Home / ಕಥೆ / ಕಿರು ಕಥೆ / ಸಾಧು ಕೇಳಿದ್ದು

ಸಾಧು ಕೇಳಿದ್ದು

ಒಮ್ಮೆ ಸಾಧು, ಪೀಠದಲ್ಲಿ ವಿರಮಿಸುತ್ತಾ ಶಿಷ್ಯ-ಸತ್ಯನಾಥನನ್ನು ಕರೆದು- “ನನಗೆ ಬೇಕಾದುದು ತಂದು ಕೊಡುವಿಯಾ?” ಎಂದು ಕೇಳಿದರು.

ಮರು ಪ್ರಶ್ನೆ ಕೇಳದೆ ಶಿಷ್ಯ ಅವರ ದಂಡವನ್ನು ತಂದು ಕೊಟ್ಟ.

ಸಾಧು ದಂಡವನ್ನು ಬದಿಗಿರಿಸಿ, “ಸತ್ಯನಾಥ ನನಗೆ ಬೇಕಾದುದು ತಂದುಕೊಡಯ್ತಾ?” ಎಂದರು.

ಮತ್ತೆ ಸತ್ಯನಾಥ ಮರುಮಾತನಾಡದೆ ಕಮಂಡಲವನ್ನು ತಂದು ಕೊಟ್ಟ.

“ಸತ್ಯ! ನನಗೆ ಬೇಕಾದುದು ತಂದುಕೊಡಲು ಹೇಳಿದೆ” ಎಂದು ಮತ್ತೆ ಸಾಧು ಹೇಳಿದ.

ಸತ್ಯನಾಥ ಈ ಬಾರಿ ಅವರ ಕನ್ನಡಕವನ್ನು ತೆಗೆದುಕೊಂಡು ಹೋಗಿ ಕೊಟ್ಟ.

“ನೀನು ಇಷ್ಟು ದಿನ ನನ್ನೊಡನೆ ಇದ್ದು ನಿನಗೆ ಅರ್ಥವಾಗಲಿಲ್ಲವೇ? ನನಗೆ ಬೇಕಾದುದು ‘ಸತ್ಯ’ ಅದನ್ನು ತೆಗೆದುಕೊಂಡು ಬಾ”, ಎಂದೆ ಎಂದರು.

ಬುದ್ದಿಮತಿಯಾದ ಶಿಷ್ಯ ನಮ್ರನಾಗಿ “ನಾನು ‘ಸತ್ಯ’ವಾಗಿ ನಿಮ್ಮ ದಂಡ, ಕಮಂಡಲ, ಕನ್ನಡಕ ತಂದುಕೊಟ್ಟಿದ್ದೇನೆ. ಸುಳ್ಳನ್ನು ತಂದು ಕೊಟ್ಟಿಲ್ಲ. ಇವು ನಿಮ್ಮೆದುರಿಗೆ ಇರುವ `ಸತ್ಯ ವಲ್ಲವೇ?” ಎಂದ.

“ಭೇಷ್! ಸತ್ಯನಾಥ” ಎಂದು ಬೆನ್ನು ತಟ್ಟಿದರು, ಸಾಧು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...