Home / ಲೇಖನ / ವಿಜ್ಞಾನ / ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ ಮಣ್ಣಿನ ಪದರಲ್ಲಿ ಬೇರುಬಿಟ್ಟು ಬೇರೆಬೇರೆ ಜಾತಿಯ ಮರಗಳು ಬೆಳೆಯುತ್ತವೆ, ಎಂಬ ಸತ್ಯ ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಮೊಟ್ಟ ಮೊದಲ ಬಾರಿಗೆ, ಇದಕ್ಕೆ ಸಂಬಂಧಪಟ್ಟ ಸಂಶೋಧನೆ ಕೆನಡಾದಲ್ಲಿ ಬ್ರಿಟಿಷ್ ಕೋಲಂಬಿಯಾದಲ್ಲಿ ೫ ಪ್ರಮುಖ ಸಂಶೋಧನಾಲಯಗಳ ವಿಜ್ಞಾನಿಗಳ ತಂಡ ೬,೦೦೦ ಅಡಿಗಳೆತ್ತರದ ಪರ್ವತ ಪ್ರದೇಶದ ಮೇಲೆ ಕೆಲವು ಮರಗಳ ಬೇರು, ಕೊಂಬೆಗಳು, ಎಲೆಗಳು, ಹಾಗೂ ಬೀಜಗಳನ್ನು ಆಯ್ದು ತಂದು ಬೇರೆಬೇರೆ ಪೆಟ್ಟಿಗೆಗಳಲ್ಲಿ ತುಂಬಿ ಪ್ರತಿಯೊಂದನ್ನು ಗುರುತು ಮಾಡಿಟ್ಟುಕೊಂಡರು. ಈ ಮರಗಳ ಭಾಗಗಳನ್ನು ಬೂದಿಮಾಡಿ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಅದಮ್ನ ಪರೀಕ್ಷಿಸಿ ಗುರುತು ಮಾಡಿಟ್ಟು ಕೊಳ್ಳಲಾಯಿತು. ಪ್ರತಿಯೊಂದು ಸಣ್ಣ ಕಣವನ್ನು ಪರೀಕ್ಷಿಸಿ ಅವುಗಳಲ್ಲಿ ಏನಾದರೂ ಖನಿಜಗಳಿವೆಯೆ? ಎಂಬುದನ್ನು ಪರೀಕ್ಷಿಸಿದರು. ಆಗ ಆ ಬೂದಿಗಳಲ್ಲಿ ಚಿನ್ನ, ತಾಮ್ರ, ಸತುವು, ಬೇರೆಬೇರೆ ಖನಿಜಗಳ ಅಂಶ ಬೆಳಕಿಗೆ ಬಂದಿತು. ಕೂಡಲೇ ಕಾರ್ಯ ಪ್ರವೃತ್ತವಾದ ತಂಡ ಆ ಮರಗಳ ಅಡಿಯಲ್ಲಿ ಆಳ ಆಳಕ್ಕೆ ಆಗಿಯಲಾರಂಭಿಸಿದರು ಆಗ ಹೆಚ್ಚು ಹೆಚ್ಚು ಖನಿಜಗಳು ದೊರೆಯಲಾರಂಭಿಸಿದವು. ಚಿನ್ನದ ಅದಿರುಗಳಿದ್ದ ಭೂ ಪ್ರದೇಶದ ಮೇಲೆ ೫ ಬೇರೆಬೇರೆ ಜಾತಿಯ ಫರ್ ಮರಗಳು ಬೆಳೆಯುತ್ತವೆ. ಪ್ರತಿಯೊಂದು ಮರವು ಒಂದೇ ಪ್ರಮಾಣದಲ್ಲಿ ಚಿನ್ನದ ಅದಿರನ್ನು ತನ್ನ ಅಡಿಯಲ್ಲಿಟ್ಟುಕೊಂಡಿತ್ತು. ಹೀಗಾಗಿ ಈ ತರಹದ ಮರಗಳು ಸುದ್ದಿ ನೀಡುವ ಮರಗಳಾದವು.

ಇನ್ನೂ ಕೆಲವು ಮರಗಳ ಬೇರಿನಾಳದಲ್ಲಿ ಯುರೇನಿಯಂ, ಹಾಗೂ ವೆನೀಡಿಯಮ್ ಲೋಹಗಳ ಅದಿರುಗಳು ಪತ್ತೆಯಾಗಿವೆ. ಇವು ವಿಶಿಷ್ಟ ಮರಗಳು. ವಿಜ್ಞಾನಿಗಳು ಈ ಮರಗಳ ಹೆಸರನ್ನು ಸೂಚಿಸಿಲ್ಲ. ಉತ್ತರ ಅಮೇರಿಕಾದ ಸಮೀಪದಲ್ಲಿ ಆರಿಜೋನಾದ ಸ್ಕಾಸ್‌ಮ್ಯಾನ್ಯುಯಲ್ ಭೂ ಪ್ರದೇಶ ತಾಮ್ರದ ಖನಿಜಗಳಿಂದ ತುಂಬಿದೆ ಎಂದು ಕೆಲವು ಮರಗಳು ಸುದ್ದಿಕೊಟ್ಟವು. ಜೈವಿಕ ಭೂ ಗರ್ಭಶಾಸ್ತ್ರಜ್ಞರು ಸು.೨೦ ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಎರಡು ಜಾತಿಯ ಓಕ್ ಮರಗಳು ಬೆಳೆದ ಬುಡದಲ್ಲಿ ತಾಮ್ರದ ನಿಕ್ಷೇಪಗಳಿರುವುದನ್ನು ಪತ್ತೆಹಚ್ಚಿದರು. ಕಿತ್ತಳೆ ವರ್ಣದ ಹೂಗಳಿಂದ ಕೂಡಿದ್ದ ಸಾವಿರಾರು ಗಸೆಗಸೆ ಮರಗಳ ಅಡಿಯಲ್ಲಿಯೂ ತಾಮ್ರದ ಇರುವನ್ನೂ ಕಂಡು ಹಿಡಿಯಲಾಯಿತು. ಕುರುಚಲುಭೂರ್ಜ(ಒಂದು ಜಾತಿಯ ಕಾಡುಮರ) ಮತ್ತು ಹಲವು ಜಾತಿಯ ಪಾಚಿಗಳು ಬೆಳೆಯುವ ಭೂಪ್ರದೇಶದ ಗರ್ಭದಲ್ಲಿ ಸತು ಹಾಗೂ ತಾಮ್ರದ ಖನಿಜಗಳು ಅಡಗಿರುತ್ತವೆ. ಎಂದು ತಿಳಿದು ಬಂದಿದೆ. ಡೌಗ್ಲಾಸ್‌ಫರ್, ಎಂಬ ಮರಗಳು ಬೆಳೆಯುವ ಭೂಮಿಯು ಆರ್ಸೆನಿಕ್ ಬೆಳ್ಳಿ ಮತ್ತು ಚಿನ್ನಗಳ ತವರುಮನೆಯಾಗಿದೆ ಎಂದು ಸಂಶೋದಿಸಿದರು, ಸಾದರ ಪಡಿಸಿದರು. ನಿಂಬೆ ಹಾಗೂ ಭೂರ್ಜ ಸಸ್ಯಗಳು ಸೀಸ ಎಂಬ ಖನಿಜ ಇರುವ ಸೂಚನೆ ನೀಡುತ್ತವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...