Home / ಲೇಖನ / ವಿಜ್ಞಾನ / ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಮರಗಳ ಅಡಿಯಲ್ಲಿ(ಭೂಗರ್‍ಭದಲ್ಲಿ)ಇರುವ ಖಿನಿಜ ಸಂಪತ್ತು

ಇದು ಸೋಜಿಗದ ವಿಷಯ. ಹಾಗಾದರೆ ಕಾಡಿನಲ್ಲಿರುವ ಮರಗಳ ಅಡಿಯನ್ನು ಅಗೆದು ಖನಿಜ ಹುಡುಕಬಹುದಲ್ಲ.?! ಎನ್ನಬಹುದು. ಆದರೆ ಇದು ಹೀಗಾಗದೇ ಕೆಲವೇ ಜಾತಿಗಳ ಮರಗಳು ಬೇರೆಬೇರೆ ಜಾತಿಯ ಖನಿಜಗಳಿರುವ ಮಣ್ಣಿನ ಪದರಲ್ಲಿ ಬೇರುಬಿಟ್ಟು ಬೇರೆಬೇರೆ ಜಾತಿಯ ಮರಗಳು ಬೆಳೆಯುತ್ತವೆ, ಎಂಬ ಸತ್ಯ ಇತ್ತೀಚೆಗೆ ಕಂಡುಹಿಡಿಯಲಾಗಿದೆ. ಮೊಟ್ಟ ಮೊದಲ ಬಾರಿಗೆ, ಇದಕ್ಕೆ ಸಂಬಂಧಪಟ್ಟ ಸಂಶೋಧನೆ ಕೆನಡಾದಲ್ಲಿ ಬ್ರಿಟಿಷ್ ಕೋಲಂಬಿಯಾದಲ್ಲಿ ೫ ಪ್ರಮುಖ ಸಂಶೋಧನಾಲಯಗಳ ವಿಜ್ಞಾನಿಗಳ ತಂಡ ೬,೦೦೦ ಅಡಿಗಳೆತ್ತರದ ಪರ್ವತ ಪ್ರದೇಶದ ಮೇಲೆ ಕೆಲವು ಮರಗಳ ಬೇರು, ಕೊಂಬೆಗಳು, ಎಲೆಗಳು, ಹಾಗೂ ಬೀಜಗಳನ್ನು ಆಯ್ದು ತಂದು ಬೇರೆಬೇರೆ ಪೆಟ್ಟಿಗೆಗಳಲ್ಲಿ ತುಂಬಿ ಪ್ರತಿಯೊಂದನ್ನು ಗುರುತು ಮಾಡಿಟ್ಟುಕೊಂಡರು. ಈ ಮರಗಳ ಭಾಗಗಳನ್ನು ಬೂದಿಮಾಡಿ ವೈಜ್ಞಾನಿಕ ಪ್ರಯೋಗಾಲಯದಲ್ಲಿ ಅದಮ್ನ ಪರೀಕ್ಷಿಸಿ ಗುರುತು ಮಾಡಿಟ್ಟು ಕೊಳ್ಳಲಾಯಿತು. ಪ್ರತಿಯೊಂದು ಸಣ್ಣ ಕಣವನ್ನು ಪರೀಕ್ಷಿಸಿ ಅವುಗಳಲ್ಲಿ ಏನಾದರೂ ಖನಿಜಗಳಿವೆಯೆ? ಎಂಬುದನ್ನು ಪರೀಕ್ಷಿಸಿದರು. ಆಗ ಆ ಬೂದಿಗಳಲ್ಲಿ ಚಿನ್ನ, ತಾಮ್ರ, ಸತುವು, ಬೇರೆಬೇರೆ ಖನಿಜಗಳ ಅಂಶ ಬೆಳಕಿಗೆ ಬಂದಿತು. ಕೂಡಲೇ ಕಾರ್ಯ ಪ್ರವೃತ್ತವಾದ ತಂಡ ಆ ಮರಗಳ ಅಡಿಯಲ್ಲಿ ಆಳ ಆಳಕ್ಕೆ ಆಗಿಯಲಾರಂಭಿಸಿದರು ಆಗ ಹೆಚ್ಚು ಹೆಚ್ಚು ಖನಿಜಗಳು ದೊರೆಯಲಾರಂಭಿಸಿದವು. ಚಿನ್ನದ ಅದಿರುಗಳಿದ್ದ ಭೂ ಪ್ರದೇಶದ ಮೇಲೆ ೫ ಬೇರೆಬೇರೆ ಜಾತಿಯ ಫರ್ ಮರಗಳು ಬೆಳೆಯುತ್ತವೆ. ಪ್ರತಿಯೊಂದು ಮರವು ಒಂದೇ ಪ್ರಮಾಣದಲ್ಲಿ ಚಿನ್ನದ ಅದಿರನ್ನು ತನ್ನ ಅಡಿಯಲ್ಲಿಟ್ಟುಕೊಂಡಿತ್ತು. ಹೀಗಾಗಿ ಈ ತರಹದ ಮರಗಳು ಸುದ್ದಿ ನೀಡುವ ಮರಗಳಾದವು.

ಇನ್ನೂ ಕೆಲವು ಮರಗಳ ಬೇರಿನಾಳದಲ್ಲಿ ಯುರೇನಿಯಂ, ಹಾಗೂ ವೆನೀಡಿಯಮ್ ಲೋಹಗಳ ಅದಿರುಗಳು ಪತ್ತೆಯಾಗಿವೆ. ಇವು ವಿಶಿಷ್ಟ ಮರಗಳು. ವಿಜ್ಞಾನಿಗಳು ಈ ಮರಗಳ ಹೆಸರನ್ನು ಸೂಚಿಸಿಲ್ಲ. ಉತ್ತರ ಅಮೇರಿಕಾದ ಸಮೀಪದಲ್ಲಿ ಆರಿಜೋನಾದ ಸ್ಕಾಸ್‌ಮ್ಯಾನ್ಯುಯಲ್ ಭೂ ಪ್ರದೇಶ ತಾಮ್ರದ ಖನಿಜಗಳಿಂದ ತುಂಬಿದೆ ಎಂದು ಕೆಲವು ಮರಗಳು ಸುದ್ದಿಕೊಟ್ಟವು. ಜೈವಿಕ ಭೂ ಗರ್ಭಶಾಸ್ತ್ರಜ್ಞರು ಸು.೨೦ ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಎರಡು ಜಾತಿಯ ಓಕ್ ಮರಗಳು ಬೆಳೆದ ಬುಡದಲ್ಲಿ ತಾಮ್ರದ ನಿಕ್ಷೇಪಗಳಿರುವುದನ್ನು ಪತ್ತೆಹಚ್ಚಿದರು. ಕಿತ್ತಳೆ ವರ್ಣದ ಹೂಗಳಿಂದ ಕೂಡಿದ್ದ ಸಾವಿರಾರು ಗಸೆಗಸೆ ಮರಗಳ ಅಡಿಯಲ್ಲಿಯೂ ತಾಮ್ರದ ಇರುವನ್ನೂ ಕಂಡು ಹಿಡಿಯಲಾಯಿತು. ಕುರುಚಲುಭೂರ್ಜ(ಒಂದು ಜಾತಿಯ ಕಾಡುಮರ) ಮತ್ತು ಹಲವು ಜಾತಿಯ ಪಾಚಿಗಳು ಬೆಳೆಯುವ ಭೂಪ್ರದೇಶದ ಗರ್ಭದಲ್ಲಿ ಸತು ಹಾಗೂ ತಾಮ್ರದ ಖನಿಜಗಳು ಅಡಗಿರುತ್ತವೆ. ಎಂದು ತಿಳಿದು ಬಂದಿದೆ. ಡೌಗ್ಲಾಸ್‌ಫರ್, ಎಂಬ ಮರಗಳು ಬೆಳೆಯುವ ಭೂಮಿಯು ಆರ್ಸೆನಿಕ್ ಬೆಳ್ಳಿ ಮತ್ತು ಚಿನ್ನಗಳ ತವರುಮನೆಯಾಗಿದೆ ಎಂದು ಸಂಶೋದಿಸಿದರು, ಸಾದರ ಪಡಿಸಿದರು. ನಿಂಬೆ ಹಾಗೂ ಭೂರ್ಜ ಸಸ್ಯಗಳು ಸೀಸ ಎಂಬ ಖನಿಜ ಇರುವ ಸೂಚನೆ ನೀಡುತ್ತವೆ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...