Home / ಕವನ / ಕವಿತೆ / ಏನಿದು ದೆವ್ವ ಏನಿದು ಬೆಂಕಿ?

ಏನಿದು ದೆವ್ವ ಏನಿದು ಬೆಂಕಿ?

ಪುಸ್ತಕಗಳಿವೆ ಅವು ಇರಬೇಕಾದ ಜಾಗದಲ್ಲಿ ಮರದ
ಆಟಿಕೆಗಳಲ್ಲಿ ಒಪ್ಪ ಓರಣವಾಗಿ ಪೆಪಿರಸ್ ಹಾಳೆಗಳಲ್ಲಿ
ಆದರೆ ಯಾಕೆ ಕಳೆದೊಂದು ವಾರದಿಂದಲು ಯಾವ
ಓದುಗರೂ ಬಂದಿಲ್ಲ-ಒಬ್ಬ ವೃದ್ಧ ವಿದ್ವಾಂಸನ ಹೊರತು?
ಆತ ಪ್ರತಿದಿನ ಬರುವವ ಗ್ರಂಥಾಲಯ ತೆರೆಯಲು ಕಾಯುವವ
ಇಡೀ ದಿನ ಇದ್ದು
ಮುಚ್ಚುವ ವೇಳೆ ಗೊಣಗುವವ
ಅವನಿಗೋಸ್ಕರವೆ ಬರುವಂತೆ ಬರುತ್ತಾನೆ ಗ್ರಂಥಪಾಲಕ
ಗ್ರಂಥಪಾಲಕನ ಮುಖದಲ್ಲೇನೋ ಸಾರ್ಥಕತೆ ಮತ್ತು ದುಗುಡ
ಏಕ ಕಾಲಕ್ಕೆ
ಕಸ ತೆಗವ ಆ ಸುಂದರ ಹುಡುಗಿಯೂ ಬರುತ್ತಿಲ್ಲ
ಕಿಟಿಕಿ ಮುಚ್ಚಿದರೂ ಬಂದು ಬೀಳುತ್ತದೆ ಉತ್ತರದಿಂದ ಧೂಳು ಕಸ
ಕೂತುಕೊಳ್ಳುತ್ತವೆ ಪ್ರತಿ ಪುಸ್ತಕದ ಮೇಲೆ
ಆ ಹುಡುಗಿಯ ಕೈಯ ಮಖಮಲ್ಲಿನ ವಸ್ತ್ರದ ಸುಖ
ಇವುಗಳ ಮೈಗೀಗ ಇಲ್ಲ
ಏನಾಗಿದೆ ಎಲ್ಲರಿಗೆ?
ಪುಸ್ತಕಗಳಿಗೆ ಗೊತ್ತಿಲ್ಲ
ಕೊಳ್ಳಿದೆವ್ವಗಳು ಬರುತ್ತಿದ್ದಾವೆ ಕತ್ತಲ ಕೂಪದಿಂದ ಅವು ಅಕ್ಷರ ದ್ವೇಷಿಗಳು
ಇಷ್ಟೊಂದು ದೊಡ್ಡ ಭಂಡಾರ ಉರಿಯಲೂ ಸಮಯ ಬೇಕು
ದೆವ್ವಗಳಿಗೆ ಅಸಹನೆ ಒಂದೇ ಒಂದು ಹಾಳೆಯನ್ನೂ ಬಿಡದೆ
ಉರಿಸಿದರೇ ತೃಪ್ತಿ
ಕವಿಗಳು ಕಲಾವಿದರು ವಿಜ್ಞಾನಿಗಳೀಗ ಭಸ್ಮೀಭೂತ ನಾಮಿಕರು ಅನಾಮಿಕರು
ಈ ಭೂರಿ ದಹನದಿಂದ ಲೋಕ ಚೇತರಿಸಿಕೊಳ್ಳುವುದಕ್ಕೆ ಇನ್ನು
ಅದೆಷ್ಟೋ ಕಾಲ ಬೇಕು ಆದರೂ ಕೊಳ್ಳಿ ದೆವ್ವಗಳು ನಾಶವಾಗುವುದಿಲ್ಲ ಯಾವತ್ತಿಗೂ
ಅವಕ್ಕೀಗ ಇರುಳ ಆಶ್ರಯ ಬೇಡ ಹಾಡು ಹಗಲೇ ಸುತ್ತಾಡುತ್ತವೆ
ಬೆಂಕಿ ಕಾಣುವುದಿಲ್ಲ ಆದರೂ ಬೆಂಕಿಯಿದೆ
ತೂಕಡಿಸುವ ಓದುಗರ ಮೈಮನಸು ನುಗ್ಗಿ
ತೀರಿಸಿಕೊಳ್ಳಲು ತಮ್ಮ ಕಾಲಾಂತರದ ಹಗೆ
ವೃದ್ಧ ವಿದ್ವಾಂಸನಿಗದು ಗೊತ್ತಿದೆಯೇ ಇಷ್ಟೊಂದು ಓದುತ್ತ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...