Home / ಕವನ / ಕವಿತೆ / ಸಂಜೆಗೆ

ಸಂಜೆಗೆ

(ಒಂದು ಪ್ರಗಾಥ)

ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ
ತುಂಬಿ ಮೈಮನವನ್ನು ಬಂಧಿಸಿಹುದು
ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ
ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು
ಹರಣಗಳ ನಯನದಲಿ ಅರಳಿಸುತ ನೋಡುವೆನು.
ಕಡಲನ್ನೆ ಕುಡಿಯುವೊಲು ದಿಟ್ಟಿಸುವೆನು.

ಹಗಲಿರುಳು ತೆರೆ ಸರಿಸಿ ಬಂದೆ ಮಂಥರೆ, ಮಧುರೆ
ನಿಮಿಷಾರ್ಧವೇ ನಿಂತು ನಡುವೆ ಮರೆಗೆ
ಆದರೆಲ್ಲೆಡೆ ನೀನು ಮಂತ್ರ ಮೌಕ್ತಿಕ ಜಲವ
ತೂರುತಿರೆ ದೇಶ ದಿಶೆ ಹೂ ಹಾಸಿಗೆ.
ಜರೆಯ ಮರೆಯಿತು ಗಿರಿಯು ಹೆರೆಯತಳೆದಿತು ತಿರೆಯು
ನನ್ನ ಕರಳೂ ಅರಳ ಗಮಗಮಿಸಿತು.

ಸ್ವರ್ಗಲೋಕದ ಮಾರ್ಗ ದುರ್ಗಮವೆ ಈ ಕ್ಷಣದಿ
ನಾಕವೇ ನಗುತಿರಲು ನಿನ್ನುಡಿಯಲಿ
ಚೆಲುವಿನಾ ಬಲೆಯಾಗಿ ಒಲವಿನಾ ಸೆಲೆಯಾಗಿ
ಮುಣ್ಣಿಗೂ ಬಣ್ಣನೆಯ ಲೀಲೆ ದೋರೆ
ನೆಲದಿ ನೆಲೆಯಾಗಿರುವ ನನ್ನ ನನ್ನಿಗಳೆಲ್ಲ
ನಿನ್ನ ತೇಜೋರಥದಿ ಸಾಗುತಿಹವು.

ಬಲ್ಲೆಯಾ ನನ್ನೆದೆಯ ಏಕತಾರಿಯ ಮೇಲೆ
ಅಸೆಮಿಡಿಯುವ ಭಗ್ನಗೀತಗಳನು
ಮನದ ಮಂಗಲವನ್ನು ಮೃತಿಗೊಳಿಸಿ ಜೀವನದ
ಹಸಿವೆಯನೆ ಬತ್ತಿಸುವ ರಾಗಗಳನು.
ಚೆಲುವಾಗಿ ಚಣವರಳಿ ಅಳಿದ ನನ್ನೊಲವಿನಲಿ
ನೆನಹು ನೋವಿಗೆ ನೀರನುಣಿಸುತಿಹುದು.

ಬಾನ್ನೆಲದ ಬೇಟಕ್ಕೆ ಬೆಳೆದ ಸಂಧ್ಯಾ ಕುವರಿ
ದಿನದಗ್ನಿತಪ ಹೂತ ಪುಣ್ಯ ನೀನು
ನೋವು ನನೆಕೊನೆಯೇರಿ ನಲಿವಾಯಿತೆನ್ನುವೊಲು
ಬಾಂಬಸಿರ ಕಿಚ್ಚಿ ನಿಂದೆದ್ದೆ ನೀನು.
ಪಡುವಣದ ಮಡುವಿನಲಿ ನೂರೆಸಳನೈದಿಲೆಯು
ಅರಳಿದೊಲು ಹರಿಸಿರುವೆ ಕಾಂತಿಯನ್ನು

ಸಾಂಧ್ಯ ಸುಂದರಿ ನಿನ್ನ ಸೊಬಗಿನಾರಾಧನೆಗೆ
ನನ್ನ ಮನವೇ ಬಾಗಿ ನಿಂತಿರುವುದು
ಕೋಟಲೆಯ ಕದಡನ್ನು ತಿಳಿದು ಪಾವನವಾಗಿ
ಆತುರದಿ ಕಲ್ಯಾಣ ಬಯಸುತಿಹುದು.
ಸೋತೆದೆಯ ಸರಸಿಯಲಿ ಅರಳಿರುವುದರವಿಂದ
ಶಾಂತಿಯಲಿ ತೋಷವನು ತಳೆದಿರುವುದು.

ಮರೆಯಾದೆಯಾ ದೇವಿ! ಮನವು ಮುಕುಲಿತವಾಯ್ತು
ತಿರೆಯು ಕಣ್ಣಿಂಗಿದೊಲು ಮುಗ್ಗುರಿಸಿತ್ತು.
ಆದರೂ ನಿಮಿಷದಲಿ ಜೀವನವನರಳಿಸಿದ
ನಿನ್ನ ಪ್ರೀತಿಯ ರೀತಿ ಅನೃತವೆಂತು?
ವಿಲಯ ತಾಳಲಯಕ್ಕೆ ಕುಣಿವ ಬಾಳಿನ ಕತೆಗೆ
ಅಮೃತ ಗತದ ರಸವು ತುಂಬಿಬಂತು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...