪||

“ಶಣ್ಣಲೂ ಕೋಡೀನ್ಯೆಮ್ಮೇ ಶಳುದೀತೂ ಲಣ್ಣಯ್ಯ
ಸೀರೀ ನೆರಿಮುಡಿಯೂ ಸಡಲಾಯೂ” ||೨೫||

ಅಟ್ಟಂಬೂ ಮಾತಾ ಕೇಳಾನೆ ಲಣ್ಣಯ್ಯ
ಅರವತ್ತೂ ಗೆಣ್ಣೀನಾ ಹರಕೋಲಾ | ಹರಕೋಲಾ ತಡಕಂಡೀ
ಅರೂಮುರುಪೆಟ್ಟಾ ಹೂಡದಾನೀ ||೨೬||

“ನನಗೇಕೇ ಹೊಡುತೀಯೊ? ನನಗೇಕೇ ಬಯ್ದೀಯೋ
ನನ್ನಾ ಕೋಡ್ಯೇಕೇ ಕೊಯ್ದಿಯೋ? ||೨೭||

ನನ್ನಾಲೂ ಕೋಡ್ಯಾಕೆ ಕೊಯ್ದಿಯೋ ಲಣ್ಣಯ್ಯಾ,
ಗೋವೀ ಜಂಗಮ್ಮಾಗೊಲೀದಾಳೇ” ||೨೮||

ಅಟ್ಟಂಬೂ ಮಾತಾ ಕೇಳಾನೇ ಲಣ್ಣಯ್ಯಾ
ತಮ ಬಾವಾನಾ ಕರದಾನೇ ||೨೯||

“ಹಾದಿಗೆ ಹಂದರ ನೀಡೂ ಬೀದಿಗೆ ಚಪ್ಪರ ನೀಡು
ಮದವೇ ಸಂಗ್ರಮ್ಮಾ ಕನಕೊಳ್ರೋ ||೩೦||

ಮದವೀಯಾ ಸಂಗ್ರಮ್ಮಾ ಕನಕೊಳೋ” ಲಂದ ಹೇಳೀ
ಕಾಸೀ ದೇಸಾಂತ್ರೇ ನೆಡುದಾನೇ ||೩೧||
*****

ಕೆಲವು ಪದಗಳ ವಿವರಣೆ:

ಜಡುದಾನೆ = ಜಡಿದನು, ಶಬ್ದವಾಗುವಂತೆ ಬಾಗಿಲು ಹಾಕಿದನು
ಹೊಕ್ಕಾಲ = ಹೋಗುವ ಕಾಲ, ಹಾಳಾಗುವ ಕಾಲ
ನೆರಿ = ಸೀರೆಯ ನಿರಿ
ಶಳುದೀತು = ಸೆಳೆಯಿತು
ಗೆಣಲ್ಲಿ = ಗಂಟು
ಸಂಗ್ರಮ್ಮ = ಸಂಗ್ರಹ
ಅವಶ್ಯ ಸಿದ್ಧತೆ ಅನಕೊಳ್ಳೊ = ಅನುವಾಗು
ದಾಬು = ಪಶುವನ್ನು ಕಟ್ಟುವ ಹಗ್ಗ

ಹೇಳಿದವರು: ಮಾದೇವಿ ನಾರಾಯಣ ನಾಯ್ಕ, ಗೇರಸೊಪ್ಪೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...