Home / ಕವನ / ನೀಳ್ಗವಿತೆ / ಕಾಸೀ ದೇಸಾಂತ್ರೀ ನೆಡುದಾನೇ

ಕಾಸೀ ದೇಸಾಂತ್ರೀ ನೆಡುದಾನೇ

ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ
ಶಂಗಡ ಗುಲಗಂಜೀ ಬಲಬಂದೂ ||೧||

ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ,
ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨||

“ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ
ಹನ್ನೆರಡೆ ವರುಶೀನ ತಲ ದಂಡೂ ||೩||

ಹನ್ನೆರಡು ವರುಶೀನ ತಲದಂಡ್‌ ಹೋಗಿ ಬರುತೇನೇ
ಅವಗೆ ಮಾಲಕ್ಷ್ಮೀ ಕೊಡತೇನೇ’ ||೪||

ಅಟ್ಟಂಬೂ ಮಾತಾ ಹೇಳಾನೆ ಲಣ್ಣಯ್ಯಾ
ತಂಗೀ ಮಾಲಕ್ಷ್ಮಿ | ಕರೂದಾನೇ ||೫||

“ಗೆಂಟ ಕಟ್ಟಲು ಬೇಡಾ ಪಟ್ಟೀ ಉಡಲುಬೇಡಾ
ಕಲ್ಲೂ ಮಾಳುಗೀಯಾ ಇಳಿಬೇಡಾ || ತಂಗಮ್ಮಾ ||೬||

ಹನ್ನರಡ್‌ ವರುಶೀನಾ ತಲದಂಡೂ
ಹನ್ನೆರಡ್‌ ವರುಶೀನಾ ತಲದಂಡ್ಗ್‌ ಹೋಗಿ ಬರುತೇ” ||೭||

ಅಟ್ಟಂಬೂ ಮಾತಾ ಕೇಳಾನ ಸಲೂಜಾಣಾ
ಕೊಟ್ಟೂಗೀ ಕದವಾ ಜಡೂದಾನೇ || ಸಲೂಜಾಣ ||೮||

ಐದ್‌ಕಂಡ್ಗ ಹೊಲಕೇ ಹೊಡೂದಾನೇ
“ಅದುವೇನೇ ಮಾಲಕ್ಷ್ಮೀ, ಇದುವೇನೇ ಮಾಲಕ್ಷ್ಮೀ ||೯||

ಹೋಕ್ಕಾಲದ ನಿದ್ರೀ ನಿನಗೇನೇ
ಹೋಕ್ಕಾಲದಾ ನಿದ್ರಿ ನಿನಗೇನೇ ಮಾಲಕ್ಷ್ಮೀ ||೧೦||

ಐದ್‌ಕಂಡ್ಗ್ ಹೊಲವಾ ಕಾಯವೇನೇ?”
ಅಟ್ಟಂಬೂ ಮಾತಾ ಕೇಳಾಳ ಮಾಲಕ್ಷ್ಮೀ
ಬಣ್ಣಾದಾ ದಾಬಾ ಬಲಗೈಲೀ ||೧೧|

ಬಣ್ಣದಾ ದಾಬಾ ಬಲಗೈಲೀ ಲಿಡಕಂಡೀ
ಕಲ್ಲೂ ಮಾಳಿಗಿಯಾ ಇಳದಾಳೇ ||೧೨||

ಕಲ್ಲಾಲೂ ಮಾಳುಗೀ ಇಳದಾಳೇ ಮಾಲಕ್ಷ್ಮೀ
ಐದ ಕಂಡಗ ಹೊಲಕೇ ನೆಡುದಾಳೇ ||೧೩||

ಲಿಂಬಿ ಮರದಡಿಗೇ ನಿತ್ತಿರುವ ಸುಲೂಜಾಣಾ
“ಹಾಂಗ್‌ ಹೋಗಾ ಕದವಾ ತಿರಗಯ್ಯಾ” ||೧೪||

“ಅತ್ತೀಯಾ ಮಗನಲ್ಲ ಮತ್ತು ಸೋದರವಲ್ಲಾ
ಹಾಂಗ್‌ ಹೋಗಾ ಕರವಾ ತಿರಗಯ್ಯ” ||೧೫||

“ಅತ್ತೀಯಾ ಮಗಾ ಹೌದು ಮತ್ತೂ ಸೋದರ ಹೌದು
ಹಾಂಗ್‌ ಹೋಗಾ ಕರವಾ ತಿರಗಯ್ಯಾ” ||೧೬||

ಅಟ್ಟಂಬೂ ಮಾತಾ ಕೇಳಾನೆ ಸುಲೂಜಾಣಾ
ಕೊಟ್ಟೂಗೀಗ ಕರವಾ ಜಡದಾನೇ ||೧೭||

ಕೊಟ್ಟೂಗೀಗೇ ಕರವಾ ಜಡದಾನೆ ಸುಲೂಜಾಣಾ
ಬೆಳ್ಳೀ ದಾಬುನಲ್ಲಿ ಬಿಗುದಾನೇ ಸುಲೂಜಾಣಾ ||೧೮||

ಕಲ್ಲೂ ಮಾಳುಗಿಗೇ ನೆಡದಾನೆ
ಕಲ್ಲಲೂ ಮಾಳುಗಿಗೇ ನೆಡದಾನೆ ಸುಲೂಜಾಣಾ
ಅಲ್ಲೀ ಉಂಡಿದುರೂ ವಡನೂಟಾ ||೧೯||

ಅಟ್ಟಂಬೂ ಮಾತಾ ಕೇಳಾವ್ನೆ ಲಣ್ಣಯ್ಯ
ಹನ್ನೆರಡ ವರುಶೀನಾ ತಲದಂಡೂ ||೨೦||

ಹನ್ನೆರಡೂ ವರುಶೀನಾ ತಲದಂಡೂ ಹಿಂದಾಲೆ ಬಂದೀ
ತಂಗೀಯಾ ಕರದೇ ನುಡೀದಾನೆ ||೨೧||

“ಮೊಕವೇಕೇ ಬಾಡೀತೇ? ನೆರಿಯಾಕೇ ಕುಂದೀತೇ?
ಸೀರಿ ನೆರಿಮುಡಿಯೂ ಸಡಲೀತೇ? ||೨೨||

ಸೀರೀಯೂ ನೆರಿಮುಡಿ ಸಡಲಾಯ್ತು ತಂಗಮ್ಮಾ
ಗೋವೇ ಜಂಗಮ್ಮಾಗೊಲಿದ್ಯೇನೇ ||೨೩||

ಹಂಡನೂ ಹಾದೀತೂ ಹುಂಡಿನೂ ಲೊದ್ದೀತೂ
ಶಣ್ಣಾಕೂಡಿನ್ಯೇಮ್ಮೇ ಶಳುದೀತೂ” ||೨೪||

“ಶಣ್ಣಲೂ ಕೋಡೀನ್ಯೆಮ್ಮೇ ಶಳುದೀತೂ ಲಣ್ಣಯ್ಯ
ಸೀರೀ ನೆರಿಮುಡಿಯೂ ಸಡಲಾಯೂ” ||೨೫||

ಅಟ್ಟಂಬೂ ಮಾತಾ ಕೇಳಾನೆ ಲಣ್ಣಯ್ಯ
ಅರವತ್ತೂ ಗೆಣ್ಣೀನಾ ಹರಕೋಲಾ | ಹರಕೋಲಾ ತಡಕಂಡೀ
ಅರೂಮುರುಪೆಟ್ಟಾ ಹೂಡದಾನೀ ||೨೬||

“ನನಗೇಕೇ ಹೊಡುತೀಯೊ? ನನಗೇಕೇ ಬಯ್ದೀಯೋ
ನನ್ನಾ ಕೋಡ್ಯೇಕೇ ಕೊಯ್ದಿಯೋ? ||೨೭||

ನನ್ನಾಲೂ ಕೋಡ್ಯಾಕೆ ಕೊಯ್ದಿಯೋ ಲಣ್ಣಯ್ಯಾ,
ಗೋವೀ ಜಂಗಮ್ಮಾಗೊಲೀದಾಳೇ” ||೨೮||

ಅಟ್ಟಂಬೂ ಮಾತಾ ಕೇಳಾನೇ ಲಣ್ಣಯ್ಯಾ
ತಮ ಬಾವಾನಾ ಕರದಾನೇ ||೨೯||

“ಹಾದಿಗೆ ಹಂದರ ನೀಡೂ ಬೀದಿಗೆ ಚಪ್ಪರ ನೀಡು
ಮದವೇ ಸಂಗ್ರಮ್ಮಾ ಕನಕೊಳ್ರೋ ||೩೦||

ಮದವೀಯಾ ಸಂಗ್ರಮ್ಮಾ ಕನಕೊಳೋ” ಲಂದ ಹೇಳೀ
ಕಾಸೀ ದೇಸಾಂತ್ರೇ ನೆಡುದಾನೇ ||೩೧||
*****

ಕೆಲವು ಪದಗಳ ವಿವರಣೆ:

ಜಡುದಾನೆ = ಜಡಿದನು, ಶಬ್ದವಾಗುವಂತೆ ಬಾಗಿಲು ಹಾಕಿದನು
ಹೊಕ್ಕಾಲ = ಹೋಗುವ ಕಾಲ, ಹಾಳಾಗುವ ಕಾಲ
ನೆರಿ = ಸೀರೆಯ ನಿರಿ
ಶಳುದೀತು = ಸೆಳೆಯಿತು
ಗೆಣಲ್ಲಿ = ಗಂಟು
ಸಂಗ್ರಮ್ಮ = ಸಂಗ್ರಹ
ಅವಶ್ಯ ಸಿದ್ಧತೆ ಅನಕೊಳ್ಳೊ = ಅನುವಾಗು
ದಾಬು = ಪಶುವನ್ನು ಕಟ್ಟುವ ಹಗ್ಗ

ಹೇಳಿದವರು: ಮಾದೇವಿ ನಾರಾಯಣ ನಾಯ್ಕ, ಗೇರಸೊಪ್ಪೆ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...